Monday, September 20, 2010

ನರೇಗ ಬದಲು ಫೀಡ್ ಎಂಬ ಕಾರ್ಯಕ್ರಮ ಜಾರಿಗೆ ತನ್ನಿ


18-09-2010ರ `ಸಂಯುಕ್ತ ಕರ್ನಾಟಕ'ದಲ್ಲಿ ನನ್ನ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ.
ನರೇಗ ಬದಲು ಫೀಡ್ ಎಂಬ ಕಾರ್ಯಕ್ರಮ ಜಾರಿಗೆ ತನ್ನಿ
ಡಾ.ಮಧುಸೀತಪ್ಪ

ಪರಿಸರ ವಿಜ್ಞಾನಿಗಳ ಪ್ರಕಾರ ಇಂಗಾಲದ ಡೈ ಆಕ್ಸೈಡ್ ಹಾಗೂ ಹಸಿರು ಮನೆ ಅನಿಲಗಳು ತಡೆಯಿಲ್ಲದೆ ಹೆಚ್ಚುವರಿಯಾದರೆ ಧೀರ್ಘಾವದಿ ಸರಾಸರಿ ಜಾಗತಿಕ ತಾಪಮಾನ ೧೪ಲಿ ಸೆ.ನಿಂದ ೨೦೯೯ರ ವೇಳೆಗೆ ೨೦.೧ಲಿ ಸೆ.ಗೆ ಹೆಚ್ಚಲಿದೆ. ೧೭೯೦ ಹಾಗೂ ೨೦೧೦ರ ಅವಧಿಯಲ್ಲಿ ಪರಿಸರದಲ್ಲಿ ಇಂಗಾಲ ಶೇ. ೩೩ರಷ್ಟು ಹಾಗೂ ಮಿಥೇನ್ ಅನಿಲ ಶೇ. ೧೪೯ರಷ್ಟು ಹೆಚ್ಚಿದೆ. ಹಸಿರು ಮನೆ ಅನಿಲಗಳಲ್ಲಿ ಇಂಗಾಲವಲ್ಲದೆ ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಹೈಡ್ರೋಫ್ಲೂರೊ ಕಾರ್ಬನ್ ಅನಿಲಗಳಿವೆ. ಅನಿಯಂತ್ರಿತ ಕೈಗಾರಿಕೆ, ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ವಿದ್ಯುತ್ ಉತ್ಪಾದನೆ, ಹಳೆ ತಂತ್ರಜ್ಞಾನದಿಂದ ನಡೆಯುವ ಕೈಗಾರಿಕೆಗಳಿಂದ ಹಾಗೂ ಸಾರಿಗೆ ವಾಹನಗಳಿಂದ (ವಿಮಾನ ಹಾಗೂ ಹಡಗುಗಳು), ರಾಸಾಯನಿಕ ಗೊಬ್ಬರಗಳ ಬಳಕೆಯಿಂದ, ಅವೈಜ್ಞಾನಿಕ ವ್ಯವಸಾಯದಿಂದ, ಕೊಳಚೆ ನಿರ್ಮೂಲನದಲ್ಲಿರುವ ಅವ್ಯವಸ್ಥೆಯಿಂದ ಹಸಿರು ಮನೆ ಅನಿಲಗಳ ಅಂಶ ಹೆಚ್ಚುತ್ತಿದೆ. ಪರಿಸರದಲ್ಲಿರುವ ಶೇ. ೮೦ರಷ್ಟು ಇಂಗಾಲ ಪಳೆಯುಳಿಕೆ ಇಂಧನಗಳ ಬಳಕೆಯಿಂದ ಬಂದರೆ ಇನ್ನು ಶೇ. ೨೦ರಷ್ಟು ಅರಣ್ಯ ನಾಶದಿಂದ ಸೇರುತ್ತಿದೆ. ಪರಿಸರದಲ್ಲಿ ಶೇಖರವಾಗುವ ಈ ಅನಿಲಗಳು ಇನ್‌ಫ್ರಾರೆಡ್ ಕಿರಣಗಳನ್ನು ಭೂಮಿಯಲ್ಲಿ ಹಿಡಿದಿಡುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದು ಹೆಚ್ಚಾಗುವುದರಿಂದ ಸಮುದ್ರದ ಮಟ್ಟ ಏರುವುದಲ್ಲದೆ, ಹಿಮಗಲ್ಲುಗಳು ಕರಗಿ ಬರಗಾಲ ಹಾಗು ಪ್ರವಾಹಗಳು ಸಂಭವಿಸಲಿವೆ. ಮಾರ್ಚ ೨೦೧೦ರ ಜಾಗತಿಕ ತಾಪಮಾನ ೧೪.೫೪ ಡಿಗ್ರಿ ಸೆ., ಅಂದರೆ ಕಳೆದ ೧೩೦ ವರ್ಷಗಳ ಇತಿಹಾಸದಲ್ಲಿ ಅತ್ಯಂತ ಬಿಸಿಯಾದ ಮಾರ್ಚ್ ತಿಂಗಳು ಎಂದು ದಾಖಲೆ ಮಾಡಿದೆ. ಡಿಸೆಂಬರ್ ೨೦೦೯ರ ಕೋಪನ್‌ಹೇಗನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸರ ಸಮಾವೇಶದಲ್ಲಿ ಭಾಗವಹಿಸಿದ್ದ ರಾಷ್ಟ್ರಗಳು ಜಾಗತಿಕ ತಾಪಮಾನ ೨೦೯೯ರ ವೇಳೆಗೆ ೨ ಡಿಗ್ರಿ ಸೆ.ಗಿಂತ ಹೆಚ್ಚಾಗದೆ ಇರುವಂತೆ ನಿರ್ಣಯವನ್ನು ಅಂಗೀಕರಿಸಿತು. ವಿಮರ್ಶಕರ ಪ್ರಕಾರ ಈ ಸಮಾವೇಶ ಅಮೆರಿಕ ಹಾಗೂ ಚೀನಾ ದೇಶಗಳ ಸಂಕುಚಿತ ಮನೋಭಾವದಿಂದ ಪರಿಸರಕ್ಕೆ ಧಕ್ಕೆ ತರುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಕಾನೂನನ್ನು ಜಾರಿಗೆ ತರಲು ವಿಫಲವಾದರೂ, ಭಾಗವಹಿಸಿದ್ದ ಎಲ್ಲ ರಾಷ್ಟ್ರಗಳು ಈ ಅನಿಲಗಳನ್ನು ನಿಯಂತ್ರಿಸುವ ಬಗ್ಗೆ ತಮ್ಮ ದೇಶಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ನೀಡಿರುವುದು ಸ್ವಾಗತಾರ್ಹ.
೫ ವರ್ಷಗಳಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೇ.೨೬ರಷ್ಟು ತಗ್ಗಿಸುವುದಾಗಿ ಭಾರತ ಜನವರಿ ೨೦೧೦ರಲ್ಲಿ ವಿಶ್ವಸಂಸ್ಥೆಗೆ ಭರವಸೆ ನೀಡಿದೆ. ಹಾಗಾಗಿ ನಾವು ಇಂಗಾಲವನ್ನು ತಗ್ಗಿಸುವ ವಿಧಾನಗಳನ್ನು ಅನುಸರಿಸಬೇಕಾಗಿದೆ. ಇಂಗಾಲವನ್ನು ನಿಯಂತ್ರಿಸಲು ಇರುವ ವಿಧಾನಗಳೆಂದರೆ ಕಾರ್ಬನ್ ಪ್ರಾಜೆಕ್ಟ್ಸ್, ಕಾರ್ಬನ್ ಕ್ರೆಡಿಟ್ಸ್, ಕಾರ್ಬನ್ ಫಾರ್ಮಿಂಗ್ ಹಾಗು ಕಾರ್ಬನ್ ಟ್ಯಾಕ್ಸಿಂಗ್.

ಕಾರ್ಬನ್ ಪ್ರಾಜೆಕ್ಟ್ಸ್ - ನಮ್ಮ ದೇಶದಲ್ಲಿ ಪಳೆಯುಳಿಕೆ ಇಂಧನಗಳಿಂದ ಶೇ.೬೮ರಷ್ಟು ವಿದ್ಯುತ್ ತಯಾರಾಗುತ್ತಿದ್ದರೆ, ಜಲಶಕ್ತಿಯಿಂದ ಶೇ.೨೧, ನವೀಕರಿಸಬಹುದಾದ ಶಕ್ತಿಗಳಿಂದ ಶೇ.೭ ಹಾಗು ಅಣು ಶಕ್ತಿಯಿಂದ ಶೇ.೪ ವಿದ್ಯುತ್ ತಯಾರಿಸಲಾಗುತ್ತಿದೆ. ತಯಾರಾಗುವ ವಿದ್ಯುತ್‌ನಲ್ಲಿ ಶೇ.೩೦ರಿಂದ ಶೇ.೪೫ ವಿದ್ಯುತ್ ಸೋರಿಕೆಯಿಂದ ಅಥವಾ ವಿದ್ಯುತ್ ಕಳ್ಳ ಸಾಗಾಣಿಕೆಯಿಂದ ನಷ್ಟವಾಗುತ್ತಿದೆ. ಪ್ರಸ್ತುತ ೧೪೯,೦೦೦ ಮೆ.ವ್ಯಾ. ವಿದ್ಯುತ್ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿದ್ದರೆ ೨೦೩೦ರ ವೇಳೆಗೆ ೯೫೦,೦೦೦ ಮೆ.ವ್ಯಾ. ವಿದ್ಯುತ್ ಅವಶ್ಯಕತೆಯಿದೆ. ಇಂಗಾಲವನ್ನು ಕಡಿಮೆಗೊಳಿಸಬೇಕಾದರೆ ಅಥವಾ ಕಾರ್ಬನ್ ಕ್ರೆಡಿಟ್ ಅಂತಾರಾಷ್ಟ್ರೀಯ ಕಾನೂನು ಜಾರಿಯಾದಲ್ಲಿ ನಮ್ಮ ದೇಶದ ಪ್ರಗತಿಯನ್ನು ಕಾಯ್ದುಕೊಳ್ಳಲು ನಾವು ಯಥೇಚ್ಛವಾಗಿ ದೊರೆಯುವ ಸೌರಶಕ್ತಿ, ವಾಯುಶಕ್ತಿ, ಜಲಶಕ್ತಿ ಹಾಗೂ ಜೈವಿಕ‌ಇಂಧನಗಳನ್ನು (ಬಯೋಡೀಸೆಲ್) ಬಳಸಿ ಹೆಚ್ಚು ವಿದ್ಯುತ್ ತಯಾರಿಸಲು ಪ್ರೋತ್ಸಾಹಿಸಬೇಕು. ರಾಷ್ಟ್ರದ ಪ್ರತಿಯೊಂದು ದಾರಿ ದೀಪವನ್ನು ಸೌರಶಕ್ತಿಯಿಂದಲೇ ಉರಿಸಬಹುದು. ಗ್ರಾಮಗಳಲ್ಲಿ ಬಯೋಗ್ಯಾಸನ್ನು ಹಾಗೂ ನಗರಗಳಲ್ಲಿರುವ ಕೊಳಚೆ ನೀರಿನಲ್ಲಿರುವ ಮಿಥೇನ್ ಅನಿಲದಿಂದ ವಿದ್ಯುತ್ತನ್ನು ತಯಾರಿಸಬೇಕು. ಅಲ್ಲದೆ ಅಣು ಒಪ್ಪಂದದಂತೆ ಇನ್ನು ೧೦ ವರ್ಷಗಳಲ್ಲಿ ಉತ್ಪಾದಿಸುತ್ತಿರುವ ಅಣುವಿದ್ಯುತ್ತನ್ನು ಶೇ.೧೦ರಿಂದ ಶೇ.೨೦ಕ್ಕೆ ಏರಿಸಬೇಕು. ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ಆದಷ್ಟು ಕಡಿಮೆ ವಿದ್ಯುತ್ತನ್ನು ಉತ್ಪಾದಿಸಬೇಕು. ಜತ್ರೋಪ ಸಸಿಗಳನ್ನು ಬೆಳೆಸಲು ಪ್ರೋತ್ಸಾಹಿಸಿ ಬಯೊಡೀಸಲ್ ತಯಾರಿಸುವುದಲ್ಲದೆ ಕಾರ್ಬನ್ ಕ್ರೆಡಿಟ್ ಸಹ ಪಡೆಯಬಹುದು.
ಕಾರ್ಬನ್ ಕ್ರೆಡಿಟ್ಸ್- ಹಳೆಯ ತಂತ್ರಜ್ಞಾನದಿಂದ ನಡೆಯುತ್ತಿರುವ ಕೈಗಾರಿಕೆಗಳಿಗೆ ಸರ್ಕಾರ ಅನುದಾನ ನೀಡಿ ಅವುಗಳನ್ನು `ಇಂಗಾಲ ಸ್ನೇಹಿ' ಕೈಗಾರಿಕೆಗಳಾಗಿ ಪರಿವರ್ತಿಸಬೇಕು, ಪ್ರತಿ ಕೈಗಾರಿಕೆಗೆ ಇಂಗಾಲದ ಮಿತಿಯನ್ನು ಜಾರಿಗೆ ತರಬೇಕು. ಇದನ್ನು ತಲುಪಲಾರದಂತಹ ಕೈಗಾರಿಕೆಗಳು ಗ್ರಾಮಾಂತರ ಪ್ರದೇಶಗಳನ್ನು ಹಾಗೂ ಅರಣ್ಯ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಮರಗಳನ್ನು ಬೆಳೆಸುವುದರೊಂದಿಗೆ ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯನ್ನು ನಿಭಾಯಿಸಬೇಕು.

ಕಾರ್ಬನ್ ಟ್ಯಾಕ್ಸಿಂಗ್- ಖಾಸಗಿ ಸಾರಿಗೆ, ಸರ್ಕಾರಿ ಸಾರಿಗೆ, ವಿಮಾನ ಸಾರಿಗೆ ಕಂಪನಿಗಳ ಮೇಲೆ ಇಂಗಾಲ ತೆರಿಗೆಯನ್ನು ವಿಧಿಸಬೇಕು. ಅನಗತ್ಯವಾಗಿ ಹೆಚ್ಚು ಇಂಗಾಲವನ್ನು ಹೊರಸೂಸುವ ಎಲ್ಲ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು. ರಿಯಲ್ ಎಸ್ಟೇಟ್ ಕಂಪನಿಗಳು ಕಟ್ಟುವ ಪ್ರತಿ ಚದರ ಅಡಿಗೆ ಇಂಗಾಲ ತೆರಿಗೆ ವಿಧಿಸಬೇಕು. ನಗರಗಳಲ್ಲಿರುವ ಎಲ್ಲ ಕಛೇರಿಗಳು ಶಕ್ತಿ ಸಮರ್ಥವಾಗಿ (ಎನರ್ಜಿ ಎಫಿಷಿಯೆಂಟ್) ಪರಿವರ್ತನೆಯಾಗಬೇಕು ಇಲ್ಲದಿದ್ದಲ್ಲಿ ಅವು ಇಂಗಾಲ ತೆರಿಗೆಯನ್ನು ಪಾವತಿಮಾಡಬೇಕು.

ಕಾರ್ಬನ್ ಫಾರ್ಮಿಂಗ್- ನಮ್ಮ ದೇಶದ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಮಾಡುವಲ್ಲಿ ನಮ್ಮ ರೈತರದು ಮಹತ್ತರ ಪಾತ್ರವಿದೆ. ಪ್ರತಿಯೊಬ್ಬ ರೈತನಿಗೆ ತಮ್ಮ ಜಮೀನಿನಲ್ಲಿ ಮರಗಳನ್ನು ಬೆಳೆಸಲು ಸರ್ಕಾರ ಹಣವನ್ನು ಕೊಡಬೇಕು- ಅದು ಫಸಲು ಕೊಡುವ ಮಾವಿನ ಮರವಾಗಿರಬಹುದು ಅಥವಾ ತಂಪು ಕೊಡುವ ಹೊಂಗೆ ಮರವಾಗಿರಬಹುದು. ಪ್ರತಿಯೊಂದು ಮರಕ್ಕೆ ವರ್ಷಕ್ಕೆ ಇಂತಿಷ್ಟು ಬಾಡಿಗೆಯೆಂದು ಸರ್ಕಾರ ಪಾವತಿಸಬೇಕು. ಯಾವುದೇ ಮರ ಕಡಿದರೂ ಜಾಮೀನು ನೀಡಲಾಗದ ಅರೆಸ್ಟ್ ವಾರೆಂಟ್ ಜಾರಿಗೊಳಿಸಬೇಕು. ಇಂದಿಗೂ ಶೇ.೯೦ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ನೀರು ಕಾಯಿಸಲು ಹಾಗು ಅಡಿಗೆ ಮಾಡಲು ಸೌದೆಯನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಮರಗಳು ನಾಶವಾಗುವುದಲ್ಲದೆ ಹೊಗೆಯಿಂದ ಇಂಗಾಲವು ಹೊರಸೂಸುತ್ತದೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೌರ ಒಲೆಗಳನ್ನು ಹಾಗೂ ಅಡಿಗೆಗೆ ಬಯೋಗ್ಯಾಸ್ ಬಳಕೆಯನ್ನು ಪ್ರೋತ್ಸಾಹಿಸಬೇಕು. ಇಂಗಾಲವನ್ನು ಭೂಮಿಯಲ್ಲಿ ಹಿಡಿದಿಡುವ ವ್ಯವಸಾಯ ಪದ್ಧತಿಗಳ ಬಗ್ಗೆ ರೈತರಿಗೆ ವಿವರಿಸಿ ಹೇಳಬೇಕು. ಈ ಪದ್ಧತಿಗಳನ್ನು ಅನುಸರಿಸುವುದರಿಂದ ದೊರಕುವ ವಿಶ್ವಸಂಸ್ಥೆಯ ಸಬ್ಸಿಡಿಯನ್ನು ರೈತರಿಗೆ ತಲುಪಿಸಬೇಕು. ೪೦೦೦ ಕ್ಯೂಬಿಕ್ ಕಿ.ಮಿ.ಗಳಷ್ಟು ಮಳೆ ನೀರು ನಮ್ಮ ದೇಶದಲ್ಲಿ ಆಗುತ್ತಿದೆ. ಆದರೂ ನಾವು ವ್ಯವಸಾಯಕ್ಕೆ, ಕೈಗಾರಿಕೆಗೆ ಹಾಗೂ ಕುಡಿಯುವ ನೀರಿಗೆ ಇನ್ನೂ ಅಂರ್ತಜಲವನ್ನು ಅವಲಂಬಿಸಿದ್ದೇವೆ. ನಮ್ಮ ದೇಶದ ಮೇಲೆ ಬೀಳುವ ಸೌರ ಶಕ್ತಿಯಿಂದ ಇಡಿ ಏಶಿಯಾ ಖಂಡದ ಎಲ್ಲ ದೀಪಗಳನ್ನು ಉರಿಸಬಹುದಾದರೂ ನಮ್ಮ ದೇಶದಲ್ಲಿ ೨೪ ಗಂಟೆ ವಿದ್ಯುತ್ ಪೂರೈಕೆಯಿಲ್ಲ. ಪ್ರಪಂಚದ ಅರ್ಧ ಜನಸಂಖ್ಯೆಗೆ ಆಹಾರ ಬೆಳೆಯುವಷ್ಟು ಫಲವತ್ತಾದ ಭೂಮಿ, ಯಥೇಚ್ಚವಾದ ನೀರಿದ್ದರೂ ವಿಯೆಟ್ನಾಮ್, ಮಲೇಶಿಯಾದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇಡೀ ವಿಶ್ವಕ್ಕೆ ಸಾಕಾಗುವಷ್ಟು ನುರಿತ ರೈತರು, ಕಾರ್ಮಿಕರು, ಇಂಜಿನಿಯರುಗಳಿದ್ದರೂ ಇವರಿಗೆ ಉದ್ಯೋಗ ಕೊಡಲು ನಮಗಾಗುತ್ತಿಲ್ಲ. ೭೫ ಲಕ್ಷಕ್ಕೂ ಹೆಚ್ಚು ಕೋಟಿ ರೂಗಳು ದೇಶದ ಹೊರಗೆ ಸ್ವಿಸ್ ಬ್ಯಾಂಕುಗಳಲ್ಲಿ ಭೂಗತವಾಗಿದ್ದರೆ, ೯೦ ಲಕ್ಷ ಕೋಟಿ ರೂಗಳು ನಮ್ಮ ದೇಶದಲ್ಲಿ ಕಪ್ಪು ಹಣದ ರೂಪದಲ್ಲಿ ಭೂಗತವಾಗಿದೆ. ಇಷ್ಟು ಹಣವಿದ್ದರೂ ನಾವು ಬೇರೆ ದೇಶಗಳಿಂದ ಸಾಲ ತರುವುದು ತಪ್ಪಿಲ್ಲ. ನಮ್ಮಲ್ಲಿರುವ ಈ ಸಂಪತ್ತನ್ನೂ ಉಪಯೋಗಿಸಿಕೊಳ್ಳಲು ಯೋಜನೆಗಳನ್ನು ರೂಪಿಸಬೇಕು. ಈಗಿರುವ ನರೇಗಾ (NREGA), ಆಹಾರ ಸುರಕ್ಷತೆ ಕಾರ್ಯಕ್ರಮಗಳ ಜೊತೆ ಇಂಗಾಲ ತಗ್ಗಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಅಥವಾ ಫೀಡ್ (FEED) ಎಂಬ ಕಾರ್ಯಕ್ರಮದ ಅಡಿಯಲ್ಲಿ ಈ ಮೂರು ಕಾರ್ಯಕ್ರಮಗಳನ್ನು ಜೋಡಿಸಿ ಆಹಾರ (ಫುಡ್), ಶಕ್ತಿ (ಎನರ್ಜಿ), ಉದ್ಯೋಗ (ಎಂಪ್ಲಾಯ್ಮೆಂಟ್) ಪರಿಸರ (ಎನವಿರಾನ್‌ಮೆಂಟ್) ಮತ್ತು ಅಭಿವೃದ್ಧಿ (ಡೆವೆಲಪಮೆಂಟ್) ಕಾಯಕ್ರಮವನ್ನು ರೂಪಿಸಬಹುದು. ನರೇಗಾ ಕಾರ್ಯಕ್ರಮಕ್ಕೆ ಪ್ರತಿವರ್ಷ ೪೦,೦೦೦ ಕೋಟಿಗೂ ಹೆಚ್ಚು ಹಣ ಕೇಂದ್ರ ಸರ್ಕಾರ ವೆಚ್ಚಮಾಡುತ್ತಿದೆ. ಇದರಲ್ಲಿ ಶೇ.೪೦%ರಷ್ಟು ಹಣ ದುರುಪಯೋಗವಾಗುತ್ತಿದ್ದರೂ ಈ ಕಾರ್ಯಕ್ರಮಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಾಣಬಹುದುಬಹುತೇಕ ಇಂಗಾಲವು ನಗರಗಳಲ್ಲಿ ಹೊರಸೂಸಿದರೆ ಅದನ್ನು ನಿಯಂತ್ರಿಸುವ ಶಕ್ತಿ ಗ್ರಾಮೀಣ ಪ್ರದೇಶಗಳಲ್ಲಿದೆ. ಇನ್ನು ಮುಂದೆ ಇಂಗಾಲ ಮಿತಿ ಅಂತರಾಷ್ಟ್ರೀಯ ಕಾನೂನು ಜಾರಿಗೆ ಬರುವುದರಿಂದ ನಾವು ಇಂಗಾಲ ಮಿತಿಯ ಬಗ್ಗೆ ಹೆಚ್ಚು ಗಮನಹರಿಸಬೇಕು.

ಇಂಗಾಲ ಮಿತಿಗೊಳಸದಿದ್ದರೆ ನಮ್ಮ ದೇಶದ ಕೈಗಾರಿಕೋತ್ಪಾದನೆ ಮತ್ತು ಆರ್ಥಿಕತೆಯ ಮೇಲೆ ಬಾರಿ ಪೆಟ್ಟಾಗುತ್ತದೆ. ನಮ್ಮ ದೇಶವನ್ನು ಇಂಗಾಲ ಹಾಗೂ ಪರಿಸರ ಸ್ನೇಹಿಯನ್ನಾಗಿ ಮಾಡಲು ಹೆಚ್ಚು ಬಂಡವಾಳ ಹೂಡಬೇಕಾಗುತ್ತದೆ. ನಮ್ಮಲ್ಲಿರುವ ಸೌರ, ವಾಯು, ಜಲ ಶಕ್ತಿಗಳನ್ನೂ, ಅರಣ್ಯ, ಮಳೆನೀರು, ನುರಿತ ಕಾರ್ಮಿಕ ವರ್ಗವನ್ನೂ, ಫಲವತ್ತಾದ ಭೂಮಿ, ಕಪ್ಪು ಹಣವನ್ನೊಳಗೊಂಡ `ಫೀಡ್' ಎಂಬ ಕಾರ್ಯಕ್ರಮ ರಚನೆಮಾಡಲು ಕೇಂದ್ರ ಸರ್ಕಾರ ಚಿಂತಿಸಬೇಕು. ಸ್ವಿಸ್‌ಬ್ಯಾಂಕ್‌ನಲ್ಲಿರುವ ಹಣ ತರಲಾಗದಿದ್ದರೂ, ನಮ್ಮ ದೇಶದಲ್ಲಿ ಭೂಗತವಾಗಿರುವ ೯೦ ಲಕ್ಷ ಕೋಟಿಗೂ ಹೆಚ್ಚು ಕಪ್ಪು ಹಣವನ್ನು ಫೀಡ್ ಕಾರ್ಯಕ್ರಮದ ಹೆಸರಲ್ಲಿ ತೆರಿಗೆ ವಿನಾಯಿತಿ ಬಾಂಡ್ಸ್ ಮಾಡಿ ಹೊರತಂದರೆ ಈ ಕಾರ್ಯಕ್ರಮಕ್ಕೆ ಬೇಕಾಗುವ ಹಣ ದೊರೆಯುವುದಲ್ಲದೆ, ರಾಷ್ಟ್ರೀಯ ನದಿ ಜೋಡಣೆಯಂತಹ ಯೋಜನೆಗಳಿಗೂ ಹಣ ದೊರೆಯುವುದು. ನರೇಗಾ ಕಾರ್ಯಕ್ರಮದಲ್ಲಿ ದುರುಪಯೋಗವಾಗಿರುವ ಅನುಭವದಿಂದ ಪಾಠ ಕಲಿತು ಹಣ ಸೋರುವಿಕೆಯನ್ನು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಫೀಡ್ ಕಾರ್ಯಕ್ರಮ ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಫೀಡ್ ಮಾಡದೆ ದೇಶದ ಅಭಿವೃದ್ಧಿಗೆ ಫೀಡ್ ಮಾಡುವಂತೆ ಎಲ್ಲ ಮುನ್ನೆಚ್ಚರಿಕೆಯನ್ನು ವಹಿಸಬೇಕು.

Thursday, August 12, 2010

ಬರಪೀಡಿತ ಜಿಲ್ಲೆಗಳಿಗೆ ಬೇಕು ನೇತ್ರಾವತಿಯ ಬೈಪಾಸ್ ಸರ್ಜರಿ

ನನ್ನ ಈ ಲೇಖನ ಇಂದಿನ (12/08/2010) `ಸಂಯುಕ್ತ ಕರ್ನಾಟಕ'ದಲ್ಲಿ ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ:

೧೮೯೫ರಲ್ಲಿ ಬ್ರಿಟಿಷರು ಇಂದಿನ ಕೇರಳದಲ್ಲಿರುವ ಪಶ್ಚಿಮಾಭಿಮುಖವಾಗಿ ಹರಿಯುತ್ತಿದ್ದ ಪೆರಿಯಾರ್ ನದಿಗೆ ಪಶ್ಚಿಮಘಟ್ಟಗಳಲ್ಲಿ ಅಣೆಕಟ್ಟು ಕಟ್ಟಿ ಕಾಲುವೆ ಮಾಡಿ ಪೂರ್ವಭಿಮುಖವಾಗಿ ಹರಿಸಿ ತಮಿಳುನಾಡಿನ ಬರಪೀಡಿತ ಜಿಲ್ಲೆಗಳಿಗೆ ಹರಿಸುವುದಲ್ಲದೆ ವೇಗೈ ನದಿಗೆ ಜೋಡಣೆ ಮಾಡಿದರು, ಈ ಯೋಜನೆ ಇಂದಿಗೂ ಯಶಸ್ವಿಯಾಗಿ ತಮಿಳುನಾಡಿನ ಬರಪೀಡಿತ ಜಿಲ್ಲೆಗಳಿಗೆ ನೀರುಣಿಸುತ್ತಿದೆ. ಅದೆ ರೀತಿ ಸ್ವಾತಂತ್ರ ಬಂದ ನಂತರ ಭಾರತದ ಮೂಲಕ ಪಾಕಿಸ್ತಾನಕ್ಕೆ ಹರಿಯುವ ಇಂಡಸ್ ನದಿಯ ಹಂಚಿಕೆ ವಿಚಾರದಲ್ಲಿ ವಿವಾದವಾದಾಗ ಪೂರ್ವದ ಉಪನದಿಗಳನ್ನು ಭಾರತಕ್ಕೆ ಕೊಟ್ಟು ಪಶ್ಚಿಮದ ಉಪನದಿಗಳನ್ನು ಪಾಕಿಸ್ತಾನಕ್ಕೆ ನೀಡಲಾಯಿತು, ಹಾಗೂ ಪೂರ್ವ ಉಪನದಿಗಳಿಂದ ನೀರು ಪಡೆಯುತ್ತಿದ್ದ ಪಾಕಿಸ್ತಾನದ ಪ್ರದೇಶಕ್ಕೆ ಅಮೇರಿಕಾ, ಇಂಗ್ಲೆಂಡ್ ಹಾಗು ವಿಶ್ವ ಬ್ಯಾಂಕಿನ ನೆರವನ್ನು ಕೊಟ್ಟು ಪಶ್ಚಿಮದ ಉಪನದಿಗಳ ಹೆಚ್ಚುವರಿ ನೀರನ್ನು ಪೂರ್ವಕ್ಕೆ ತಿರುಗಿಸಲಾಯಿತು. ಚೀನಾ ದೇಶದಲ್ಲಿ ದಕ್ಷಿಣದ ಯಾಂಗ್ಸೆ ನದಿಯನ್ನು ಉತ್ತರದ ಹಳದಿ ನದಿಗೆ ಜೋಡಿಸಲಾಗಿದೆ. ಇದಲ್ಲದೆ ಹಿಮಾಲಯದ ಬಯಾಂಕ ಪರ್ವತಗಳಲ್ಲಿ ಅಣ್ವಸ್ತ್ರಗಳಿಂದ ಕಾಲುವೆ ಕೊರೆದು ಚೈನಾದ ಮರಳುಗಾಡಿಗೆ ಬ್ರಹ್ಮಪುತ್ರ ನದಿಯನ್ನು ಹರಿಸುವ ಯೋಜನೆ ಸಿದ್ಧಗೊಂಡಿದೆ. ಇದಲ್ಲದೆ ವಿಶ್ವದಲ್ಲಿ ಅನೇಕ ನದಿ ತಿರುವು ಯೋಜನೆಗಳು ಅನುಷ್ಠಾನವಾಗಿವೆ. ಆಗಿನ ಎನ್.ಡಿ.ಎ. ಸರ್ಕಾರ ಮಹತ್ತರ ರಾಷ್ಟ್ರೀಯ ನದಿ ಜೋಡಣೆಯ ಕನಸನ್ನು ಕಂಡಿತ್ತು. ಗಂಗಾ ಹಾಗೂ ಬ್ರಹ್ಮಪುತ್ರ ನದಿಗಳು ಅಂತರರಾಷ್ಟ್ರೀಯ ನದಿಗಳಾಗಿರುವುದರಿಂದ ಬೇರೆ ದೇಶಗಳ ಅಕ್ಷೇಪಣೆ ಬರಬಹುದು. ಆದರೆ ಮಹಾನದಿ-ಗೋದಾವರಿಯಿಂದ ಪ್ರತಿವರ್ಷ ಸಮುದ್ರಕ್ಕೆ ಹರಿಯುವ ೯೩೦ ಟಿ.ಎಂ.ಸಿ.ಗೂ ಹೆಚ್ಚು ನೀರನ್ನು ಕೃಷ್ಣಾ -ಪೆನ್ನಾರ್-ಪಾಲಾರ್-ಕಾವೇರಿ-ಗುಂಡಾರ್-ವೇಗೈ ನದಿಗಳಿಗೆ ಜೋಡಿಸಿದರೆ ಆಂಧ್ರ-ಕರ್ನಾಟಕ-ತಮಿಳುನಾಡಿಗೆ ಉಪಯೋಗವಾಗಲಿದೆ. ಇದರಿಂದ ಕಾವೇರಿ ಡೆಲ್ಟಾ ಪ್ರದೇಶಕ್ಕೆ ಹೆಚ್ಚು ನೀರು ದೊರೆತರೆ, ಕಾವೇರಿಯ ಮೇಲ್‌ಹರಿವಿನಲ್ಲಿರುವ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ನೀರೊದಗಿಸಿ, ಕಾವೇರಿ ವಿವಾದಕ್ಕೂ ತೆರೆಯೆಳೆಯಬಹುದು. ಪೆನಿನ್ಸೂಲಾರ್ ರಿವರ್ ಗ್ರಿಡ್ ಯೋಜನೆಯಲ್ಲಿ ಈ ನದಿಗಳಲ್ಲದೆ ನೇತ್ರಾವತಿ-ಹೇಮಾವತಿ ಜೋಡಣೆಯು ಒಂದು ಭಾಗವಾಗಿದೆ. ಆದರೆ ಪರಮಶಿವಯ್ಯನವರ ವರದಿಯಂತೆ ನೇತ್ರಾವತಿ ನದಿಯ ಜಲಾನಯನದ ಪ್ರದೇಶದಲ್ಲಿ ಮಳೆ ಕೊಯ್ಲು ಮಾಡಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ೪೦೦೦ದಿಂದ ೬೦೦೦ ಮಿ.ಮೀ. ಮಳೆಯಾಗುವ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಪೂರ್ವಕ್ಕೆ ಹರಿಸಿ, ಹೇಮಾವತಿಯಲ್ಲಿರುವ ಹೆಚ್ಚುವರಿ ನೀರಿಗೆ ಬೆರೆಸಿ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕೊಡಲಾಗುತ್ತದೆ. ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಅಣೆಕಟ್ಟನ್ನು ಕಟ್ಟುವುದಿಲ್ಲ ಹಾಗೂ ಪಶ್ಚಿಮ ಘಟ್ಟಗಳನ್ನು ಸೀಳುವ ಅವಶ್ಯಕತೆಯಿಲ್ಲ. ಮೋಹನ್ ಹೆಗಡೆಯವರು ಯೋಜನೆಯ ಬಗ್ಗೆ ಸರಿಯಾಗಿ ಅರಿತು, ಅವಶ್ಯಕತೆಯಿದ್ದರೆ ಪರಮಶಿವಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದರೆ ಅವರಿಗಿರುವ ಆತಂಕ ದೂರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಿತಿಯಾದ ರೀತಿಯಲ್ಲಿ ನದಿ ಜೋಡಣೆಗಳು ಯಶಸ್ವಿಯಾಗಿರುವ ಅನೇಕ ಉದಾಹರಣೆಗಳಿದ್ದರೆ, ದುರಾಸೆಯಿಂದ ಮಾಡಿರುವ ಅನೇಕ ನದಿ ಜೋಡಣೆಗಳು ವಿಫಲವಾಗಿರುವ ಅನೇಕ ಉದಾಹರಣೆಗಳಿವೆ. ಸಾವಿರಾರು ಚದರ ಕಿ.ಮೀ.ಗಳಷ್ಟು ನೀರು ನಮ್ಮ ದೇಶದಲ್ಲಿ ಸಮುದ್ರದ ಪಾಲಾಗುತ್ತಿದ್ದರೆ, ಆಫ್ರಿಕಾ ಖಂಡದ ಇಥಿಯೋಪಿಯದಂತಹ ರಾಷ್ಟ್ರಗಳಲ್ಲಿ ಭಾರತದ ಕಂಪೆನಿಗಳು ಕಡಿಮೆ ದರದಲ್ಲಿ ಆಹಾರ ಉತ್ಪಾದನೆಗಾಗಿ ಲಕ್ಷಾಂತರ ಹೆಕ್ಟೇರುಗಳಷ್ಟು ಜಮೀನನ್ನು ಖರೀದಿಸಿವೆ. ಶೇ.೯೦ರಷ್ಟು ಮಂದಿ ನಮ್ಮ ರಾಷ್ಟ್ರದಲ್ಲಿ ವ್ಯವಸಾಯ ಅವಲಂಬಿತರಾಗಿದ್ದರೂ ವ್ಯವಸಾಯಕ್ಕೆ ಬೇಕಿರುವ ನೀರೊನ್ನೊದಗಿಸದೆ ರಾಷ್ಟ್ರಕ್ಕೆ ಅಗತ್ಯವಿರುವ ಧವಸದಾನ್ಯಗಳನ್ನು ಬೆಳೆಯಲಿಕ್ಕಾಗದೆ, ವಿಯೆಟ್ನಾಮ್, ಮಲೇಶಿಯಾದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಭಾರತ ಎದುರಿಸುತ್ತಿದೆ. ಇನ್ನು ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಬನ್ ಕ್ರೆಡಿಟ್ ಸಹ ಜಾರಿಗೆ ಬರಲಿದೆ. ಅಂದರೆ ಪ್ರತಿ ದೇಶದಲ್ಲಿ ವಾಹನ ಹಾಗೂ ಕೈಗಾರಿಕೆಗಳಿಂದ ಭೂಮಿಗೆ ಉಗುಳುವ ಇಂಗಾಲವನ್ನು ಹೀರಲು ಮರಗಳನ್ನು ಬೆಳೆಸಬೇಕಾಗುತ್ತದೆ. ಆರ್ಥಿಕತೆಗೆ, ಆಹಾರ, ಕಾರ್ಬನ್ ಕ್ರೆಡಿಟ್, ಕೈಗಾರಿಕೆ, ವ್ಯವಸಾಯ ಹಾಗೂ ಮುಖ್ಯವಾಗಿ ಕುಡಿಯುವುದಕ್ಕೆ ನೀರು ಅತ್ಯವಶ್ಯಕ. ಆದುದರಿಂದ ನಾವು ನದಿಜೋಡಣೆ ಒಂದೇ ಅಲ್ಲದೆ, ನೀರನ್ನು ಸಂಗ್ರಹಿಸುವ ಹಾಗೂ ಉಪಯೋಗಿಸುವ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ನದಿಜೋಡಣೆಯ ಬಗ್ಗೆ ಮಾತನಾಡುವವರನ್ನು ಪರಿಸರವಾದಿಗಳು ಅಸ್ಪೃಶ್ಯರಂತೆ ನೋಡುವುದನ್ನು ಬಿಟ್ಟು ಪರಿಸರಕ್ಕೆ ಧಕ್ಕೆಯಾಗದಂತೆ ಈ ರೀತಿಯ ಯೋಜನೆಗಳನ್ನು ಅಳವಡಿಸಲು ಸಹಕರಿಸಬೇಕು. ಮೋಹನ್ ಹೆಗ್ಡೆಯವರು ಈ ಯೋಜನೆಗೆ ರಾಜಕೀಯ ಬಣ್ಣವನ್ನು ಬಳೆದು ಬರ ಪೀಡಿತ ಜಿಲ್ಲೆಗಳ ಜನರ ಬರೆಗಳಿಗೆ ಉಪ್ಪು ಸವರಿದ್ದಾರೆ. ಪರಮಶಿವಯ್ಯನವರ ನೇತ್ರಾವತಿ ಮಳೆ ಕೊಯ್ಲು ಬರಪೀಡಿತ ಜಿಲ್ಲೆಗಳಿಗೆ ಈ ಮುಂದಿನ ಕಾರಣಗಳಿಗಾಗಿ ಅವಶ್ಯಕವಿದೆ.
೪೪೦೦ ಮಿ.ಮೀ. ಮಳೆಯಾಗುವ ಕರಾವಳಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿರುವಾಗ ಸರಾಸರಿ ೬೭೪ ಮಿ.ಮೀ. ಮಳೆಯಾಗುವ ಬರಡು ಭೂಮಿಯಲ್ಲಿ ಮಳೆಗಾಲದಲ್ಲೂ ನೀರಿಗೆ ಪರದಾಡುವ ಪರಿಸ್ಥಿತಿ ಇದೆಯೆಂದರೆ ಆಶ್ಚರ್ಯವಿಲ್ಲ. ಸರ್ಕಾರದ ಅಂಕಿ ಅಂಶಗಳ ಅನ್ವಯ ಬರಪೀಡಿತ ಜಿಲ್ಲೆಗಳಲ್ಲಿ ೪೮೬ರಿಂದ ೭೦೦ ಮಿ.ಮೀ. ಮಳೆಯಾಗುತ್ತದೆ. ಕನಿಷ್ಠ ೫೦ ಮಿ.ಮೀ. ಮಳೆ ರಭಸವಾಗಿ ಮೂರು ಗಂಟೆ ಕಾಲ ಸುರಿದರೆ ಕೆರೆಗಳಿಗೆ ನೀರು ಬರುತ್ತದೆ. ಈ ಜಿಲ್ಲೆಗಳಲ್ಲಿ ವಾರ್ಷಿಕ ೧೭ರಿಂದ ೪೫ ದಿನಗಳು ಮಳೆಯಾಗುತ್ತದೆ. ಎರಡು ಗಂಟೆಗೂ ಹೆಚ್ಚು ಮಳೆಯಾಗುವ ದಿನಗಳು ತೀರ ವಿರಳ. ಮಳೆಯಾದರೂ ಈ ಬಿಸಿಲುನಾಡಿನಲ್ಲಿ ನೀರು ಆವಿಯಾಗುವುದರಿಂದ, ಭೂಮಿಗೆ ಜಿನುಗುವುದರಿಂದ ಹಾಗೂ ಅಂತರ್ಜಲಕ್ಕೆ ಹಿಂಗುವುದರಿಂದ ಕೆರೆಗಳಲ್ಲಿ ನೀರು ಕೆಲವು ತಿಂಗಳುಗಳಿಗಿಂತ ಹೆಚ್ಚು ನಿಲ್ಲಲಾರದು. ಸತತವಾಗಿ ಹಾಗು ನಿರ್ದಿಷ್ಟ ಕಾಲದಲ್ಲಿ ಮಳೆಯಾಗದ ಕಾರಣ ಹಾಗೂ ಮಳೆಯಾಗುವ ದಿನಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ಈ ಜಿಲ್ಲೆಗಳಲ್ಲಿ ಒಟ್ಟು ೧೫,೪೪೨ ಕೆರೆಗಳಿವೆ. ೨೦೦೬ರಲ್ಲಿ ಶೇ.೯೦ರಷ್ಟು ಕೆರೆಗಳಿಗೆ, ೨೦೦೭ರಲ್ಲಿ ಶೇ.೪೫ ಹಾಗೂ ೨೦೦೮ರಲ್ಲಿ ಶೇ.೭೦ರಷ್ಟು ಕೆರೆಗಳಿಗೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಒಂದು ತೊಟ್ಟು ಸಹ ನೀರು ಬಂದಿಲ್ಲ. ೩ ಕೋಟಿ ಜನಸಂಖ್ಯೆಯ ಹಳೆ ಮೈಸೂರಿನ ೧೪ ಬರಪೀಡಿತ ಜಿಲ್ಲೆಗಳ ೮೬ ತಾಲ್ಲೂಕುಗಳು ಹಾಗು ೩,೨೫೦೦೦ ಕೋಟಿ ಗೃಹ ಉತ್ಪನ್ನ ನೀಡುವ ಬೆಂಗಳೂರು ನಗರ ನೀರಿನ ಬವಣೆಯಿಂದ ನರಳುತ್ತಿದೆ. ನಮ್ಮ ರಾಜ್ಯದಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಾಕಷ್ಟು ಅಸಮತೋಲನ ಆಗಿದೆ. ಹಳೆ ಮೈಸೂರು ಪ್ರಾಂತ್ಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ. ಆದುದರಿಂದಲೆ ೧೪ ಜಿಲ್ಲೆಗಳ ೮೬ ತಾಲ್ಲೂಕುಗಳು ಬರಪೀಡಿತವಾಗಿವೆ. ಪರಮಶಿವಯ್ಯನವರ ಯೋಜನೆ ಈ ಅಸಮತೋಲನವನ್ನು ನಿವಾರಿಸುವಲ್ಲಿ ಉಪಯೋಗವಾಗಬಹುದು. ಈ ಯೋಜನೆ ೮೬ ತಾಲ್ಲೂಕುಗಳಲ್ಲದೆ ಬೆಂಗಳೂರು ನಗರಕ್ಕೂ ನೀರನ್ನು ತರಲಿದೆ.

ಹಳೆ ಮೈಸೂರಿನ ೧೪ ಜಿಲ್ಲೆಗಳ ಪೈಕಿ (ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡು) ೩೭.೧೪ ಲಕ್ಷ ಹೆಕ್ಟೇರುಗಳಷ್ಟು ಭೂಮಿ ಬಿತ್ತನೆಯಾಗುವ ಪ್ರದೇಶ, ಅದರಲ್ಲಿ ೭.೬೯ ಲಕ್ಷ ಹೆಕ್ಟೇರುಗಳಷ್ಟು ಅಂದರೆ ಶೇ.೧೯%ರಷ್ಟು ಭೂಮಿಗೆ ನೀರಾವರಿ ದೊರತಿದೆ. ಕಾವೇರಿಯಲ್ಲಿರುವ ಒಟ್ಟು ನೀರು ೭೨೭ ಟಿ.ಎಂ.ಸಿ.ಯಷ್ಟು. ಅದರಲ್ಲಿ ಹಳೆ ಮೈಸೂರಿನ ಜಲಾಯನ ಪ್ರದೇಶದಲ್ಲಿ ಉತ್ಪತ್ತಿಯಾಗುವ ನೀರು ೪೨೫ ಟಿ.ಎಂ.ಸಿ. ಅದರಲ್ಲಿ ಕೇವಲ ೨೭೦ ಟಿ.ಎಂ.ಸಿ.ಯಷ್ಟು ನೀರನ್ನು ಉಪಯೋಗಿಸಲು ಟ್ರಿಬ್ಯೂನಲ್ ಆದೇಶಿಸಿದೆ. ಆದುದರಿಂದ ಕೇವಲ ೭,೬೯,೯೮೮ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿಯಾಗುತ್ತಿದೆ. ಕೆ.ಆರ್.ಎಸ್. ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದ ವಿವಿಧ ಬೆಳೆಗಳಿಗೆ ೬೧.೨೦ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಈಗಾಗಲೆ ಉಪಯೋಗಿಸುತ್ತಿದ್ದರೆ ಅದನ್ನು ೩೮.೯೮ ಟಿ.ಎಂ.ಸಿ.ಗೆ ಇಳಿಸಲು ಟ್ರಿಬ್ಯೂನಲ್ ಆದೇಶಿಸಿದೆ. ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೨೭೦ ಟಿ.ಎಂ.ಸಿ.ಯಷ್ಟು ನೀರು ಕಾವೇರಿಯಿಂದ ದೊರೆತಿದ್ದರೂ ಅದರಲ್ಲಿ ೭೦ ಟಿ.ಎಂ.ಸಿ.ಯಷ್ಟು ನೀರು ಕಾವೇರಿ ಜಲಾಯನ ಪ್ರದೇಶದಲ್ಲಿ ಬರುವ ಕೆರೆಗಳ ಲೆಕ್ಕದಲ್ಲಿದೆ. ನೀರಾವರಿ ಇಲಾಖೆಯ ಅನ್ವಯ ಕೆರೆಗಳಿಂದ ಕೇವಲ ೧೫ ಟಿ.ಎಂ.ಸಿ.ಯಷ್ಟು ನೀರು ಮಾತ್ರ ನಮಗೆ ದೊರಕುತ್ತಿದೆ. ಕೇಂದ್ರ ಸರ್ಕಾರ ಬಿಳೆಗೊಂಡ್ಲುವಿನಲ್ಲಿ ಅಳವಡಿಸಿರುವ ಮಾಪನದ ಅನ್ವಯ ಅಧಿಕ ವರ್ಷಗಳಲ್ಲಿ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ಪ್ರತಿ ಸಾಲು ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ (೧೯೨+೧೪೮). ಅಂದರೆ ತಮಿಳುನಾಡಿಗೆ ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೧೯೨ ಟಿ.ಎಂ.ಸಿ. ನೀರಲ್ಲದೆ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಈ ಹೆಚ್ಚುವರಿ ನೀರು ನ್ಯಾಯಯುತವಾಗಿ ಉತ್ಪತ್ತಿಯಾಗುವ ರಾಜ್ಯಕ್ಕೆ ಸೇರಬೇಕಾದದ್ದು. ಟ್ರಿಬ್ಯೂನಲ್ ವರದಿಯು ಸಹ ಹೆಚ್ಚುವರಿ ನೀರು ಯಾರಿಗೆ ಸೇರಬೇಕೆಂದು ಎಲ್ಲೂ ಹೇಳಿಲ್ಲ. ಆದರೆ ೨೦೦೭ರಲ್ಲಿ ಡಿ.ಎಂ.ಕೆ.ಯನ್ನು ಮೆಚ್ಚಿಸಲು ಯು.ಪಿ.ಎ. ಸರ್ಕಾರ ಹೆಚ್ಚುವರಿ ನೀರನ್ನು ಹೇಗೆ ಹಂಚಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ಸಲಹೆ ಕೇಳಿದೆ. ಈ ವಿಚಾರವನ್ನು ಸರ್ವೋಚ್ಛ ನ್ಯಾಯಾಲಯ ಇನ್ನು ಕೈಗೆತ್ತಿಕೊಂಡಿಲ್ಲ. ತಮಿಳುನಾಡಿಗೆ ಈ ವಿವಾದ ನ್ಯಾಯಾಲಯದಲ್ಲಿ ಹೆಚ್ಚು ದಶಕಗಳು ಉಳಿದಷ್ಟು, ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಪ್ರತಿವರ್ಷ ಹರಿದು ಹೋಗುತ್ತಿರುತ್ತದೆ. ಕಳೆದ ಮೂರು ದಶಕಗಳ ನಮ್ಮ ರಾಷ್ಟ್ರದ ರಾಜಕಾರಣ ಗಮನಿಸಿದರೆ ಯಾವುದೇ ಪಕ್ಷ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಬೇಕಾದರೆ ತಮಿಳುನಾಡಿನ ಪಕ್ಷಗಳ ಬೆಂಬಲ ಅತ್ಯಗತ್ಯ. ಅಂದರೆ ಕಾವೇರಿಯಿಂದ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳು ನೀರು ಪಡೆಯುವುದು ನನಸಾಗದ ಕನಸು.
ಕೃಷ್ಣಾ ನದಿಯಿಂದ ನಮ್ಮ ರಾಜ್ಯಕ್ಕೆ ೭೩೪ ಟಿ.ಎಂ.ಸಿ. ಸ್ಕೀಮ್ `ಎ'ನಿಂದ ಹಾಗೂ ೧೮೩ ಟಿ.ಎಂ.ಸಿ. ಸ್ಕೀಮ್ `ಬಿ'ನಿಂದ ಮಂಜೂರಾಗಿದೆ (ಮಂಜೂರಾಗಲಿದೆ). ಅಂದರೆ ಒಟ್ಟು ೯೧೭ ಟಿ.ಎಂ.ಸಿ.ಯಷ್ಟು ನೀರು. ಇದರಲ್ಲಿ ತುಂಗಾಭದ್ರಾ ನದಿಯ ೪೫೦ ಟಿ.ಎಂ.ಸಿ.ಯಷ್ಟು ನೀರು ಸೇರಿದೆ. ಹಳೆ ಮೈಸೂರಿಗೆ ಸ್ಕೀಮ್ `ಎ'ನಿಂದ ೯೬ ಹಾಗೂ ಸ್ಕೀಮ್ `ಬಿ'ನಿಂದ ೨೨ ಟಿ.ಎಂ.ಸಿ.ಯಷ್ಟು ದೊರೆತಿದೆ. ನ್ಯಾಯಯುತವಾಗಿ ಹಳೆ ಮೈಸೂರಿನ ಪಾಲಿನ ತುಂಗಭದ್ರಾ ನದಿಯ ೪೫೦ರಲ್ಲಿ ಕನಿಷ್ಠ ೨೫೦ ಟಿ.ಎಂ.ಸಿ.ಯಷ್ಟಾದರೂ ನೀರು ಕೊಡಬೇಕಾಗಿತ್ತು. ೯೧೭ ಟಿ.ಎಂ.ಸಿ.ಯಲ್ಲಿ ಶೇ.೭೭%ರಷ್ಟು ಹೈದರಾಬಾದ್ ಕರ್ನಾಟಕಕ್ಕೆ ನಮ್ಮ ಸರ್ಕಾರ ಕೊಟ್ಟರೆ, ಉಳಿದ ಶೇ.೧೧% (೧೦೦ ಟಿ.ಎಂ.ಸಿ) ಆಂಧ್ರಪ್ರದೇಶಕ್ಕೆ ಹೋಗುತ್ತಿದೆ. ಇದಲ್ಲದೆ ತೆಲುಗು ಗಂಗಾ ಅಡಿಯಲ್ಲಿ ತಮಿಳುನಾಡಿನ ಚೆನ್ನೈಗೆ ಕೃಷ್ಣಾ ನದಿಯ ಕರ್ನಾಟಕದ ಪಾಲಿನಲ್ಲಿ ೫ ಟಿ.ಎಂ.ಸಿ. ನೀರು ಹೋಗುತ್ತಿದೆ. ಈಗಾಗಲೆ ಅಣೆಕಟ್ಟುಗಳನ್ನು ಕಟ್ಟಿ ಕಾಲುವೆಗಳ ಮೂಲಕ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶವು ರಾಷ್ಟ್ರದ ರಾಜಕಾರಣದಲ್ಲಿ ತಮಿಳುನಾಡಿನಷ್ಟೇ ಬಲಿಷ್ಠವಾದದ್ದು ಹಾಗೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯ ನಮ್ಮ ರಾಜ್ಯ ರಾಜಕಾರಣದಲ್ಲಿ ಪ್ರಬಲವಾಗಿದೆ. ೧೯೫೬ರ ಕರ್ನಾಟಕ ಏಕೀಕರಣದ ನಂತರ ಸರ್ಕಾರ ೧೨,೦೦೦ ಕೋಟಿಗೂ ಹೆಚ್ಚು ಹಣವನ್ನು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ವೆಚ್ಚ ಮಾಡಿದೆ. ಏಕೀಕರಣದ ನಂತರ ಬಹುತೇಕ ನೀರಾವರಿಯ ಮುಖ್ಯ ಅಭಿಯಂತರರು ಹಾಗೂ ನೀರಾವರಿ ಸಚಿವರು ಉತ್ತರ ಕರ್ನಾಟಕಕ್ಕೆ ಸೇರಿದವರು. ಮಗದಮ್, ಬಾಳೆಕುಂದ್ರೆ ಹಾಗು ಅಂಗಡಿಯವರು ಮುಖ್ಯ ಅಭಿಯಂತರರಾದರೆ, ಇವರಿಗೆ ಬೆಂಬಲವಾಗಿ ವಿರೇಂದ್ರ ಪಾಟೀಲ್, ಖರ್ಗೆ, ಅಲ್ಲಂ ವೀರಭದ್ರಪ್ಪ, ಹೆಚ್.ಕೆ ಪಾಟೀಲರು ನೀರಾವರಿ ಸಚಿವರಾದರು. ಈಗ ಬೊಮ್ಮಾಯಿ ನೀರಾವರಿ ಸಚಿವರಾದರೆ ದೇಸಾಯಿ ನೀರಾವರಿ ಸಲಹೆಗಾರರಾಗಿದ್ದಾರೆ. ಇದರ ಫಲವಾಗಿ ೧೯೫೬ರಿಂದ ಇದುವರೆಗೆ ೨೦ ಲಕ್ಷ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿ ಸೌಲಭ್ಯ ದೊರೆತಿದೆ. ಕಾಂಗ್ರೆಸ್, ಜೆ.ಡಿ.ಎಸ್ ಹಾಗು ಬಿ.ಜೆ.ಪಿ. ಪಕ್ಷಗಳು ಈ ಪ್ರಾಂತ್ಯದ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಅಂದರೆ ಬರಪೀಡಿತ ಹಳೆ ಮೈಸೂರು ಪ್ರಾಂತ್ಯದ ಎರಡನೆಯ ಕನಸು ಸಹ ಭಗ್ನವಾದಂತೆ.
ಹೇಮಾವತಿ ನದಿಯಿಂದ ಈಗಾಗಲೆ ೫೫ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಬಳಸುತ್ತಿದ್ದೇವೆ. ಇದು ಕಾವೇರಿಯ ಉಪನದಿಯಾಗಿರುವುದರಿಂದ ಕಾವೇರಿ ಟ್ರಿಬ್ಯೂನಲ್‌ನ ಭೂತಗನ್ನಡಿಯಡಿಯಲ್ಲಿ ಬರುತ್ತದೆ. ಟ್ರಿಬ್ಯೂನಲ್ ಕೇವಲ ೪೫ ಟಿ.ಎಂ.ಸಿ.ಯಷ್ಟು ನೀರನ್ನು ಮಾತ್ರ ಬಳಸಿ ಎಂದು ಆದೇಶಿಸಿದೆ. ಈಗಾಗಲೆ ಹೇಮಾವತಿ ಯೋಜನೆಯಡಿಯಲ್ಲಿ ಬರುವ ಪ್ರದೇಶಗಳಿಗೆ ನೀರುಣಿಸಲು ಸಾದ್ಯವಾಗುತ್ತಿಲ್ಲ. ಇರುವ ಒಂದೇ ಮಾರ್ಗವೆಂದರೆ ನೇತ್ರಾವತಿಯ ಬೃಹತ್ ಮಳೆ ಕೊಯ್ಲು ಯೋಜನೆ. ಆದುದರಿಂದಲೆ ನಾವು ಈ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ನಮ್ಮನ್ನು ನೀತಿಗೆಟ್ಟವರು ಎಂದು ಕೆಲವರು ಬಣ್ಣಿಸಿದರೆ, ಇನ್ನು ಕೆಲವರು ಪರಿಸರ ವಿರೋಧಿಗಳೆಂಬ ಪಟ್ಟ ಕಟ್ಟಿದ್ದಾರೆ. ಪರಮಶಿವಯ್ಯನವರ ಯೋಜನೆಯಿಂದ ಬರಪೀಡಿತ ಜಿಲ್ಲೆಗಳಲ್ಲದೆ, ಬೆಂಗಳೂರು ನಗರಕ್ಕೂ ನೀರು ದೊರೆಯಲಿದೆ. ಶೇ.೯೦ರಷ್ಟು ಹೋಟೆಲ್ ಉದ್ಯಮದವರಲ್ಲದೆ ಸುಮಾರು ೫ ಲಕ್ಷ ಕರಾವಳಿಯ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬುದನ್ನು ಅನಗತ್ಯ ಹೇಳಿಕೆಗಳು ಕೊಡುವ ಮುಂಚೆ ಈ ನಾಯಕರು ಯೋಚನೆ ಮಾಡಬೇಕು. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಕರ್ನಾಟಕಕ್ಕೆ ಕರಾವಳಿಯಲ್ಲಿರುವ ನೇತ್ರಾವತಿ ನೀರನ್ನು ಕೊಟ್ಟು, ಕಾವೇರಿಯಲ್ಲಿರುವ ೧೪೮ ಟಿ.ಎಂ.ಸಿ. ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಕೊಡಲು ಆಗ್ರಹಿಸಿದ್ದಾರೆ ಹಾಗೂ ಕೃಷ್ಣಾ ನದಿಯ ಟ್ರಿಬ್ಯೂನಲ್ ಸ್ಕೀಮ್ ಬಿ ಯಲ್ಲಿ ೨೭೮ ಟಿ.ಎಂ.ಸಿ.ಗೆ ಬದಲು ಕೇವಲ ೧೮೩ ಟಿ.ಎಂ.ಸಿ.ಯಷ್ಟು ಮಾತ್ರ ಕರ್ನಾಟಕಕ್ಕೆ ಕೊಡಲು ಆದೇಶ ಮಾಡಲು ಹೊರಟಿದೆ. ನಾನು ಈ ಲೇಖನದಲ್ಲಿ ವಿವರಿಸಿರುವಂತೆ ಬರಪೀಡಿತ ಜಿಲ್ಲೆಗಳ ನೀರಿನ ಬವಣೆಯ ನಿವಾರಣೆಗೆ ಒಂದು ಕಡೆ ತಮಿಳುನಾಡು, ಇನ್ನೊಂದು ಕಡೆ ಆಂಧ್ರ ಪ್ರದೇಶ (ಹಾಗು ಹೈದರಾಬಾದ್ ಕರ್ನಾಟಕ) ಹಾಗೂ ಕರಾವಳಿಯ ಪರಿಸರವಾದಿಗಳ ವಿರೋಧವಿದೆ. ಇದು ಹೇಗಿದೆಯೆಂದರೆ ಇತ್ತ ದರಿ, ಅತ್ತ ಪುಲಿ, ಹಿತ್ತಲಲ್ಲಿ ಮತ್ತೊಂದು ಪುಲಿಯೆಂಬಂತೆ.
ಅಂಕಿ ಅಂಶಗಳ ಪ್ರಕಾರ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ೧೯೯೭ರಲ್ಲಿ ೫೦೦ ಅಡಿಗಳು ಇದ್ದದ್ದು ೨೦೦೪ರಲ್ಲಿ ೧೨೦೦ ಅಡಿಗಳಿಗೆ ಕುಸಿದಿದೆ. ೫೭ ತಾಲ್ಲೂಕುಗಳಲ್ಲಿ ಅಂರ್ತಜಲ ಸಂದಿಗ್ಧ ಮಟ್ಟಕ್ಕೆ ತಲುಪಿದೆ. ೧೪,೨೫೭ ವಸತಿ ಪ್ರದೇಶದಲ್ಲಿ ಫ್ಲೋರೈಡ್ ಹಾಗು ನೈಟ್ರೇಟ್ ಲವಣಗಳು ಹಾನಿಕಾರಕ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವೆ. ೩೧.೨೦ ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳು ಜೀವನೋಪಾಯಕ್ಕೆ ವ್ಯವಸಾಯವನ್ನು ಅವಲಂಬಿಸಿವೆ. ವ್ಯವಸಾಯವಿರಲಿ ಕುಡಿಯಲು ಶುದ್ಧ ನೀರಿಲ್ಲದೆ ತವಕಿಸುತ್ತಿವೆ. ಈ ಬರಪೀಡಿತ ಜಿಲ್ಲೆಗಳಿಗೆ ನೀರು ಬರುವ ಎಲ್ಲ ಮಾರ್ಗಗಳು ಮುಚ್ಚಿಹೋಗಿವೆ. ಹಳೆ ಮೈಸೂರಿನಲ್ಲಿ ಕಾವೇರಿಯಿಂದ ೪೨೫ ಟಿ.ಎಂ.ಸಿ ಹಾಗು ತುಂಗಾಭದ್ರಾದಿಂದ ೪೫೦ ಟಿ.ಎಂ.ಸಿ.ಯಷ್ಟು ನೀರು ಉತ್ಪತ್ತಿಯಾದರೂ (ಒಟ್ಟು ೮೭೫ ಟಿ.ಎಂ.ಸಿ) ಕೇವಲ ೩೮೮ ಟಿ.ಎಂ.ಸಿ.ಯಷ್ಟು ನೀರು ಮಾತ್ರ ಹಳೆ ಮೈಸೂರಿಗೆ ಲಭಿಸಿದೆ. ಆದುದರಿಂದ ಹಳೆ ಮೈಸೂರಿನ ಶೇ.೬೭% ಬರಪೀಡಿತ ಪ್ರದೇಶವಾಗಿದೆ. ಈ ಪ್ರದೇಶಕ್ಕೆ ನೀರಿನ ಹಂಚಿಕೆಯ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಭಾರಿ ಅನ್ಯಾಯವಾಗಿದೆ. ಹೃದಯದಲ್ಲಿ ಹೇಗೆ ಟ್ರಿಪಲ್ ವೆಸೆಲ್ ಬ್ಲಾಕ್ ಆದಾಗ ಬೈಪಾಸ್ ಸರ್ಜರಿ ಅಗತ್ಯವೊ ಹಾಗೆ ಬರಪೀಡಿತ ಜಿಲ್ಲೆಗಳು ಸಾಯದೆ ಉಳಿಯ ಬೇಕಾದರೆ ಇರುವ ಒಂದೆ ಮಾರ್ಗ ಯಾವುದಾದರು ನದಿಯ ಬೈಪಾಸ್ ಸರ್ಜರಿ. ಏಕೆಂದರೆ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಯಾಗಬೇಕಾದರೆ, ಕೆರೆಗಳಲ್ಲಿ ೩೬೫ ದಿನ ಕನಿಷ್ಠ ೩ ಮೀಟರುಗಳಷ್ಟು ನೀರು ಸತತವಾಗಿ ೧೫ಕ್ಕೂ ಹೆಚ್ಚು ವರ್ಷಗಳು ನಿಲ್ಲಬೇಕು. ಒತ್ತುವರಿಯಾಗಿರುವ ಅರಣ್ಯ ಪ್ರದೇಶವನ್ನು ತೆರುವು ಮಾಡಿ ಶೇ.೮%ರಷ್ಟು ಇರುವ ಅರಣ್ಯ ಪ್ರದೇಶವನ್ನು ಶೇ.೩೦ಕ್ಕೆ ಏರಿಸಬೇಕು. ಇದನ್ನು ಕೇವಲ ನೀರಿನ ಶೇಖರಣೆ, ಮಳೆ ಕೊಯ್ಲು, ಮಿತವಾದ ನೀರಿನ ಬಳಕೆ ಅಥವಾ ಕೆರೆಗಳ ಅಭಿವೃದ್ಧಿಯಿಂದ ಮಾತ್ರ ಮಾಡಲು ಸಾದ್ಯವಿಲ್ಲ. ಇವೆಲ್ಲವೂ ಹೃದ್ರೋಗಿ ಕೊಲೆಸ್ಟ್ರಾಲ್ ತಗ್ಗಿಸುವುದು, ಧೂಮಪಾನ ಬಿಡುವುದು ಹಾಗೂ ದೇಹದ ತೂಕವನ್ನು ಕರಗಿಸುವ ವಿಧಾನಗಳಂತೆ. ಯಾವುದಾದರೂ ನದಿಯಿಂದ ಬೈಪಾಸ್ ಸರ್ಜರಿ ಅತ್ಯಗತ್ಯ ಇರುವಂತೆ, ೧೫,೪೪೨ ಕೆರೆಗಳಿಗೆ ಆಂಜಿಯೊ ಪ್ಲಾಸ್ಟಿಯೂ ಅಗತ್ಯವಿದೆ. ಕೆರೆಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕೆರೆಗಳ ಜೀರ್ಣೋದ್ದಾರ ಕಾರ್ಯವು ಪ್ರಾರಂಭವಾಗಬೇಕು. ಯಾವ ನದಿಯಿಂದ ಡಾ.ಯಡ್ಯೂರಪ್ಪನವರು ಬೈಪಾಸ್ ಮಾಡುತ್ತಾರೊ ಇದು ಅವರ ವಿವೇಚನೆಗೆ ಬಿಟ್ಟದ್ದು. ನನಗೆ ಕಂಡುಬರುವಂತೆ ನೇತ್ರಾವತಿ ನದಿಯಲ್ಲದೆ ಬೇರೆ ಮಾರ್ಗ ಅವರಿಗಿಲ್ಲ ಅಥವಾ ಮೂರು ಕೋಟಿ ಜನರನ್ನು ಇನ್ನು ೧೦ ವರ್ಷಗಳಲ್ಲಿ ನೀರಿರುವ ಜಾಗಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಬೇಕು. ಬರಪೀಡಿತ ಜಿಲ್ಲೆಯ ಜನ ಮೊಸಳೆ ಕಣ್ಣೀರಿನ ಜಾಣ ಉಪಾಯಗಳನ್ನು ರಾಜಕಾರಣಿಗಳು ಹಾಗು ಪರಿಸರವಾದದ ಸೋಗಿನಲ್ಲಿರುವ ಬುದ್ಧಿಜೀವಿಗಳಿಂದ ಪದೇ ಪದೇ ಕೇಳಿ ಬೇಸತ್ತಿದ್ದಾರೆ. ಬಣ್ಣದ ಕನಸೊ, ನನಸಾಗದ ಕನಸೊ ಆದರೆ ನೇತ್ರಾವತಿಯ ತಿರುವೇ ಶಿವ ಶಿವ ಅಥವಾ ದುಸ್ಸಾಹಸ ಎನ್ನುವವರ ದುಃಸ್ವಪ್ನ ಬರಪೀಡಿತ ಜನರಿಗೆ ಬೀಳದಿರಲಿ ಎಂದು ಆಶಿಸುತ್ತೇನೆ.

Friday, June 4, 2010

ಬರಲಿದೆ ಕಾರ್ಬನ್ ಕ್ರೆಡಿಟ್ ಕಾರ್ಡ್ ಅಥವಾ ಇಂಗಾಲವನ್ನು ಇಳಿಸಿ-ಪರಿಸರವನ್ನು ಉಳಿಸಿ



ಜೂನ್ 5- ಇಂದು ವಿಶ್ವ ಪರಿಸರ ದಿನ. ಅದಕ್ಕಾಗಿ ಈ ವಿಶೇಷ ಲೇಖನ. ಈ ಲೇಖನವನ್ನು ಈ ದಿನದ (05/06/2010) 'ವಿಜಯ ಕರ್ನಾಟಕ'ದಲ್ಲೂ ಓದಬಹುದು.

ಪರಿಸರ ವಿಜ್ಞಾನಿಗಳ ಪ್ರಕಾರ ಇಂಗಾಲದ ಡೈ ಆಕ್ಸೈಡ್ ಹಾಗೂ ಹಸಿರು ಮನೆ ಅನಿಲಗಳು ತಡೆಯಿಲ್ಲದೆ ಹೆಚ್ಚುವರಿಯಾದರೆ ಧೀರ್ಘಾವದಿ ಸರಾಸರಿ ಜಾಗತಿಕ ತಾಪಮಾನ ೧೪ ಡಿಗ್ರಿ ಸೆಲ್ಶಿಯಸ್‌ನಿಂದ ೨೦೯೯ರ ವೇಳೆಗೆ ೨೦.೧ ಡಿಗ್ರಿ ಸೆಲ್ಶಿಯಸ್‌ಗೆ ಹೆಚ್ಚಲಿದೆ. ೧೭೯೦ ಹಾಗು ೨೦೧೦ರ ಅವಧಿಯಲ್ಲಿ ಪರಿಸರದಲ್ಲಿ ಇಂಗಾಲ ಶೇ. ೩೩%ರಷ್ಟು ಹಾಗೂ ಮಿಥೇನ್ ಅನಿಲ ಶೇ. ೧೪೯ರಷ್ಟು ಹೆಚ್ಚಿದೆ. ಹಸಿರು ಮನೆ ಅನಿಲಗಳಲ್ಲಿ ಇಂಗಾಲವಲ್ಲದೆ ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಹೈಡ್ರೋಫ್ಲೂರೊ ಕಾರ್ಬನ್ ಅನಿಲಗಳಿವೆ. ಅನಿಯಂತ್ರಿತ ಕೈಗಾರಿಕೆ, ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ವಿದ್ಯುತ್ ಉತ್ಪಾದನೆ, ಹಳೆ ತಂತ್ರಜ್ಞಾನದಿಂದ ನಡೆಯುವ ಕೈಗಾರಿಕೆಗಳಿಂದ ಹಾಗೂ ಸಾರಿಗೆ ವಾಹನಗಳಿಂದ (ವಿಮಾನ ಹಾಗೂ ಹಡಗುಗಳು), ರಾಸಾಯನಿಕ ಗೊಬ್ಬರಗಳ ಬಳಕೆಯಿಂದ, ಅವೈಜ್ಞಾನಿಕ ವ್ಯವಸಾಯದಿಂದ, ಕೊಳಚೆ ನಿರ್ಮೂಲನದಲ್ಲಿರುವ ಅವ್ಯವಸ್ಥೆಯಿಂದ ಹಸಿರು ಮನೆ ಅನಿಲಗಳ ಅಂಶ ಹೆಚ್ಚುತ್ತಿದೆ. ಪರಿಸರದಲ್ಲಿರುವ ಶೇ. ೮೦ರಷ್ಟು ಇಂಗಾಲ ಪಳೆಯುಳಿಕೆ ಇಂಧನಗಳ ಬಳಕೆಯಿಂದ ಬಂದರೆ ಇನ್ನು ಶೇ. ೨೦ರಷ್ಟು ಅರಣ್ಯ ನಾಶದಿಂದ ಸೇರುತ್ತಿದೆ. ಪರಿಸರದಲ್ಲಿ ಶೇಖರವಾಗುವ ಈ ಅನಿಲಗಳು ಇನ್‌ಫ್ರಾರೆಡ್ ಕಿರಣಗಳನ್ನು ಭೂಮಿಯಲ್ಲಿ ಹಿಡಿದಿಡುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದು ಹೆಚ್ಚಾಗುವುದರಿಂದ ಸಮುದ್ರದ ಮಟ್ಟ ಏರುವುದಲ್ಲದೆ, ಹಿಮಗಲ್ಲುಗಳು ಕರಗುವುದರಿಂದ ಬರಗಾಲ ಹಾಗು ಪ್ರವಾಹಗಳು ಸಂಭವಿಸಲಿವೆ. ಮಾರ್ಚ ೨೦೧೦ರ ಜಾಗತಿಕ ತಾಪಮಾನ ೧೪.೫೪ ಡಿಗ್ರಿ ಸೆಲ್ಶಿಯಸ್, ಅಂದರೆ ಕಳೆದ ೧೩೦ ವರ್ಷಗಳ ಇತಿಹಾಸದಲ್ಲಿ ಅತ್ಯಂತ ಬಿಸಿಯಾದ ಮಾರ್ಚ್ ತಿಂಗಳು ಎಂದು ದಾಖಲೆ ಮಾಡಿದೆ. ಡಿಸೆಂಬರ್೨೦೦೯ರ ಕೋಪನ್‌ಹೇಗನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸರ ಸಮಾವೇಶದಲ್ಲಿ ಭಾಗವಹಿಸಿದ್ದ ರಾಷ್ಟ್ರಗಳು ಜಾಗತಿಕ ತಾಪಮಾನ ೨ ಡಿಗ್ರಿ ಸೆ.ಗಿಂತ ಹೆಚ್ಚಾಗದೆ ಇರುವಂತೆ ನಿರ್ಣಯವನ್ನು ಅಂಗೀಕರಿಸಿತು. ವಿಮರ್ಶಕರ ಪ್ರಕಾರ ಈ ಸಮಾವೇಶ ಅಮೆರಿಕ ಹಾಗೂ ಚೀನಾ ದೇಶಗಳ ಸಂಕುಚಿತ ಮನೋಭಾವದಿಂದ ಪರಿಸರಕ್ಕೆ ಧಕ್ಕೆ ತರುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಕಾನೂನನ್ನು ಜಾರಿಗೆ ತರಲು ವಿಫಲವಾದರೂ, ಭಾಗವಹಿಸಿದ್ದ ಎಲ್ಲ ರಾಷ್ಟ್ರಗಳು ಈ ಅನಿಲಗಳನ್ನು ನಿಯಂತ್ರಿಸುವ ಬಗ್ಗೆ ತಮ್ಮ ದೇಶಗಳಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ನೀಡಿರುವುದು ಸ್ವಾಗತಾರ್ಹ.
ವಿಶ್ವದ ಶೇ. ೩೩ ಇಂಗಾಲವನ್ನು ಅಮೆರಿಕ, ಶೇ.೨೩ನ್ನು ಯೂರೋಪಿಯನ್ ಯೂನಿಯನ್ ದೇಶಗಳು, ಶೇ. ೮ ಚೈನಾ, ಶೇ. ೬ ಜಪಾನ್, ಶೇ.೪ನ್ನು ಭಾರತ ದೇಶ ಹೊರಸೂಸಿದರೆ ಇನ್ನುಳಿದ ಶೇ.೩೩ ಇಂಗಾಲವನ್ನು ಇತರೆ ದೇಶಗಳು ಹೊರಸೂಸುತ್ತಿವೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಶೇ.೭೦ರಷ್ಟು ಇಂಗಾಲವನ್ನು ಹೊರಸೂಸುತ್ತಿವೆ. ಇತ್ತೀಚೆಗೆ ಚೀನಾ ಹಾಗು ಭಾರತ ತ್ವರಿತ ರೀತಿಯಲ್ಲಿ ಮುಂದುವರಿಯುತ್ತಿರುವುದರಿಂದ ಹಾಗೂ ಕೈಗಾರಿಕೋತ್ಪಾದನೆ ಹೆಚ್ಚಿರುವುದರಿಂದ, ಅಭಿವೃದ್ಧಿಶೀಲ ರಾಷ್ಟ್ರಗಳಂತೆ ಅಡಿವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಬೇಕಾಗಿರುವುದರಿಂದ ಈ ದೇಶಗಳು ಸಹ ಹೆಚ್ಚು ಇಂಗಾಲವನ್ನು ಹೊರಸೂಸಲು ಪ್ರಾರಂಭಿಸಿವೆ. ವಿಶ್ವದ ಕೇವಲ ಶೇ. ೪.೫೩ರಷ್ಟು ಜನಸಂಖ್ಯೆ ಹೊಂದಿರುವ ಅಮೆರಿಕಾ ಜಾಗತಿಕ ತಾಪಮಾನ ಹೆಚ್ಚಾಗಲು ಬಹುಮುಖ್ಯ ಕಾರಣವಾಗಿದೆ. ನಾಮಕಾವಸ್ಥೆಗೆ ೧೯೯೭ರಲ್ಲಿ ಜಪಾನಿನ ಕ್ಯೋಟೊನಲ್ಲಿ ನಡೆದ ಅಂತರರಾಷ್ಟ್ರೀಯ ಪರಿಸರ ಸಮಾವೇಶದಲ್ಲಿ ಮಂಡಿಸಿದ ಕ್ಯೋಟೊ ಪ್ರೊಟೊಕಾಲ್‌ಗೆ ಅಮೆರಿಕಾ ಸಹಿ ಹಾಕಿದ್ದರೂ, ಇದನ್ನು ತನ್ನ ದೇಶದಲ್ಲಾಗಲಿ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನಾಗಿ ಪರಿವರ್ತಿಸುವಲ್ಲಿ ವಿಫಲವಾಗಿದೆ. ಎಲ್ಲ ರಾಷ್ಟ್ರಗಳ ಪೈಕಿ ಕೇವಲ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು ಕ್ಯೋಟೊ ಪ್ರೊಟೊಕಾಲನ್ನು ಶಿಸ್ತಿನಿಂದ ಪಾಲಿಸುತ್ತಿವೆ. ಕ್ಯೋಟೊ ಪರಿಸರ ನಿಯಮಾವಳಿಯ ಪ್ರಕಾರ ಪ್ರತಿ ರಾಷ್ಟ್ರಕ್ಕೆ ಒಂದು ವರ್ಷಕ್ಕೆ ನಿರ್ದಿಷ್ಟ ಇಂಗಾಲವನ್ನು ಹೊರಸೂಸುವ ಮಿತಿಯಿರುತ್ತದೆ. ಈ ಮಿತಿಯು ನಿವ್ವಳ ಗೃಹ ಉತ್ಪನ್ನ (ಜಿ.ಡಿ.ಪಿ), ಜನಸಂಖ್ಯೆ ಹಾಗೂ ಕೈಗಾರಿಕೋತ್ಪನ್ನ ಆಧಾರಿತವಾಗಿರುತ್ತದೆ.
ಪ್ರತಿ ರಾಷ್ಟ್ರವು ತನಗೆ ದೊರೆತಿರುವ ಇಂಗಾಲ ಹೊರಸೂಸುವ ಮಿತಿಯೊಳಗೆ ಕೆಲಸ ಮಾಡಬೇಕು. ಹಾಗೆಂದು ದೇಶದ ಆರ್ಥಿಕತೆಗೆ ಧಕ್ಕೆ ಬರದಂತೆ ಇಂಗಾಲವನ್ನು ತಗ್ಗಿಸುವ ವಿಧಾನಗಳನ್ನು ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ, ಕೈಗಾರಿಕೆಯಲ್ಲಿ, ವ್ಯವಸಾಯ ವಿಧಾನಗಳಲ್ಲಿ, ಸಾರಿಗೆ ವ್ಯವಸ್ಥೆಯಲ್ಲಿ ಮತ್ತು ಕೊಳಚೆ ನಿರ್ಮೂಲನದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ಕಾರ್ಖಾನೆಗೆ ಇಂಗಾಲದ ಮಿತಿಯನ್ನು ನಿಗದಿಗೊಳಿಸಲಾಗುತ್ತದೆ. ಉದಾಹರಣೆಗೆ ಟೊಯೋಟೊ ಕಾರ್ಖಾನೆಯು ೧೦,೦೦೦ ಕಾರುಗಳ ಉತ್ಪಾದನೆಗೆ ಪ್ರತಿ ವರ್ಷ ೧೦೦,೦೦೦ ಟನ್ ಇಂಗಾಲವನ್ನು ಹೊರಸೂಸಿದರೆ, ಸರ್ಕಾರ ಕೇವಲ ೮೦,೦೦೦ ಟನ್ ಇಂಗಾಲದ ಮಿತಿಯನ್ನು ಅದರ ಮೇಲೆ ಹೇರಿದರೆ, ಈ ಕಾರ್ಖಾನೆ ತನ್ನ ಉತ್ಪಾದನೆಯನ್ನು ಉಳಿಸಿಕೊಳ್ಳಲು ಅಥವಾ ಉತ್ಪಾದನೆಯನ್ನು ಹೆಚ್ಚಿಸಲು ನೂತನ ತಂತ್ರಜ್ಞಾನವನ್ನು ಅಳವಡಿಸಿ ತನಗೆ ದೊರೆತಿರುವ ಕಾರ್ಬನ್ ಕ್ರೆಡಿಟ್ ಮಿತಿಯೊಳಗೆ ಕೆಲಸಮಾಡಬೇಕಾಗುತ್ತದೆ. ಹಾಗಾಗದಿದ್ದಲ್ಲಿ ಕಡಿಮೆ ಇಂಗಾಲವನ್ನು ಹೊರಸೂಸುವ ಬೇರೆ ಕಾರ್ಖಾನೆಯಿಂದ ಕಾರ್ಬನ್ ಕ್ರೆಡಿಟ್ ಅನ್ನು ಕೊಂಡುಕೊಳ್ಳಬೇಕು ಅಥವಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕಡಿಮೆ ಇಂಗಾಲವನ್ನು ಹೊರಸೂಸುವ ಯೋಜನೆಗಳಿಗೆ ಪ್ರೋತ್ಸಾಹಿಸಿ ಕಾರ್ಬನ್ ಕ್ರೆಡಿಟ್ ಪಡೆಯಬಹುದು. ಈಗಾಗಲೆ ೫ ಅಂತರರಾಷ್ಟ್ರೀಯ ಸಂಸ್ಥೆಗಳು ಕಾರ್ಬನ್ ಕ್ರೆಡಿಟ್ ವ್ಯಾಪಾರದಲ್ಲಿ ತೊಡಗಿವೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಪ್ರತಿ ವರ್ಷ ಬೆಳೆಯುತ್ತಿದೆ. ವಿಶ್ವ ಸಂಸ್ಥೆಯ ಯು.ಎನ್.ಎಫ್.ಸಿ.ಸಿ. ಸಂಸ್ಥೆಯು ಕಾರ್ಬನ್ ಕ್ರೆಡಿಟ್‌ನ ಎಲೆಕ್ಟ್ರಾನಿಕ್ ಪ್ರಮಾಣಪತ್ರಗಳನ್ನು ಸಂಸ್ಥೆಗಳ ಇಂಗಾಲ ಹೊರಸೂಸುವ ಆಧಾರದ ಮೇಲೆ ವಿತರಿಸುತ್ತದೆ. ೧ ಟನ್ ಕಾರ್ಬನ್ ಕ್ರೆಡಿಟ್ ಪ್ರಮಾಣಪತ್ರಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ೧೫ರಿಂದ ೨೦ ಯೂರೋ ಡಾಲರುಗಳ ಬೆಲೆಯಿದೆ. ಇತ್ತೀಚೆಗೆ ಬಾರತದ ಜಿಂದಾಲ್ ಕಾರ್ಖಾನೆಯು ಸ್ಟೀಲ್ ತಯಾರಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ವರ್ಷಕ್ಕೆ ೧.೫ ಕೋಟಿ ಟನ್ ಕಡಿಮೆ ಇಂಗಾಲವನ್ನು ಹೊರಸೂಸುತ್ತಿರುವುದರಿಂದ ೨೨೫ ಮಿಲಿಯನ್ ಯೂರೊ ಡಾಲರುಗಳ ಮೌಲ್ಯದ ಕಾರ್ಬನ್ ಕ್ರೆಡಿಟ್ ಗಳಿಸುತ್ತಿದೆ. ಈ ಕಾರ್ಖಾನೆ ಪರಿಸರ ಸ್ನೇಹಿಯಾಗಿರುವುದಲ್ಲದೆ ಹಣವನ್ನು ಗಳಿಸುತ್ತಿದೆ. ಇದೆ ರೀತಿ ಯಾವುದಾದರೂ ಕೈಗಾರಿಕೆ ನಗರ ಪ್ರದೇಶದ ಕೊಳಚೆ ನೀರಿನಲ್ಲಿರುವ ಮಿಥೇನ್ ಅನಿಲವನ್ನು ಬಳಸಿ ಡೀಸಲ್ ಉತ್ಪಾದಿಸಿ ಅದನ್ನು ತನ್ನ ಕಾರ್ಖಾನೆಗೆ ಬಳಿಸಿಕೊಂಡರೆ ಅದಕ್ಕೂ ಕಾರ್ಬನ್ ಕ್ರೆಡಿಟ್ ದೊರೆಯುತ್ತದೆ. ಇದಲ್ಲದೆ ನೀರಿಲ್ಲದ ಬರಪೀಡಿತ ಜಿಲ್ಲೆಗಳಲ್ಲಿ ಬಯೋಡೀಸಲ್‌ಗೆ ಬೇಕಾಗುವ ಜತ್ರೋಪ ಸಸಿಗಳನ್ನು ಬೆಳೆಸುವುದರಿಂದ ರೈತರ ಜೀವನೋಪಾಯವಾಗುವುದರ ಜೊತೆಗೆ ಇದರ ಬೀಜಗಳನ್ನು ಖರೀದಿಸುವ ಇಂಡಿಯನ್ ಪೆಟ್ರೋಲಿಯಮ್ ಸಂಸ್ಥೆಗಳು ಕಾರ್ಬನ್ ಕ್ರೆಡಿಟ್‌ನಿಂದ ಹಣ ಸಂಪಾದಿಸಬಹುದು. ಸದ್ಯಕ್ಕೆ ಯೂರೋಪಿಯನ್ ರಾಷ್ಟ್ರಗಳ ಕಾರ್ಖಾನೆಗಳು ಮಾತ್ರ ಕಾರ್ಬನ್ ಕ್ರೆಡಿಟ್‌ಗಳನ್ನು ಖರೀದಿಸುತ್ತಿವೆ. ಇನ್ನು ಕೆಲವು ವರ್ಷಗಳಲ್ಲಿ ಕ್ಯೋಟೊ ಪ್ರೋಟೊಕಾಲ್ ತರಹ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸುವ ಕಡ್ಡಾಯ ಅಂತರರಾಷ್ಟ್ರೀಯ ಕಾನೂನು ಜಾರಿಯಾದಲ್ಲಿ ಕಾರ್ಬನ್ ಕ್ರೆಡಿಟ್ ವಿಶ್ವದ ಪ್ರತಿಯೊಂದು ಉದ್ಯಮದ ಮೇಲೂ ಪರಿಣಾಮ ಬೀರಲಿದೆ.
೫ ವರ್ಷಗಳಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೇ.೨೬ರಷ್ಟು ತಗ್ಗಿಸುವುದಾಗಿ ಭಾರತ ಜನವರಿ ೨೦೧೦ರಲ್ಲಿ ವಿಶ್ವಸಂಸ್ಥೆಗೆ ಭರವಸೆ ನೀಡಿದೆ. ಹಾಗಾಗಿ ನಾವು ಇಂಗಾಲವನ್ನು ತಗ್ಗಿಸುವ ವಿಧಾನಗಳನ್ನು ಅನುಸರಿಸಬೇಕಾಗಿದೆ. ಇಂಗಾಲವನ್ನು ನಿಯಂತ್ರಿಸಲು ಇರುವ ವಿಧಾನಗಳೆಂದರೆ ಕಾರ್ಬನ್ ಪ್ರಾಜೆಕ್ಟ್ಸ್, ಕಾರ್ಬನ್ ಕ್ರೆಡಿಟ್ಸ್, ಕಾರ್ಬನ್ ಫಾರ್ಮಿಂಗ್ ಹಾಗು ಕಾರ್ಬನ್ ಟ್ಯಾಕ್ಸಿಂಗ್.
ಕಾರ್ಬನ್ ಪ್ರಾಜೆಕ್ಟ್ಸ್ - ನಮ್ಮ ದೇಶದಲ್ಲಿ ಪಳೆಯುಳಿಕೆ ಇಂಧನಗಳಿಂದ ಶೇ.೬೮ರಷ್ಟು ವಿದ್ಯುತ್ ತಯಾರಾಗುತ್ತಿದ್ದರೆ, ಜಲಶಕ್ತಿಯಿಂದ ಶೇ.೨೧, ನವೀಕರಿಸಬಹುದಾದ ಶಕ್ತಿಗಳಿಂದ ಶೇ.೭ ಹಾಗು ಅಣು ಶಕ್ತಿಯಿಂದ ಶೇ.೪ ವಿದ್ಯುತ್ ತಯಾರಿಸಲಾಗುತ್ತಿದೆ. ತಯಾರಾಗುವ ವಿದ್ಯುತ್‌ನಲ್ಲಿ ಶೇ.೩೦ ರಿಂದ ಶೇ.೪೫ ವಿದ್ಯುತ್ ಸೋರಿಕೆಯಿಂದ ಅಥವಾ ವಿದ್ಯುತ್ ಕಳ್ಳ ಸಾಗಾಣಿಕೆಯಿಂದ ನಷ್ಟವಾಗುತ್ತಿದೆ. ಪ್ರಸ್ತುತ ೧೪೯,೦೦೦ ಮೆ.ವ್ಯಾ. ವಿದ್ಯುತ್ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿದ್ದರೆ ೨೦೩೦ರ ವೇಳೆಗೆ ೯೫೦,೦೦೦ ಮೆ.ವ್ಯಾ. ವಿದ್ಯುತ್ ಅವಶ್ಯಕತೆಯಿದೆ. ಇಂಗಾಲವನ್ನು ಕಡಿಮೆಗೊಳಿಸಬೇಕಾದರೆ ಅಥವಾ ಕಾರ್ಬನ್ ಕ್ರೆಡಿಟ್ ಅಂತಾರಾಷ್ಟ್ರೀಯ ಕಾನೂನು ಜಾರಿಯಾದಲ್ಲಿ ನಮ್ಮ ದೇಶದ ಪ್ರಗತಿಯನ್ನು ಕಾಯ್ದು ಕೊಳ್ಳಲು ನಾವು ಯಥೇಚ್ಛವಾಗಿ ದೊರೆಯುವ ಸೌರಶಕ್ತಿ, ವಾಯುಶಕ್ತಿ, ಜಲಶಕ್ತಿ ಹಾಗೂ ಜೈವಿಕ‌ಇಂಧನಗಳನ್ನು (ಬಯೋಡೀಸೆಲ್) ಬಳಸಿ ಹೆಚ್ಚು ವಿದ್ಯುತ್ ತಯಾರಿಸಲು ಪ್ರೋತ್ಸಾಹಿಸಬೇಕು. ರಾಷ್ಟ್ರದ ಪ್ರತಿಯೊಂದು ದಾರಿ ದೀಪವನ್ನು ಸೌರಶಕ್ತಿಯಿಂದಲೇ ಉರಿಸಬಹುದು. ಗ್ರಾಮಗಳಲ್ಲಿ ಬಯೋಗ್ಯಾಸನ್ನು ಹಾಗೂ ನಗರಗಳಲ್ಲಿರುವ ಕೊಳಚೆ ನೀರಿನಲ್ಲಿರುವ ಮಿಥೇನ್ ಅನಿಲದಿಂದ ವಿದ್ಯುತ್ತನ್ನು ತಯಾರಿಸಬೇಕು. ಅಲ್ಲದೆ ಅಣು ಒಪ್ಪಂದದಂತೆ ಇನ್ನು ೧೦ ವರ್ಷಗಳಲ್ಲಿ ಉತ್ಪಾದಿಸುತ್ತಿರುವ ಅಣುವಿದ್ಯುತ್ತನ್ನು ಶೇ.೧೦ರಿಂದ ಶೇ.೨೦ಕ್ಕೆ ಏರಿಸಬೇಕು. ಕಲ್ಲಿದ್ದಲು ಹಾಗೂ ಪ್ರಾಕೃತಿಕ ಅನಿಲಗಳಿಂದ ಆದಷ್ಟು ಕಡಿಮೆ ವಿದ್ಯುತ್ತನ್ನು ಉತ್ಪಾದಿಸಬೇಕು. ಜತ್ರೋಪ ಸಸಿಗಳನ್ನು ಬೆಳೆಸಲು ಪ್ರೋತ್ಸಾಹಿಸಿ ಬಯೊಡೀಸಲ್ ತಯಾರಿಸುವುದಲ್ಲದೆ ಕಾರ್ಬನ್ ಕ್ರೆಡಿಟ್ ಸಹ ಪಡೆಯಬಹುದು.
ಕಾರ್ಬನ್ ಕ್ರೆಡಿಟ್ಸ್- ಹಳೆಯ ತಂತ್ರಜ್ಞಾನದಿಂದ ನಡೆಯುತ್ತಿರುವ ಕೈಗಾರಿಕೆಗಳಿಗೆ ಸರ್ಕಾರ ಅನುದಾನ ನೀಡಿ ಅವುಗಳನ್ನು `ಇಂಗಾಲ ಸ್ನೇಹಿ' ಕೈಗಾರಿಕೆಗಳಾಗಿ ಪರಿವರ್ತಿಸಬೇಕು, ಪ್ರತಿ ಕೈಗಾರಿಕೆಗೆ ಇಂಗಾಲದ ಮಿತಿಯನ್ನು ಜಾರಿಗೆ ತರಬೇಕು. ಇದನ್ನು ತಲುಪಲಾರದಂತಹ ಕೈಗಾರಿಕೆಗಳು ಗ್ರಾಮಾಂತರ ಪ್ರದೇಶಗಳನ್ನು ಹಾಗೂ ಅರಣ್ಯ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಮರಗಳನ್ನು ಬೆಳೆಸುವುದರೊಂದಿಗೆ ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯನ್ನು ನಿಭಾಯಿಸಬೇಕು.
ಕಾರ್ಬನ್ ಫಾರ್ಮಿಂಗ್- ನಮ್ಮ ದೇಶದ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಮಾಡುವಲ್ಲಿ ನಮ್ಮ ರೈತರದು ಮಹತ್ತರ ಪಾತ್ರವಿದೆ. ಪ್ರತಿಯೊಬ್ಬ ರೈತನಿಗೆ ತಮ್ಮ ಜಮೀನಿನಲ್ಲಿ ಮರಗಳನ್ನು ಬೆಳೆಸಲು ಸರ್ಕಾರ ಹಣವನ್ನು ಕೊಡಬೇಕು- ಅದು ಫಸಲು ಕೊಡುವ ಮಾವಿನ ಮರವಾಗಿರಬಹುದು ಅಥವಾ ತಂಪು ಕೊಡುವ ಹೊಂಗೆ ಮರವಾಗಿರಬಹುದು. ಪ್ರತಿಯೊಂದು ಮರಕ್ಕೆ ವರ್ಷಕ್ಕೆ ಇಂತಿಷ್ಟು ಬಾಡಿಗೆಯೆಂದು ಸರ್ಕಾರ ಪಾವತಿಸಬೇಕು. ಯಾವುದೇ ಮರ ಕಡಿದರೂ ಜಾಮೀನು ನೀಡಲಾಗದ ಅರೆಸ್ಟ್ ವಾರೆಂಟ್ ಜಾರಿಗೊಳಿಸಬೇಕು. ಇಂದಿಗೂ ಶೇ.೯೦ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ನೀರು ಕಾಯಿಸಲು ಹಾಗು ಅಡಿಗೆ ಮಾಡಲು ಸೌದೆಯನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಮರಗಳು ನಾಶವಾಗುವುದಲ್ಲದೆ ಹೊಗೆಯಿಂದ ಇಂಗಾಲವು ಹೊರಸೂಸುತ್ತದೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೌರ ಒಲೆಗಳನ್ನು ಹಾಗೂ ಅಡಿಗೆಗೆ ಬಯೋಗ್ಯಾಸ್ ಬಳಕೆಯನ್ನು ಪ್ರೋತ್ಸಾಹಿಸಬೇಕು. ಇಂಗಾಲವನ್ನು ಭೂಮಿಯಲ್ಲಿ ಹಿಡಿದಿಡುವ ವ್ಯವಸಾಯ ಪದ್ಧತಿಗಳ ಬಗ್ಗೆ ರೈತರಿಗೆ ವಿವರಿಸಿ ಹೇಳಬೇಕು. ಈ ಪದ್ಧತಿಗಳನ್ನು ಅನುಸರಿಸುವುದರಿಂದ ದೊರಕುವ ವಿಶ್ವಸಂಸ್ಥೆಯ ಸಬ್ಸಿಡಿಯನ್ನು ರೈತರಿಗೆ ತಲುಪಿಸಬೇಕು. ಈಗಿರುವ ನರೇಗಾ (ಓಂಖ‌ಇ‌ಉಂ), ಆಹಾರ ಸುರಕ್ಷತೆ ಕಾರ್ಯಕ್ರಮಗಳ ಜೊತೆ ಇಂಗಾಲ ತಗ್ಗಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಅಥವಾ ಫೀಡ್ (ಈ‌ಇ‌ಇ‌ಆ) ಎಂಬ ಕಾರ್ಯಕ್ರಮದ ಅಡಿಯಲ್ಲಿ ಈ ಮೂರು ಕಾರ್ಯಕ್ರಮಗಳನ್ನು ಜೋಡಿಸಿ ಆಹಾರ (ಫುಡ್), ಶಕ್ತಿ (ಎನರ್ಜಿ), ಪರಿಸರ (ಎನವಿರಾನ್‌ಮೆಂಟ್) ಮತ್ತು ಅಭಿವೃದ್ಧಿ (ಡೆವೆಲಪಮೆಂಟ್) ಕಾಯಕ್ರಮವನ್ನು ರೂಪಿಸಬಹುದು.
ಕಾರ್ಬನ್ ಟ್ಯಾಕ್ಸಿಂಗ್- ಖಾಸಗಿ ಸಾರಿಗೆ, ಸರ್ಕಾರಿ ಸಾರಿಗೆ, ವಿಮಾನ ಸಾರಿಗೆ ಕಂಪನಿಗಳ ಮೇಲೆ ಇಂಗಾಲ ತೆರಿಗೆಯನ್ನು ವಿಧಿಸಬೇಕು. ಅನಗತ್ಯವಾಗಿ ಹೆಚ್ಚು ಇಂಗಾಲವನ್ನು ಹೊರಸೂಸುವ ಎಲ್ಲ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು. ರಿಯಲ್ ಎಸ್ಟೇಟ್ ಕಂಪನಿಗಳು ಕಟ್ಟುವ ಪ್ರತಿ ಚದರ ಅಡಿಗೆ ಇಂಗಾಲ ತೆರಿಗೆ ವಿಧಿಸಬೇಕು. ನಗರಗಳಲ್ಲಿರುವ ಎಲ್ಲ ಕಛೇರಿಗಳು ಶಕ್ತಿ ಸಮರ್ಥವಾಗಿ (ಎನರ್ಜಿ ಎಫಿಷಿಯೆಂಟ್) ಪರಿವರ್ತನೆಯಾಗಬೇಕು ಇಲ್ಲದಿದ್ದಲ್ಲಿ ಅವು ಇಂಗಾಲ ತೆರಿಗೆಯನ್ನು ಪಾವತಿಮಾಡಬೇಕು.
ಇಂದು ವಿಶ್ವ ಪರಿಸರ ದಿನ. ಪ್ರತಿಯೊಬ್ಬ ಪ್ರಜೆಯು ತನ್ನ ದಿನ ನಿತ್ಯದ ಬದುಕಿನಲ್ಲಿ ಇಂಗಾಲವನ್ನು ಇಳಿಸಲು ಪ್ರಯತ್ನಿಸಬಹುದು. ಅನಗತ್ಯ ವಿದ್ಯುತ್ ಬಳಕೆ, ನೀರಿನ ದುರ್ಬಳಕೆ, ಅನಗತ್ಯ ಕಾಗದ ಅಥವಾ ಪ್ಲಾಸ್ಟಿಕ್ ಬಳಕೆ, ಅನಗತ್ಯ ವಾಹನಬಳಕೆ ಮುಂತಾದವುಗಳನ್ನು ನಿಲ್ಲಿಸಬೇಕು. ನಮ್ಮ ದಿನನಿತ್ಯದ ಪ್ರತಿಯೊಂದು ಹೆಜ್ಜೆಯಲ್ಲಿ ನಾವು ಪರಿಸರ ಮಾಲಿನ್ಯವಾಗದಂತೆ ತಡೆಯಬಹುದು. ಮುಂದೊಂದು ದಿನ ಇಂಗಾಲ ಹೊರಸೂಸುವಿಕೆ ಎಷ್ಟು ಪ್ರಾಮುಖ್ಯತೆ ಪಡೆಯುತ್ತದೆಯೆಂದರೆ ವಿಶ್ವದ ಪ್ರತಿಯೊಬ್ಬ ಪ್ರಜೆಗೂ ಇಂಗಾಲ ಮಿತಿ ಬರಬಹುದು. ಹೇಗೆ ಒಂದು ಕೈಗಾರಿಕೆ ಅಥವಾ ಕಾರ್ಖಾನೆಗೆ ಇಂಗಾಲ ಮಿತಿ ಬರಲಿದೆಯೊ ಅದೇ ರೀತಿ ಮುಂದೊಂದು ದಿನ ಪ್ರತಿಯೊಂದು ಕುಟುಂಬಕ್ಕೆ ಇಂಗಾಲ ಮಿತಿ ಬರಬಹುದು. ಧೂಮಪಾನ ಮಾಡುವವರು ಮಾಡದೆ ಇರುವವರ ಬಳಿ ಕಾರ್ಬನ್ ಕ್ರೆಡಿಟ್ ಪಡೆಯಬೇಕಾಗುತ್ತದೆ. ಹೆಚ್ಚು ವಾಹನಗಳನ್ನಿಡಬೇಕೆಂದು ಬಯಸುವವರೂ ವಾಹನಗಳಿಲ್ಲದಿರುವವರ ಬಳಿ ಕಾರ್ಬನ್ ಕ್ರೆಡಿಟ್ ಪಡೆಯಬೇಕಾಗಬಹುದು. ಯಾವುದೇ ವಾಹನ ಖರೀದಿಸುವುದರ ಮೊದಲು ಮರಗಳನ್ನು ಪೋಷಿಸುತ್ತಿರುವ ಸಾಕ್ಷಿ ಪತ್ರವನ್ನು ತೋರಿಸಬೇಕಾಗಬಹುದು. ಹೈಸ್ಪೀಡ್ ಫ್ಯಾನ್ಸಿ ಕಾರುಗಳು ಅಥವಾ ಬೈಕುಗಳನ್ನು ಖರೀದಿಸುವವರು ಎರಡು ಪಟ್ಟು ಹೆಚ್ಚು ಹಣವನ್ನು ತೆರಿಗೆ ರೀತಿಯಲ್ಲಿ ಪಾವತಿಸಬೇಕಾಗಬಹುದು. ಅನಗತ್ಯವಾಗಿ ಖಾಸಗಿ ಪಾರ್ಟಿಗಳನ್ನು ಮಾಡುವವರು ಹಾಗೂ ಸಾವಿರಾರು ಮಂದಿಯನ್ನು ಮದುವೆ ಅಥವಾ ನಾಮಕರಣ ಅಥವಾ ಬಾಡು ಊಟಗಳಿಗೆ ಆಹ್ವಾನಿಸುವವರ ಮೇಲೆ ಕಾರ್ಬನ್ ತೆರಿಗೆ ಬೀಳಬಹುದು. ಹಾಗೆಯೇ ಮನುಷ್ಯ ಅಥವಾ ಪ್ರಾಣಿ ಸತ್ತ ಮೇಲೆ ಅದನ್ನು ಸುಡಬೇಕೋ ಅಥವಾ ಹೂಳಬೇಕೊ, ಯಾವುದರಿಂದ ಪರಿಸರಕ್ಕೆ ಹೆಚ್ಚು ಹಾನಿಕರ ಎಂಬ ವಾದ ವಿವಾದ ಅಥವಾ ಕಾನೂನು ಜಾರಿಗೆ ಪ್ರಯತ್ನಗಳು ನಡೆದರೂ ಸಹ ಆಶ್ಚರ್ಯ ಪಡಬೇಕಾಗಿಲ್ಲ. ವಿಶ್ವ ಪರಿಸರದ ದಿನಾಚರಣೆಯಾದ ಇಂದು ಮಿತ್ರರಿಗೆ ನನ್ನ ಸಂದೇಶ- ಇಂಗಾಲವನ್ನು ಇಳಿಸಿ, ಪರಿಸರವನ್ನು ಉಳಿಸಿ.
ಡಾ.ಮಧುಸೀತಪ್ಪ

ಶಿವಪ್ಪ ಕಾಯೋ ತಂದೆ, ಬಾಯಾರಿಕೆಯನ್ನು ತಾಳಲಾರೆ ಕಾಪಾಡೆಯ? ಶಿವನೇ.....!


ಇತ್ತೀಚೆಗೆ ನಾನು `ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ನೇತ್ರಾವತಿ ತಿರುವಿಗೆ ಸಂಬಂಧ ಪಟ್ಟಂತೆ ಲೇಖನವೊಂದನ್ನು ಬರೆದಿದ್ದೆ. ಅದಕ್ಕೆ ಸಂಬಂಧಪಟ್ಟಂತೆ ಮಿತ್ರ ಪತ್ರಕರ್ತ ವಿನಾಯಕ್ ಭಟ್ ಅವರು ಪ್ರತಿಕ್ರಿಯಿಸಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿನಾಯಕ್ ಅವರು ವ್ಯಕ್ತಪಡಿಸಿರುವ ಕೆಲವು ಬೇಸರ- ಕಳಕಳಿಗೆ ನನ್ನ ಕೈಲಾದಮಟ್ಟಿಗೆ ಉತ್ತರಿಸಲು ಪ್ರಯತ್ನಪಡುತ್ತೇನೆ. ಹಾಗೂ ಇದು ಮುಕ್ತವಾಗಿ ಸಾರ್ವಜನಿಕ ವಲಯಗಳಲ್ಲಿ ಚರ್ಚೆಯಾಗಲು ಅವಕಾಶ ದೊರದಂತಾಗಿದೆ. ಇದಲ್ಲದೆ ಅನೇಕ ವರ್ಷಗಳಿಂದ ವ್ಯವಸ್ಥಿತವಾಗಿ ಪರಮಶಿವಯ್ಯನವರ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಉತ್ತರ ಕೊಡಲು ಅವಕಾಶ ದೊರೆತಂತಾಗಿದೆ.
ನೇತ್ರಾವತಿ ನದಿಯ ಬೃಹತ್ ಮಳೆ ಕೊಯ್ಲು ಯೋಜನೆ ಜಾರಿಯ ಬಗ್ಗೆ ಹೋರಾಟ ನಡೆಸಿರುವ ಇಳಿವಯಸ್ಸಿನ ೯೧ ವರ್ಷದ `ಯುವಕ' ಡಾ.ಪರಮಶಿವಯ್ಯನವರ ಪರವಾಗಿ ನಾನು ಹೇಳ ಹೊರಟಿರುವುದಿಷ್ಟೇ- ದಕ್ಷಿಣ ಕನ್ನಡದ ಜೀವನದಿಯಾದ ನೇತ್ರಾವತಿ ದೇಶದಲ್ಲಿ ಉದ್ದವನ್ನು ಮಾತ್ರ ಪರಿಗಣಿಸಿದಲ್ಲಿ ಚಿಕ್ಕ ನದಿಯಾಗಿರ ಬಹುದು. ಆದರೆ ಇದರಲ್ಲಿರುವ ನೀರಿನ ಪ್ರಮಾಣವು ನಾಲ್ಕು ರಾಜ್ಯಗಳಿಗೆ ನೀರುಣಿಸುವ ಕಾವೇರಿ ನದಿಗಿಂತ ಹೆಚ್ಚು. ಇದು ಸೂರ್ಯನ ಬೆಳಕು ಹಾಗೂ ಪಶ್ಚಿಮ ಘಟ್ಟದಲ್ಲಿರುವ ಕಾಡಿನ ಹಸಿರಿನಷ್ಟೇ ನಿಚ್ಚಳ ಸತ್ಯ!! ಪಾಣಿ ಮಂಗಳೂರಿನ ಮಾಪನದ ಅಂಕಿ ಅಂಶಗಳ ಅನ್ವಯ ಈ ನದಿಯಿಂದ ಸರಿಸುಮಾರು ೪೪೦ ಟಿ‌ಎಂಸಿ ನೀರು ಸಮುದ್ರದತ್ತ ದಾಪುಗಾಲು ಹಾಕುವ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲಿರುವ ಅನೇಕ ಹಳ್ಳ-ಕೊಳ್ಳಗಳಿಂದ ೭೫ ಟಿ‌ಎಂಸಿಯಷ್ಟು ನೀರು ಇದರ ಜೊತೆಯಾಗುತ್ತದೆ. ಅಂದರೆ ಒಟ್ಟಾರೆ ೫೧೫ ಟಿ‌ಎಂಸಿ ನೀರು ಸಮುದ್ರದ ತೆಕ್ಕೆಯಲ್ಲಿ ಕರಗುತ್ತದೆ! ಇದು ಕರ್ನಾಟಕ ನೀರಾವರಿ ಇಲಾಖೆಯಿಂದ ತಿಳಿದು ಬಂದಿರುವ ಮಾಹಿತಿ (ನನ್ನ ಬಳಿ ಸಾಕ್ಷಿ ಇದೆ).
ಇಲ್ಲಿ ನಾನು ಮತ್ತೊಂದು ಸಂಗತಿಯನ್ನು ಸ್ಪಷ್ಟ ಪಡಿಸಲು ಇಷ್ಟ ಪಡುತ್ತೇನೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುತ್ತಮುತ್ತಲಿರುವ ಇರುವ ಇಪ್ಪತ್ತೆರಡು ನದಿಗಳ ನೀರು ಅರಬ್ಬೀ ಸಮುದ್ರಕ್ಕೆ ಸೇರುತ್ತದೆ (೩೦೧೬ ಟಿ‌ಎಂಸಿ). ಅಂದರೆ ನೇತ್ರಾವತಿ ನದಿಯಿಂದ ಮಾತ್ರ ಅರಬ್ಬೀ ಸಮುದ್ರ ಜೀವಿಸಿಲ್ಲ. ಮುಂಗಾರು ಮಳೆಯ ಸಂದರ್ಭದಲ್ಲಿ ಈ ಜೀವನದಿಯಿಂದ ಪ್ರತಿದಿನ ೪೧೫ ಟಿ‌ಎಂಸಿಯಷ್ಟು ನೀರು ಸಮುದ್ರದ ಪಾಲಾದರೆ, ಉಳಿದ ೨೧ ನದಿಗಳು ಮತ್ತು ಅನೇಕ ಹಳ್ಳಗಳಿಂದ ೨೪೦೦ ಟಿ‌ಎಂಸಿಯಷ್ಟು ಸಿಹಿ ನೀರು ಸಮುದ್ರದಲ್ಲಿ ಕರಗುತ್ತದೆ. ಈ ಅಂಕಿ ಅಂಶಗಳನ್ನು ಏಕೆ ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇನೆ ಎಂದರೆ, ವಿನಾಯಕ ಭಟ್ಟರು ತಮ್ಮ ಲೇಖನದಲ್ಲಿ ಈ ಯೋಜನೆಯಿಂದ ಸಮುದ್ರದ ಉಪ್ಪಿನಾಂಶ ಹೆಚ್ಚಾಗುತ್ತದೆ ಹಾಗೂ ನೇತ್ರಾವತಿ ನದಿಗೆ ಸಮುದ್ರದ ನೀರು ನುಗ್ಗುವುದರಿಂದ ನದಿಯ ಉಪ್ಪಿನಾಂಶವು ಹೆಚ್ಚಾಗುತ್ತದೆ ಎಂದಿದ್ದಾರೆ. ಈ ಯೋಜನೆಗೆ ನೇತ್ರಾವತಿ ನದಿಯಿಂದ ಕೇವಲ ೪೦ ಟಿ.ಎಂ.ಸಿ ನೀರನ್ನು ಮಾತ್ರ ಬಳಸುತ್ತೇವೆ. ಅಂದರೆ ನೇತ್ರಾವತಿಯ ಮಳೆಗಾಲದ ೪೧೫ ಟಿ.ಎಂ.ಸಿ.ಯಲ್ಲಿ ಕೇವಲ ಶೇ.೧೦ರಷ್ಟು ನೀರು ಕಡಿಮೆಯಾಗುವುದರಿಂದ ನದಿಯ ನೀರಿನ ಲವಣಾಂಶಗಳಾಗಲಿ ಅಥವಾ ಉಪ್ಪಿನಾಂಶವಾಗಲಿ ಅಥವಾ ಸಿಹಿ ನೀರಿನ ಜೀವರಾಶಿಯ ಆಹಾರಕ್ಕಾಗಲಿ ತೊಂದರೆಯಾಗುತ್ತದೆನ್ನುವುದು ಹಾಸ್ಯಾಸ್ಪದ. ಮತ್ತೊಂದು ಅವರ ಪ್ರಶ್ನೆಯೆಂದರೆ, ಸಮುದ್ರಕ್ಕೆ ಸೇರುವ ನದಿ ನೀರು ಕಡಿಮೆಯಾದರೆ ಸಮುದ್ರದ ಉಪ್ಪಿನಾಂಶ ಹೆಚ್ಚಾಗುವ ಆತಂಕ. ನೇತ್ರಾವತಿ ನದಿ ಸಮುದ್ರ ಸೇರುವ ಆಜು ಬಾಜಿನಲ್ಲಿ ಸುಮಾರು ೨೦೦೦ ಟಿ.ಎಂ.ಸಿ.ಯಷ್ಟು ನೀರು ಉಳಿದ ೨೧ ನದಿಗಳಿಂದ ಹಾಗು ಅನೇಕ ಹಳ್ಳಗಳಿಂದ ಮಳೆಗಾಲದಲ್ಲಿ ಸೇರುತ್ತದೆ. ಇದಲ್ಲದೆ ಸಮುದ್ರದ ಸಾವಿರಾರು ಚದರ ಕಿ.ಮಿ.ಗಳ ಮೇಲೆ ೪೫೦೦ ಮಿ.ಮಿ.ಗಿಂತ ಹೆಚ್ಚು ಮಳೆ ಬೀಳುವುದರಿಂದ ಸಾವಿರಾರು ಟಿ.ಎಂ.ಸಿ.ಯಷ್ಟು ಸಿಹಿ ನೀರು ಸಮುದ್ರಕ್ಕೆ ಸೇರುತ್ತಿರುವಾಗ ಸಮುದ್ರದ ಉಪ್ಪಿನಾಂಶ ಹೆಚ್ಚಾಗಿ ಮೀನುಗಾರರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸುವವರಿಗೆ ಏನೆನ್ನಬೇಕೊ ನನಗೆ ತಿಳಿಯುತ್ತಿಲ್ಲ. ಏಕೆಂದರೆ ಅರಬ್ಬೀ ಸಮುದ್ರದಂತಹ ಅಕ್ಷಯಪಾತ್ರೆಗೆ ಅಸಂಖ್ಯಾತ ನದಿಗಳ ನೀರು, ಆಕಾಶದಿಂದ ಬೀಳುವ ಮಳೆಯೆ ನೀರು ಬಂದು ಸೇರುತ್ತಲೇ ಇರುತ್ತದೆ. ಹೇಗೆ ಮನುಷ್ಯನಿಗೆ ತನ್ನ ದೇಹದಲ್ಲಾಗುವ ಸಣ್ಣಪುಟ್ಟ ಶಾರೀರಿಕ ಏರುಪೇರನ್ನು ಸಹಿಸಿಕೊಳ್ಳುವ ವ್ಯವಸ್ಥೆ ಇದೆಯೋ ಅದೆ ರೀತಿ ಪರಿಸರದ ವ್ಯವಸ್ಥೆಯಲ್ಲೂ ಇಂತಹ ಸಣ್ಣಪುಟ್ಟ ಏರುಪೇರನ್ನು ಸಹಿಸಿಕೊಳ್ಳಲು ವ್ಯವಸ್ಥೆ ಇದೆ.
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಬದುಕಬಲ್ಲ ಜೀವರಾಶಿಗೆ ಹಾಗು ಔಷದೀಯ ಸಸ್ಯರಾಶಿಗೆ ತೊಂದರೆಯಾಗುವ ಆತಂಕ- ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳ ತುದಿಯ ನೇತ್ರಾವತಿ ನದಿಯ ಒಟ್ಟು ಜಲಾಯನ ಪ್ರದೇಶದ ಶೇ.೧೦ರಷ್ಟು ಪ್ರದೇಶದಲ್ಲಿ ಮಾತ್ರ ಮಳೆ ಕೊಯ್ಲು ಮಾಡಲಾಗುತ್ತದೆ. ಉಳಿದ ಶೇ.೯೦ ಜಲಾಯನ ಪ್ರದೇಶಲ್ಲಿ ವರ್ಷದ ೧೫೦ ದಿನಗಳಲ್ಲಿ ಕನಿಷ್ಠ ೪೪೦೦ ಮಿಮೀ ಮಳೆ ಬೀಳುವುದರಿಂದ ಜೀವರಾಶಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪರಿಸರವಾದದಲ್ಲಿ ಪ್ರಾಣಿ, ಸಸ್ಯಗಳ ಸುರಕ್ಷತೆಯ ಬಗ್ಗೆ ಒಂದು ವಾದವಾದರೆ ಮಾನವ ಸುರಕ್ಷತೆಯ ಬಗ್ಗೆ ಇನ್ನೊಂದು ವಾದ. ಮಾನವ ಜಾತಿ ಅತಿ ಬುದ್ಧಿಜೀವಿಯಾಗಿರುವುದರಿಂದ ನಾವು ತೆಗೆದುಕೊಳ್ಳುವ ನಿರ್ಣಯಗಳಿಂದ ಇತರೆ ಜೀವರಾಶಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಯಾವುದೇ ಒಂದು ಕಡೆ ನಮ್ಮ ವಾದ ವಾಲುವುದು ಸರಿಯಲ್ಲ. ಏಕೆಂದರೆ ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲ ಪ್ರಜೆಗಳಿಗೂ ಇತರೆ ಜೀವರಾಶಿಯೊಡನೆ ಬದುಕುವ ಹಕ್ಕನ್ನು ಕಲ್ಪಿಸಲಾಗಿದೆ.

೧೯೧೩ರಲ್ಲಿ ನೇತ್ರಾವತಿ ನದಿ ಬತ್ತಿತ್ತು ಎಂದು ಮಾತ್ರ ತಿಳಿಸಲಾಗಿದೆ. ಆದರೆ ವಿನಾಯಕ್ ಅವರು ಎರಡು ಮುಖ್ಯ ಪ್ರವಾಹಗಳ (೧೯೨೪, ೧೯೭೪) ಬಗ್ಗೆ ತಿಳಿಸೇ ಇಲ್ಲ. ಆ ಎರಡು ಸಂದರ್ಭದಲ್ಲಿ ಬಂಟ್ವಾಳವು ಸಂಪೂರ್ಣ ಮುಳುಗಿ ಅಲ್ಲಿದ್ದ ನಿವಾಸಿಗಳು ಗುಳೆ ಎದ್ದು ಹೋಗಿದ್ದರು. ಅಷ್ಟಲ್ಲದೆ ಈ ನದಿಯಿಂದ ಅನೇಕ ಸಲ ತೀರದ ಪ್ರದೇಶಗಳು ಪ್ರವಾಹ ಪೀಡೆಯಿಂದ ಬಳಲಿದೆ.
ಅರಣ್ಯನಾಶದ ಬಗ್ಗೆ ಆತಂಕ- ಇದುವರೆಗೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಆಗಿರುವ ಅರಣ್ಯ ನಾಶಗಳ ಕೆಲವು ವಿವರಗಳು ಈ ಮುಂದೆ ಕೊಡಲಾಗಿದೆ. ಅರಣ್ಯ ನಾಶದ ಮುಖ್ಯ ಕಾರಣಗಳೆಂದರೆ ಜಮೀನಿನ ಒತ್ತುವರಿ ಮತ್ತು ಮರಗಳ ಕಳ್ಳ ಸಾಗಾಣಿಕೆ. ಇದಲ್ಲದೆ ಕೊಂಕಣ ರೈಲು ಯೋಜನೆಯ ಅನುಷ್ಠಾನದಲ್ಲಿ ೨೦೦೦ ಹೆಕ್ಟೆರುಗಳಿಗಿಂತ ಹೆಚ್ಚು ಅರಣ್ಯ ನಾಶವಾದದ್ದಲ್ಲದೆ, ೪೦ ಸುರಂಗಗಳ ಕೊರೆಯುವಿಕೆಯಿಂದ ಹಲವಾರು ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿವೆ. ಇದಲ್ಲದೆ ಸಕಲೇಶಪುರದಿಂದ- ಮಂಗಳೂರಿನವರೆಗೆ ಕೈಗೆತ್ತಿಕೊಳ್ಳುವ ಡಬಲ್ ರೋಡ್ ರಚನೆಯಿಂದಲೂ ಸಹ ಅರಣ್ಯ ನಾಶವಾಗುವುದಲ್ಲದೆ, ಭೂ ಕುಸಿತ ಸಂಭವಿಸುವ ಸಾಧ್ಯತೆಗಿಳಿವೆ. ಹಾಗೆಂದು ಅಭಿವೃದ್ಧಿಯ ವಿಚಾರದಲ್ಲಾಗಲಿ ಅಥವಾ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ತ್ಯಾಗ ಬಲಿದಾನಗಳನ್ನು ಮಾಡಬೇಕಾಗುತ್ತದೆ. ಯಾವುದೇ ಒಂದು ಮರವನ್ನು ಕಡಿದರೆ ಅದರ ಬದಲಿಗೆ ಮತ್ತೊಂದು ಗಿಡ ನೆಡಬೇಕೆಂದು ಒ‌ಔ‌ಇ‌ಈ ತಿಳಿಸಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರ ಲಿಖಿತ ಭರವಸೆಯ ವಿನಃ ಕೇಂದ್ರ ಅರಣ್ಯ ಇಲಾಖೆ ಇಂತಹ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ.

ಶೋಲಾ ಅರಣ್ಯದ ನಾಶ- ಕೆಲವು ಪರಿಸರವಾದಿಗಳ ಪ್ರಕಾರ ಪಶ್ಚಿಮ ಘಟ್ಟಗಳ ತುದಿಯಲ್ಲಿರುವ ಮಾರ್ಶ್‌ಲ್ಯಾಂಡ್ಸ್ ಹಾಗೂ ನೀರಾವರಿ ಭೂಮಿಗಳು ಮಳೆಯ ನೀರನ್ನು ಸ್ಪಂಜಿನಂತೆ ಹೀರಿ ಭೂಮಿಯ ಒಳ ಪದರಗಳಲ್ಲಿರುವ ಕಾಲುವೆಗಳಿಗೆ ನೀರನ್ನು ಒದಗಿಸುವುದರ ಮೂಲಕ ಸಣ್ಣ ನೀರಿನ ಝರಿಗಳಿಗೆ ಕಾರಣವಾಗುತ್ತದೆ. ೧೦೩೦ ಮೀಟರ್ ಎತ್ತರದಲ್ಲಿ ಈ ಯೋಜನೆಯಲ್ಲಿ ಮಳೆ ಕೊಯ್ಲು ಮಾಡುವುದರಿಂದ ಈ ಪರಿಸರ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ವಾದವಿದೆ. ಈ ಯೋಜನೆಯಲ್ಲಿ ರನ್ ಆಫ್ ವಾಟರ್ ಅಥವಾ ಭೂಮಿಯ ಮೇಲೆ ಬಿದ್ದು ಹರಿದು ಹೋಗುವ ನೀರನ್ನು ಕೊಯ್ಲು ಮಾಡುವುದರಿಂದ, ಸ್ಪಂಜ್‌ಗಳಂತೆ ವರ್ತಿಸುವ ವೆಟ್‌ಲ್ಯಾಂಡ್‌ಗಳಿಗೆ ಅಥವಾ ಸಣ್ಣ ಝರಿಗಳ ಉತ್ಪಾದನೆಗೆ ಯಾವುದೇ ಧಕ್ಕೆಯಾಗುವುದಿಲ್ಲ.

ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ. ನೂತನ ಮಾದರಿಯ ತಂತ್ರ ಜ್ಞಾನದಿಂದ ಕೊಳವೆಗಳನ್ನು ಅಳವಡಿಸುವುದರಿಂದ ಯಾವುದೇ ರೀತಿಯ ಬೃಹತ್ ಯತ್ರೋಪಕರಣಗಳ ಬಳಕೆಯ ಅವಶ್ಯಕತೆ ಇರುವುದಿಲ್ಲ. ನನ್ನ ಲೇಖನದಲ್ಲಿ ಈ ಪೈಪ್ ಅಳವಡಿಕೆಗೆ ಬೇಕಾಗುವ ಸ್ಥಳ ೭೩೦ ಹೆಕ್ಟೇರ್ ಎಂದು ಬರೆದಿದ್ದೆ. ಕ್ಷಮಿಸಿ ಅದು ಕಣ್ ತಪ್ಪಿನಿಂದ ಆದದ್ದು- ೧೮೦ ಹೆಕ್ಟೇರ್‌ನಷ್ಟು ಮಾತ್ರ ಬೇಕಾಗುತ್ತದೆ (ಪೂರಕ ದಾಖಲೆಗಳು ನನ್ನ ಬಳಿ ಇವೆ). ಬೇಕಾಗುವ ಕಾಲುವೆಯ ಉದ್ದ ಮತ್ತು ಅಗಲವನ್ನು ಲೆಕ್ಕಹಾಕಿದರೆ ೧೮೦ ಹೆಕ್ಟೇರ್‌ಗಳಷ್ಟು ಪ್ರದೇಶ ಮಾತ್ರ ಬೇಕಾಗುತ್ತದೆ. ಈ ೧೮೦ ಹೆಕ್ಟೇರ್‌ಗಳಲ್ಲಿ ಅರಣ್ಯ ಪ್ರದೇಶವಲ್ಲದೆ, ಕಾಫಿ ಹಾಗು ರಬ್ಬರ್ ಎಸ್ಟೇಟ್‌ಗಳು, ಸ್ಕ್ರಬ್
ಏರಿಯಾ ಮತ್ತು ಹಳ್ಳ, ಮಾರ್ಜಿನ್‌ಗಳು ಸೇರಿವೆ.

ಪಶ್ಚಿಮ ಘಟ್ಟದಂತಹ ಅಪೂರ್ವ ಸಂಪತ್ತು ಹೊಂದಿರುವ ಈ ಜಿಲ್ಲೆಗಳು ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುತ್ತಿವೆ, ಅದರ ಬಗ್ಗೆ ನಮಗೂ ಕಾಳಜಿ ಇದೆ. ಇತ್ತೀಚೆಗೆ ೬೦,೦೦೦ ಜನಸಂಖ್ಯೆ ಇರುವ ಕುಂದಾಪುರಕ್ಕೆ ಸರ್ಕಾರ ೫೦ ಕೋಟಿ ಕೊಟ್ಟಿರುವುದು ಸ್ವಾಗತಾರ್ಹ. ಅಂದರೆ ಪ್ರತಿ ತಲೆಗೆ ೮,೦೦೦ ರೂಗಳು. ಇದರ ಆಧಾರಿತ ೬೦ ಲಕ್ಷ ಜನಸಂಖ್ಯೆ ಇರುವ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಿಗೆ ೫೦೦೦ ಕೋಟಿಗಳನ್ನು ಮಂಜೂರು ಮಾಡಿದರೆ ಈ ಜಿಲ್ಲೆಗಳಲ್ಲಿ ನೀರಿನ ಬವಣೆಯನ್ನು ಶಾಶ್ವತವಾಗಿ ಪರಿಹರಿಸಬಹುದು. ಏಕೆಂದರೆ ೪೪೦೦ ಮಿಮೀ ಮಳೆಯಾಗುವ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿದೆ ಎಂದರೆ ಇಷ್ಟು ವರ್ಷ ನಮ್ಮನಾಳಿದ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಈ ರಾಜಕಾರಣಿಗಳ ಬೇಜವಾಬ್ದಾರಿಯಿಂದ ಮಳೆಗಾಲದಲ್ಲಿಯೂ ನೀರಿಗಾಗಿ ಪರೆದಾಡುವ ಪರಿಸ್ಥಿತಿ ನಮ್ಮ ಬರಪೀಡಿತ ಜಿಲ್ಲೆಗಳಲ್ಲಿ ತಲೆದೋರಿದೆ. ಇದನ್ನು ಸಮಸ್ತ ಕನ್ನಡಿಗರೂ ಬಲ್ಲರು. ಬೆಳೆಯುತ್ತಿರುವ ನಗರವಾದ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿರುವುದರಿಂದ ದಿನವೊಂದಕ್ಕೆ ೫೦೦ ಮಿಲಿಯನ್ ಗ್ಯಾಲನ್‌ಗಳಷ್ಟು ನೀರು ಬೇಕೆಂದು ಹೇಳಿದ್ದಾರೆ! ಇದು ಸತ್ಯಕ್ಕೆ ದೂರವಾದುದು. ನನಗೆ ತಿಳಿದಿರುವ ಮಟ್ಟಿಗೆ ೮೫ ಲಕ್ಷ ಜನ ಸಂಖ್ಯೆಯಿರುವ ಬೆಂಗಳೂರಿಗೆ ದಿನವೊಂದಕ್ಕೆ ಬೇಕಾಗಿರುವ ನೀರಿನ ಪ್ರಮಾಣ ಕೇವಲ ೧೭೭ ಮಿಲಿಯನ್ ಗ್ಯಾಲನ್ ನೀರು. ೫೦೦ ಮಿ.ಗ್ಯಾಲನ್/ಪ್ರತಿ ದಿನಕ್ಕೆ ಬೇಕಾದರೂ ವರ್ಷಕ್ಕೆ ೩೧ ಟಿ.ಎಂ.ಸಿ.ಯಾಗುತ್ತದೆ? ೩೦೧೬ ಟಿ.ಎಂ.ಸಿ. ನೀರು ಸಮುದ್ರಕ್ಕೆ ಪಾಲಾಗುವುದನ್ನು ತಡೆದು ೬೦ ಟಿ‌ಎಂಸಿಯಷ್ಟು ಮಳೆ ನೀರನ್ನು ಶೇಖರಿಸಿದರೆ ಇಡಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಿಗೆ ಶಾಶ್ವತ ನೀರಿನ ಪೂರೈಕೆ ಮಾಡಬಹುದು.

ವಿನಾಯಕ್ ಅವರು ತಿಳಿಸಿರುವಂತೆ ನಾನು ದೂರದ ಬ್ರಿಟನ್ನಿನಲ್ಲಿ ಕುಳಿತು ಈ ಯೋಜನೆಯ ಬಗ್ಗೆ ಮಾತನಾಡುತ್ತಿಲ್ಲ. ದೆಹಲಿಯಲ್ಲಿರುವ ಮಿತ್ರರು ಕರ್ನಾಟಕ್ಕೆ ಬರುವುದಕ್ಕಿಂತ ಹೆಚ್ಚು ಸಲ ಈ ಕೆಲಸಕ್ಕಾಗಿ ಭಾರತಕ್ಕೆ ಬರುತ್ತಿರುತ್ತೇನೆ. ನಾನು ಪ್ರತಿಬಾರಿ ಬಂದಾಗಲು ಇವರು ನನ್ನ ಜೊತೆ ಬಂದರೆ ನಾನು ಸುತ್ತಾಡಿರುವ ಹಳ್ಳಿಗಳ ನಿಜ ಪರಿಸ್ಥಿತಿಯನ್ನು ಕಾಣಬಹುದು. ಯಾರೇ ಆಗಲಿ ಸತ್ತ ವ್ಯಕ್ತಿಯಿಂದ ಕಣ್ಣನ್ನು ಪಡೆಯುತ್ತಾರೆಯೇ ವಿನಃ ಬದುಕಿರುವ ವ್ಯಕ್ತಿಯಿಂದ ಅಲ್ಲ. ಮುಂಗಾರು ಮಳೆ ಸಂದರ್ಭದಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೇತ್ರಾವತಿನದಿಯ ನೀರಿನಲ್ಲಿ ಕೇವಲ ಶೇ.೧೦ರಷ್ಟು ನೀರನ್ನಷ್ಟೇ ಬರಪೀಡಿತ ಪ್ರದೇಶಗಳು ಕೇಳುವುದು. ಈ ಯೋಜನೆ ಜಾರಿಯಾದರೆ ಬರಪೀಡಿತ ಜಿಲ್ಲೆಗಳು ಶಾಶ್ವತವಾಗಿ ಮರಭೂಮಿಯಾಗುವುದು ತಪ್ಪುತ್ತದೆ.
ಡಾ.ಮಧು ಸೀತಪ್ಪ

ಬರಪೀಡಿತ ಜಿಲ್ಲೆಗಳಿಗೆ ಬೇಕು ನೇತ್ರಾವತಿಯ ಬೈಪಾಸ್ ಸರ್ಜರಿ



೪೪೦೦ ಮಿ.ಮಿ. ಮಳೆಯಾಗುವ ಕರಾವಳಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿರುವಾಗ ಸರಾಸರಿ ೬೭೪ ಮಿ.ಮೀ. ಮಳೆಯಾಗುವ ಬರಡು ಭೂಮಿಯಲ್ಲಿ ಮಳೆಗಾಲದಲ್ಲೂ ನೀರಿಗೆ ಪರದಾಡುವ ಪರಿಸ್ಥಿತಿ ಎಂದರೆ ಆಶ್ಚರ್ಯವಿಲ್ಲ. ಸರ್ಕಾರದ ಅಂಕಿ ಅಂಶಗಳ ಅನ್ವಯ ಬರಪೀಡಿತ ಜಿಲ್ಲೆಗಳಲ್ಲಿ ೪೮೬ರಿಂದ ೭೦೦ ಮಿ. ಮೀ. ಮಳೆಯಾಗುತ್ತದೆ. ಕನಿಷ್ಠ ೫೦ ಮಿ. ಮೀ. ಮಳೆ ರಭಸವಾಗಿ ಮೂರು ಗಂಟೆ ಕಾಲ ಸುರಿದರೆ ಕೆರೆಗಳಿಗೆ ನೀರು ಬರುತ್ತದೆ. ಈ ಜಿಲ್ಲೆಗಳಲ್ಲಿ ವಾರ್ಷಿಕ ೧೭ರಿಂದ ೪೫ ದಿನಗಳು ಮಳೆಯಾಗುತ್ತದೆ. ಎರಡು ಗಂಟೆಗೂ ಹೆಚ್ಚು ಮಳೆಯಾಗುವ ದಿನಗಳು ತೀರ ವಿರಳ. ಮಳೆಯಾದರೂ ಈ ಬಿಸಿಲುನಾಡಿನಲ್ಲಿ ನೀರು ಆವಿಯಾಗುವುದರಿಂದ, ಭೂಮಿಗೆ ಜಿನುಗುವುದರಿಂದ ಹಾಗು ಅಂತರ್ಜಲ ಇಂಗಿರುವುದರಿಂದ ಕೆರೆಗಳಲ್ಲಿ ನೀರು ಕೆಲವು ತಿಂಗಳುಗಳಿಗಿಂತ ಹೆಚ್ಚು ನಿಲ್ಲಲಾರದು. ಸತತವಾಗಿ ಹಾಗು ನಿರ್ದಿಷ್ಟ ಕಾಲದಲ್ಲಿ ಮಳೆಯಾಗದ ಕಾರಣ ಹಾಗು ಮಳೆಯಾಗುವ ದಿನಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ಜಿಲ್ಲೆಗಳಲ್ಲಿ ಒಟ್ಟು ೧೫,೪೪೨ ಕೆರೆಗಳಿವೆ. ೨೦೦೬ರಲ್ಲಿ ಶೇ.೯೦ರಷ್ಟು ಕೆರೆಗಳಿಗೆ, ೨೦೦೭ರಲ್ಲಿ ಶೇ.೪೫ ಹಾಗೂ ೨೦೦೮ರಲ್ಲಿ ಶೇ.೯೦ರಷ್ಟು ಕೆರೆಗಳಿಗೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಒಂದು ತೊಟ್ಟು ನೀರು ಸಹ ಬಂದಿಲ್ಲ. ಇಲ್ಲಿ ನಾನು ರಾಜಸ್ತಾನದ ಲಾಪೋಡಿಯ ಗ್ರಾಮವಾಗಲಿ ಅಥವಾ ಪಾಕಿಸ್ತಾನದ ಹೆಸರಿಲ್ಲದ ಪ್ರದೇಶದ ಬಗ್ಗೆಯಾಗಲಿ ಅಥವಾ ನಂದಿ ಬೆಟ್ಟದ ಸಣ್ಣ ಹಳ್ಳದ ಬಗ್ಗೆ ಬರೆಯುತ್ತಿಲ್ಲ. ೩ ಕೋಟಿ ಜನಸಂಖ್ಯೆಯ ಹಳೆ ಮೈಸೂರಿನ ೧೪ ಬರಪೀಡಿತ ಜಿಲ್ಲೆಗಳ ೮೬ ತಾಲ್ಲೂಕುಗಳು ಹಾಗು ೩,೨೫೦೦೦ ಕೋಟಿ ಗೃಹ ಉತ್ಪನ್ನ ಮಾಡುವ ಬೆಂಗಳೂರು ನಗರದ ನೀರಿನ ಬವಣೆಯ ಬಗ್ಗೆ. ನಮ್ಮ ರಾಜ್ಯದಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಾಕಷ್ಟು ಅಸಮತೋಲನ ಆಗಿದೆ. ಹಳೆ ಮೈಸೂರು ಪ್ರಾಂತ್ಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ. ಆದುದರಿಂದಲೆ ೧೪ ಜಿಲ್ಲೆಗಳ ೮೬ ತಾಲ್ಲೂಕುಗಳು ಬರಪೀಡಿತವಾಗಿವೆ. ಪರಮಶಿವಯ್ಯನವರ ಯೋಜನೆ ಈ ಅಸಮತೋಲನವನ್ನು ನಿವಾರಿಸುವಲ್ಲಿ ಉಪಯೋಗವಾಗಬಹುದು. ಈ ಯೋಜನೆ ೮೬ ತಾಲ್ಲೂಕುಗಳಲ್ಲದೆ ಬೆಂಗಳೂರು ನಗರಕ್ಕೂ ನೀರನ್ನು ತರಲಿದೆ.
ಹಳೆ ಮೈಸೂರಿನ ೧೪ ಜಿಲ್ಲೆಗಳ ಪೈಕಿ (ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡು) ೩೭.೧೪ ಲಕ್ಷ ಹೆಕ್ಟೇರುಗಳಷ್ಟು ಭೂಮಿ ಬಿತ್ತನೆಯಾಗುವ ಪ್ರದೇಶ, ಅದರಲ್ಲಿ ೭.೨೫ ಲಕ್ಷ ಹೆಕ್ಟೇರುಗಳಷ್ಟು ಅಂದರೆ ಶೇ.೧೯%ರಷ್ಟು ಭೂಮಿಗೆ ನೀರಾವರಿ ದೊರತಿದೆ. ಕಾವೇರಿಯಿಂದ ಒಟ್ಟು ೭,೬೯,೯೮೮ ಹೆಕ್ಟೇರುಗಳಷ್ಟು ಭೂಮಿಗೆ ನೀರಾವರಿಯಾಗುತ್ತಿದೆ. ಕೆ.ಆರ್.ಎಸ್. ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದ ವಿವಿಧ ಬೆಳೆಗಳಿಗೆ ೬೧.೨೦ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಈಗಾಗಲೆ ಉಪಯೋಗಿಸುತ್ತಿದ್ದರೆ ಅದನ್ನು ೩೮.೯೮ ಟಿ.ಎಂ.ಸಿ.ಗೆ ಇಳಿಸಲು ಟ್ರಿಬ್ಯೂನಲ್ ಆದೇಶಿಸಿದೆ. ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೨೭೦ ಟಿ.ಎಂ.ಸಿ.ಯಷ್ಟು ನೀರು ಕಾವೇರಿಯಿಂದ ದೊರೆತಿದ್ದರೂ ಅದರಲ್ಲಿ ೭೦ಚಟಿ.ಎಂ.ಸಿ.ಯಷ್ಟು ನೀರು ಕಾವೇರಿ ಜಲಾಯನ ಪ್ರದೇಶದಲ್ಲಿ ಬರುವ ಕೆರೆಗಳ ಲೆಕ್ಕದಲ್ಲಿದೆ. ನೀರಾವರಿ ಇಲಾಖೆಯ ಅನ್ವಯ ಕೆರೆಗಳಿಂದ ಕೇವಲ ೧೫ ಟಿ.ಎಂ.ಸಿ.ಯಷ್ಟು ನೀರು ಮಾತ್ರ ನಮಗೆ ದೊರಕುತ್ತಿದೆ. ಇದಲ್ಲದೆ ತಮಿಳುನಾಡಿಗೆ ಕೇಂದ್ರ ಸರ್ಕಾರ ಬಿಳೆಗೊಂಡ್ಲುವಿನಲ್ಲಿ ಅಳವಡಿಸಿರುವ ಮಾಪನದ ಅನ್ವಯ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ಪ್ರತಿ ಸಾಲು ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ (೧೯೦+೧೪೮). ಅಂದರೆ ತಮಿಳುನಾಡಿಗೆ ಕಾವೇರಿ ಟ್ರಿಬ್ಯೂನಲ್ ವರದಿಯಂತೆ ೧೯೦ ಟಿ.ಎಂ.ಸಿ. ನೀರಲ್ಲದೆ ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಈ ಹೆಚ್ಚುವರಿ ನೀರು ನ್ಯಾಯಯುತವಾಗಿ ಉತ್ಪತ್ತಿಯಾಗುವ ರಾಜ್ಯಕ್ಕೆ ಸೇರಬೇಕಾದದ್ದು. ಟ್ರಿಬ್ಯೂನಲ್ ವರದಿಯು ಸಹ ಹೆಚ್ಚುವರಿ ನೀರು ಯಾರಿಗೆ ಸೇರಬೇಕೆಂದು ಎಲ್ಲೂ ಹೇಳಿಲ್ಲ. ಆದರೆ ೨೦೦೫ರಲ್ಲಿ ಡಿ.ಎಂ.ಕೆ.ಯನ್ನು ಮೆಚ್ಚಿಸಲು ಯು.ಪಿ.ಎ. ಸರ್ಕಾರ ಹೆಚ್ಚುವರಿ ನೀರನ್ನು ಹೇಗೆ ಹಂಚಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ಸಲಹೆ ಕೇಳಿದೆ. ಈ ವಿಚಾರವನ್ನು ಸರ್ವೋಚ್ಛ ನ್ಯಾಯಾಲಯ ಇನ್ನು ಕೈಗೆತ್ತಿಕೊಂಡಿಲ್ಲ. ತಮಿಳುನಾಡಿಗೆ ಈ ವಿವಾದ ನ್ಯಾಯಾಲಯದಲ್ಲಿ ಹೆಚ್ಚು ದಶಕಗಳು ಉಳಿದಷ್ಟು, ೧೪೮ ಟಿ.ಎಂ.ಸಿ.ಯಷ್ಟು ಹೆಚ್ಚುವರಿ ನೀರು ಪ್ರತಿಸಾಲು ಹರಿದು ಹೋಗುತ್ತಿರುತ್ತದೆ. ಕಳೆದ ಮೂರು ದಶಕಗಳ ನಮ್ಮ ರಾಷ್ಟ್ರದ ರಾಜಕಾರಣ ಗಮನಿಸಿದರೆ ಯಾವುದೇ ಪಕ್ಷ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಬೇಕಾದರೆ ತಮಿಳುನಾಡಿನ ಪಕ್ಷಗಳ ಬೆಂಬಲ ಅತ್ಯಗತ್ಯ. ಅಂದರೆ ಕಾವೇರಿಯಿಂದ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳು ನೀರು ಪಡೆಯುವುದು ನನಸಾಗದ ಕನಸು.
ಕೃಷ್ಣಾ ನದಿಯಿಂದ ನಮ್ಮ ರಾಜ್ಯಕ್ಕೆ ೭೩೪ ಟಿ.ಎಂ.ಸಿ. ಸ್ಕೀಮ್ `ಎ'ನಿಂದ ಹಾಗೂ ೨೭೮ ಟಿ.ಎಂ.ಸಿ. ಸ್ಕೀಮ್ `ಬಿ'ನಿಂದ ಮಂಜೂರಾಗಿದೆ. ಅಂದರೆ ಒಟ್ಟು ೧೦೧೨ ಟಿ.ಎಂ.ಸಿ.ಯಷ್ಟು ನೀರು. ಇದರಲ್ಲಿ ತುಂಗಾಭದ್ರಾ ನದಿಯ ೪೫೦ ಟಿ.ಎಂ.ಸಿ.ಯಷ್ಟು ನೀರು ಸೇರಿದೆ. ಹಳೆ ಮೈಸೂರಿಗೆ ಸ್ಕೀಮ್ `ಎ'ನಿಂದ ೯೬ ಹಾಗೂ ಸ್ಕೀಮ್ `ಬಿ'ನಿಂದ ೨೨ ಟಿ.ಎಂ.ಸಿ.ಯಷ್ಟು ದೊರೆತಿದೆ. ನ್ಯಾಯಯುತವಾಗಿ ಹಳೆ ಮೈಸೂರಿನ ಪಾಲಿನ ತುಂಗಭದ್ರಾ ನದಿಯ ೪೫೦ರಲ್ಲಿ ಕನಿಷ್ಠ ೨೫೦ ಟಿ.ಎಂ.ಸಿ.ಯಷ್ಟಾದರೂ ನೀರು ಕೊಡಬೇಕಾಗಿತ್ತು. ೧೦೧೨ ಟಿ.ಎಂ.ಸಿ.ಯಲ್ಲಿ ಶೇ.೮೦ರಷ್ಟು ಹೈದರಾಬಾದ್ ಕರ್ನಾಟಕಕ್ಕೆ ನಮ್ಮ ಸರ್ಕಾರ ಕೊಟ್ಟರೆ, ಉಳಿದ ಶೇ.೧೦% (೧೦೦ ಟಿ.ಎಂ.ಸಿ) ಆಂಧ್ರಪ್ರದೇಶಕ್ಕೆ ಹೋಗುತ್ತಿದೆ. ಇದಲ್ಲದೆ ತೆಲುಗು ಗಂಗಾ ಅಡಿಯಲ್ಲಿ ತಮಿಳುನಾಡಿನ ಚೆನ್ನೈಗೆ ಕೃಷ್ಣಾ ನದಿಯ ಕರ್ನಾಟಕದ ಪಾಲಿನಲ್ಲಿ ೫ ಟಿ.ಎಂ.ಸಿ. ನೀರು ಹೋಗುತ್ತಿದೆ. ಈಗಾಗಲೆ ಅಣೆಕಟ್ಟುಗಳನ್ನು ಕಟ್ಟಿ ಕಾಲುವೆಗಳ ಮೂಲಕ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶವು ರಾಷ್ಟ್ರದ ರಾಜಕಾರಣದಲ್ಲಿ ತಮಿಳುನಾಡಿನಷ್ಟೇ ಬಲಿಷ್ಠವಾದದ್ದು ಹಾಗೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯ ನಮ್ಮ ರಾಜ್ಯ ರಾಜಕಾರಣದಲ್ಲಿ ಪ್ರಬಲವಾಗಿದೆ. ಕಾಂಗ್ರೆಸ್, ಜೆ.ಡಿ.ಎಸ್ ಹಾಗು ಬಿ.ಜೆ.ಪಿ. ಪಕ್ಷಗಳು ಈ ಪ್ರಾಂತ್ಯದ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಅಂದರೆ ಬರಪೀಡಿತ ಹಳೆ ಮೈಸೂರು ಪ್ರಾಂತ್ಯದ ಎರಡನೆಯ ಕನಸು ಸಹ ಭಗ್ನವಾದಂತೆ.
ಹೇಮಾವತಿ ನದಿಯಿಂದ ಈಗಾಗಲೆ ೫೫ ಟಿ.ಎಂ.ಸಿ.ಯಷ್ಟು ನೀರನ್ನು ನಾವು ಬಳಸುತ್ತದ್ದೇವೆ. ಇದು ಕಾವೇರಿಯ ಉಪನದಿಯಾಗಿರುವುದರಿಂದ ಕಾವೇರಿ ಟ್ರಿಬ್ಯೂನಲ್‌ನ ಭೂತಗನ್ನಡಿಯಡಿಯಲ್ಲಿ ಬರುತ್ತದೆ. ಟ್ರಿಬ್ಯೂನಲ್ ಕೇವಲ ೪೫ ಟಿ.ಎಂ.ಸಿ.ಯಷ್ಟು ನೀರನ್ನು ಮಾತ್ರ ಬಳಸಿ ಎಂದು ಆದೇಶಿಸಿದೆ. ಈಗಾಗಲೆ ಹೇಮಾವತಿ ಯೋಜನೆಯಡಿಯಲ್ಲಿ ಬರುವ ಪ್ರದೇಶಗಳಿಗೆ ನೀರುಣಿಸಲು ಸಾದ್ಯವಾಗುತ್ತಿಲ್ಲ. ಇರುವ ಒಂದೇ ಮಾರ್ಗವೆಂದರೆ ನೇತ್ರಾವತಿಯ ಬೃಹತ್ ಮಳೆ ಕೊಯ್ಲು ಯೋಜನೆ. ಆದುದರಿಂದಲೆ ನಾವು ಈ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ ನಮ್ಮನ್ನು ನೀತಿಗೆಟ್ಟವರು ಎಂದು ಕೆಲವರು ಬಣ್ಣಿಸಿದರೆ, ಇನ್ನು ಕೆಲವರು ಪರಿಸರ ವಿರೋಧಿಗಳೆಂಬ ಪಟ್ಟ ಕಟ್ಟಿದ್ದಾರೆ. ಪರಮಶಿವಯ್ಯನವರ ಯೋಜನೆಯಿಂದ ಬರಪೀಡಿತ ಜಿಲ್ಲೆಗಳಲ್ಲದೆ, ಬೆಂಗಳೂರು ನಗರಕ್ಕೂ ನೀರು ದೊರೆಯಲಿದೆ. ಶೇ.೯೦ರಷ್ಟು ಹೋಟೆಲ್ ಉದ್ಯಮದವರಲ್ಲದೆ ಸುಮಾರು ೮ ಲಕ್ಷ ಕರಾವಳಿಯ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬುದನ್ನು ಅನಗತ್ಯ ಹೇಳಿಕೆಗಳು ಕೊಡುವ ಮುಂಚೆ ಈ ನಾಯಕರು ಯೋಚನೆ ಮಾಡಬೇಕು. ನಾನು ಈ ಲೇಖನದಲ್ಲಿ ವಿವರಿಸಿರುವಂತೆ ಬರಪೀಡಿತ ಜಿಲ್ಲೆಗಳ ನೀರಿನ ಬವಣೆಯ ನಿವಾರಣೆಗೆ ಒಂದು ಕಡೆ ತಮಿಳುನಾಡು, ಇನ್ನೊಂದು ಕಡೆ ಆಂಧ್ರ ಪ್ರದೇಶ (ಹೈದರಾಬಾದ್ ಕರ್ನಾಟಕ) ಹಾಗೂ ಕರಾವಳಿಯ ಪರಿಸರವಾದಿಗಳ ವಿರೋಧವಿದೆ. ಇದು ಹೇಗಿದೆಯೆಂದರೆ ಇತ್ತ ದರಿ, ಅತ್ತ ಪುಲಿ, ಹಿತ್ತಲಲ್ಲಿ ಮತ್ತೊಂದು ಪುಲಿಯೆಂಬಂತೆ.
ಪಶ್ಚಿಮ ಘಟ್ಟಗಳ ಪರಿಸರಕ್ಕೆ ಮಾರಕವಾದ ಗುಂಡ್ಯ ಯೋಜನೆಯ ವಿರೋಧಿಸಿದ ಲೇಖನಗಳಲ್ಲಿ ಪ್ರಥಮ ಲೇಖನ ನನ್ನದಾಗಿತ್ತು. ಇದಲ್ಲದೆ ಚೀನಾ ದೇಶ ಅಣ್ವಸ್ತ್ರಗಳಿಂದ ಹಿಮಾಲಯ ಪರ್ವತದಲ್ಲಿ ರಂಧ್ರ ಕೊರೆದು ಬ್ರಹ್ಮಪುತ್ರ ನದಿಯನ್ನು ತಿರುಗಿಸುವ ವಿರೋಧವಾಗಿಯೂ ನಾನು ಲೇಖನ ಬರೆದಿದ್ದೆ. ಇದಲ್ಲದೆ ವಿಶ್ವೇಶ್ವರ ಭಟ್ಟರು ಚೀನಾದಿಂದ ಬಂದ ಮೇಲೆ ಬ್ರಹ್ಮಪುತ್ರ ನದಿಯ ಬಗ್ಗೆ ಏನಾದರೂ ಪ್ರಸ್ತಾಪವಾಯಿತೆ ಎಂದು ಸಹ ವಿಚಾರಿಸಿದ್ದೇನೆ. ಬೆಳೆಯುತ್ತಿರುವ ಜನಸಂಖ್ಯೆ, ಆಹಾರ ಹಾಗೂ ನೀರಿನ ಕೊರತೆ ಮತ್ತು ದೇಶದ ಆರ್ಥಿಕ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಬರಪೀಡಿತ ಜಿಲ್ಲೆಗಳಂತೆ ನೀರಿನ ಬವಣೆಯನ್ನು ಎದುರಿಸುತ್ತಿರುವ ಉತ್ತರ ಚೀನಾದ ಹಳದಿ ನದಿ ಅಥವಾ ಯೆಲ್ಲೊ ರಿವರ್‌ಗೆ ದಕ್ಷಿಣದ ಯಾಂಗ್ಸೆ ನದಿಯಿಂದ ೨೦೦೦ ಕಿ.ಮೀ.ಗಳಿಗೂ ಹೆಚ್ಚು ದೂರಕ್ಕೆ ನೀರನ್ನು ಪಂಪ್ ಮಾಡಲಾಗುತ್ತಿದೆ. ಇದಲ್ಲದೆ ಏಷ್ಯಾ ಖಂಡದ ಬಹುತೇಕ ನದಿಗಳು ಉಗಮವಾಗುವ ಟಿಬೆಟಿಯನ್ ಪ್ಲಾಟೊನಿಂದ ಚೀನಾಕ್ಕೆ ಬಯಾಂಕ ಪರ್ವತಗಳಲ್ಲಿ ಅಣ್ವಸ್ತ್ರಗಳಿಂದ ಕಾಲುವೆಗಳನ್ನು ಮಾಡಿ ನೀರನ್ನು ಕೊಂಡೊಯ್ಯಲು ಚೀನಾ ಕಾಮಗಾರಿಯನ್ನು ಪ್ರಾರಂಭಿಸಿದೆ. ಇಷ್ಟಲ್ಲದೆ ಆಫ್ರಿಕಾ ಖಂಡದ ಇಥಿಯೋಪಿಯದಂತಹ ರಾಷ್ಟ್ರಗಳಲ್ಲಿ ಚೀನಾ ಅಲ್ಲದೆ ಭಾರತದ ಕಂಪನಿಗಳು ಕಡಿಮೆ ದರದಲ್ಲಿ ಆಹಾರ ಉತ್ಪಾದನೆಗೆ ಲಕ್ಷಾಂತರ ಹೆಕ್ಟೇರುಗಳಷ್ಟು ಜಮೀನನ್ನು ಖರೀದಿಸಿವೆ. ಸಾವಿರಾರು ಟಿ.ಎಂ.ಸಿ.ಯಷ್ಟು ಸಿಹಿ ನೀರು ನಮ್ಮ ರಾಷ್ಟ್ರದಲ್ಲಿ ಸಮುದ್ರ ಪಾಲಾಗುತ್ತಿದೆ. ಶೇ.೯೦ರಷ್ಟು ಮಂದಿ ನಮ್ಮ ರಾಷ್ಟ್ರದಲ್ಲಿ ವ್ಯವಸಾಯವನ್ನು ಅವಲಂಬಿಸಿದ್ದರೂ ವ್ಯವಸಾಯಕ್ಕೆ ಬೇಕಿರುವ ನೀರನ್ನೊದಗಿಸದೆ ರಾಷ್ಟ್ರಕ್ಕೆ ಅಗತ್ಯವಿರುವ ಧವಸದಾನ್ಯಗಳನ್ನು ಬೆಳೆಯಲಿಕ್ಕಾಗದೆ, ವಿಯೆಟ್ನಾಮ್, ಮಲೇಶಿಯಾದಿಂದ ಅಕ್ಕಿಯನ್ನು ಅಮದು ಮಾಡಿಕೊಳ್ಳುವ ಪರಿಸ್ಥಿತಿ ಭಾರತ ಎದುರಿಸುತ್ತಿದೆ. ಇನ್ನು ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಬನ್ ಕ್ರೆಡಿಟ್ ಜಾರಿಗೆ ಬರಲಿದೆ. ಅಂದರೆ ಪ್ರತಿ ದೇಶದಲ್ಲಿ ವಾಹನ ಹಾಗೂ ಕೈಗಾರಿಕೆಗಳಿಂದ ಭೂಮಿಗೆ ಉಗುಳುವ ಇಂಗಾಲವನ್ನು ಹೀರಲು ಮರಗಳನ್ನು ಬೆಳೆಸಬೇಕಾಗುತ್ತದೆ. ಅರ್ಥಿಕತೆ, ಆಹಾರ, ಕಾರ್ಬನ್ ಕ್ರೆಡಿಟ್, ಕೈಗಾರಿಕೆ, ವ್ಯವಸಾಯ ಹಾಗೂ ಮುಖ್ಯವಾಗಿ ಕುಡಿಯುವುದಕ್ಕೆ ನೀರು ಅತ್ಯವಶ್ಯಕ.
ಅಂಕಿ ಅಂಶಗಳ ಪ್ರಕಾರ ಹಳೆ ಮೈಸೂರಿನ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ೧೯೯೭ರಲ್ಲಿ ೨೪ ಮೀಟರ್ ಇದ್ದದ್ದು ೨೦೦೪ರಲ್ಲಿ ೪೧ ಮೀಟರುಗಳಿಗೆ ಕುಸಿದಿದೆ. ೫೭ ತಾಲ್ಲುಕುಗಳಲ್ಲಿ ಅಂರ್ತಜಲ ಸಂದಿಗ್ಧ ಮಟ್ಟಕ್ಕೆ ತಲುಪಿದೆ. ೧೪,೨೫೭ ವಸತಿ ಪ್ರದೇಶದಲ್ಲಿ ಫ್ಲೋರೈಡ್ ಹಾಗು ನೈಟ್ರೇಟ್ ಲವಣಗಳು ಹಾನಿಕಾರಕ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವೆ. ೩೧.೨೦ ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳು ಜೀವನೋಪಾಯಕ್ಕೆ ವ್ಯವಸಾಯವನ್ನು ಅವಲಂಬಿಸಿದೆ. ವ್ಯವಸಾಯವಿರಲಿ ಕುಡಿಯಲು ಶುದ್ದ ನೀರಿಲ್ಲದೆ ತವಕಿಸುತ್ತಿವೆ. ಈ ಬರಪೀಡಿತ ಜಿಲ್ಲೆಗಳಿಗೆ ನೀರು ಬರುವ ಎಲ್ಲ ಮಾರ್ಗಗಳು ಮುಚ್ಚಿಹೋಗಿವೆ. ಈ ಪ್ರದೇಶಕ್ಕೆ ನೀರಿನ ಹಂಚಿಕೆಯ ವಿಚಾರದಲ್ಲಿ ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಂದ ಅನ್ಯಾಯವಾಗಿದೆ. ಹೃದಯದಲ್ಲಿ ಹೇಗೆ ಟ್ರಿಪಲ್ ವೆಸೆಲ್ ಬ್ಲಾಕ್ ಆದಾಗ ಬೈಪಾಸ್ ಸರ್ಜರಿ ಅಗತ್ಯವೊ ಹಾಗೆ ಬರಪೀಡಿತ ಜಿಲ್ಲೆಗಳು ಸಾಯದೆ ಉಳಿಯ ಬೇಕಾದರೆ ಇರುವ ಒಂದೆ ಮಾರ್ಗ ಯಾವುದಾದರು ನದಿಯ ಬೈಪಾಸ್ ಸರ್ಜರಿ. ಏಕೆಂದರೆ ಬರಪೀಡಿತ ಜಿಲ್ಲೆಗಳಲ್ಲಿ ಅಂತರ್ಜಲ ಅಭಿವೃದ್ಧಿಯಾಗಬೇಕಾದರೆ, ಕೆರೆಗಳಲ್ಲಿ ೩೬೫ ದಿನ ಕನಿಷ್ಠ ೩ ಮೀಟರುಗಳಷ್ಟು ನೀರು ಸತತವಾಗಿ ೨೫ಕ್ಕೂ ಹೆಚ್ಚು ವರ್ಷಗಳು ನಿಲ್ಲಬೇಕು. ಒತ್ತುವರಿಯಾಗಿರುವ ಅರಣ್ಯ ಪ್ರದೇಶವನ್ನು ತೆರುವು ಮಾಡಿ ಶೇ.೮%ರಷ್ಟು ಇರುವ ಅರಣ್ಯ ಪ್ರದೇಶವನ್ನು ಶೇ.೩೦ಕ್ಕೆ ಏರಿಸಬೇಕು. ಇದನ್ನು ಕೇವಲ ನೀರಿನ ಶೇಖರಣೆ, ಮಳೆ ಕೊಯ್ಲು, ಮಿತವಾದ ನೀರಿನ ಬಳಕೆ ಅಥವಾ ಕೆರೆಗಳ ಅಭಿವೃದ್ಧಿಯಿಂದ ಮಾತ್ರ ಮಾಡಲು ಸಾದ್ಯವಿಲ್ಲ. ಇವೆಲ್ಲವೂ ಹೃದ್ರೋಗಿ ಕೊಲೆಸ್ಟ್ರಾಲ್ ತಗ್ಗಿಸುವುದು, ಧೂಮಪಾನ ಬಿಡುವುದು ಹಾಗೂ ದೇಹದ ತೂಕವನ್ನು ಕರಗಿಸುವ ವಿಧಾನಗಳಂತೆ. ಯಾವುದಾದರೂ ನದಿಯಿಂದ ಬೈಪಾಸ್ ಸರ್ಜರಿ ಅತ್ಯಗತ್ಯ ಇರುವಂತೆ ೧೫,೪೪೨ ಕೆರೆಗಳಿಗೆ ಆಂಜಿಯೊ ಪ್ಲಾಸ್ಟಿಯೂ ಅಗತ್ಯವಿದೆ. ಕೆರೆಗಳ ಅಬಿವೃದ್ಧಿ ಪ್ರಾಧಿಕಾರ ರಚಿಸಿ ಕೆರೆಗಳ ಜೀರ್ಣೋದ್ದಾರ ಕಾರ್ಯವು ಪ್ರಾರಂಭವಾಗಬೇಕು. ಯಾವ ನದಿಯಿಂದ ಡಾ.ಯಡಿಯೂರಪ್ಪನವರು ಬೈಪಾಸ್ ಮಾಡುತ್ತಾರೊ ಇದು ಅವರ ವಿವೇಚನೆಗೆ ಬಿಟ್ಟದ್ದು. ನನಗೆ ಕಂಡುಬರುವಂತೆ ನೇತ್ರಾವತಿ ನದಿಯಲ್ಲದೆ ಬೇರೆ ಮಾರ್ಗ ಅವರಿಗಿಲ್ಲ. ಬರಪೀಡಿತ ಜಿಲ್ಲೆಯ ಜನ ಮೊಸಳೆ ಕಣ್ಣೀರಿನ ಜಾಣ ಉಪಾಯಗಳನ್ನು ರಾಜಕಾರಣಿಗಳು ಹಾಗು ಪರಿಸರವಾದದ ಸೋಗಿನಲ್ಲಿರುವ ಬುದ್ಧಿಜೀವಿಗಳಿಂದ ಪದೇ ಪದೇ ಕೇಳಿ ಬೇಸತ್ತಿದ್ದಾರೆ. ಬಣ್ಣದ ಕನಸೊ, ನನಸಾಗದ ಕನಸೊ ಆದರೆ ನೇತ್ರಾವತಿಯ ತಿರುವೇ ಶಿವ ಶಿವ ಎನ್ನುವವರ ದುಃಸ್ವಪ್ನ ಬರಪೀಡಿತ ಜನರಿಗೆ ಬೀಳದಿರಲಿ ಎಂದು ಆಶಿಸುತ್ತೇನೆ.
ಡಾ.ಮಧು ಸೀತಪ್ಪ

Saturday, February 13, 2010

Some links about me and my work

Dr Madhusudhan, MD MS FRCS (Ed) MS Ophth
Optimax Liverpool, Manchester and Birmingham Laser Eye Surgery Clinic


Dr Madhu Laser Eye Surgeon
Born and educated in Bangalore, India,

Read more at :http://www.optimax.co.uk/our_surgeons/dr_madhusudhan.aspx

ನಮ್ಮ ದೇಶದ ಪ್ರತಿಭಾವಂತ ಪ್ರಜೆಗಳು ವಿದೇಶಗಳಿಗೆ ವಲಸೆ ಹೋಗುವುದು ತೀರಾ ಸಾಮಾನ್ಯ ಎನಿಸುವ ಸಂಗತಿಯಾಗಿದೆ. ಅದು ಹೇಗಿದೆಯಪ್ಪಾ ಅಂದರೆ, ಕುಡಿಯುವ ನೀರೇ ದೊರಕದ ಸ್ಥಳಗಳಲ್ಲಿ ಹರಿಯುವ ಕರ್ನಾಟಕದ ನದಿ ನೀರು ಸಮುದ್ರದ ಪಾಲಾಗುವ ರೀತಿಯಂತೆ. ಸೂಕ್ತ ಅವಕಾಶಗಳ ಕೊರತೆ, ತಮ್ಮ ಪ್ರತಿಭೆಗೆ ಅಗತ್ಯ ಇರುವಷ್ಟು ಪ್ರೋತ್ಸಾಹ ದೊರೆಯದಿರುವಿಕೆ, ಮೀಸಲಾತಿ, ಹೀಗೆ ಹತ್ತು ಹಲವಾರು ಕಾರಣಗಳು ಪ್ರತಿಭಾ ಪಲಾಯನಕ್ಕೆ ಕಾರಣವಾಗಿರಬಹುದು. ಆದರೆ ವಿದೇಶದಲ್ಲಿ ನೆಲೆಸಿದ ಪ್ರತಿಯೊಬ್ಬ ಭಾರತೀಯನ ಮನವು ತಾಯ್ನಾಡಿನ ಸೇವೆಗಾಗಿ ತುಡಿಯುತ್ತಿರುತ್ತದೆ. ಕೆಲವರು ತಮ್ಮ ಕೈಲಾದ ಸಹಾಯ ಮಾಡಲು ತವಕಿಸುತ್ತಲೇ ಇರುತ್ತಾರೆ.

ಹೆಚ್ಚಿನ ವಿವರಗಳಿಗೆ ಓದಿ: http://thatskannada.oneindia.in/column/talk-of-the-town/2010/0127-dr-madhu-seetappa-nri-social-service.html


Dr Paramashivaiah laments lack of political will to provide water for dry districts
Struggle for irrigation mooted
Kolar: DHNS:

The meeting called by Irrigation Action Committee on implementation of Dr Paramashivaiah Report resolved to launch a struggle for a permanent irrigation facility to the district, here on Tuesday.

Read more at: http://www.deccanherald.com/content/46547/struggle-irrigation-mooted.html


Subsequently, some prominent citizens from Chickaballapur district, led by London-based doctor Madhu Seethappa of Chintamani, raised doubts over Dow Chemical’s willingness to set up water purification units free of cost.
Read more at:http://365ways.blogspot.com/2008/07/support-bhopal-victims.html

‘Diversion of Netravati not possible if Gundia is taken up’
Read more at: http://www.thehindu.com/2009/10/05/stories/2009100552380500.htm


Kolar: DHNS: The meeting called by Irrigation Action Committee on implementation of Dr Paramashivaiah Report resolved to launch a struggle for a permanent irrigation facility to the district, here on Tuesday. Apart from the demand for implementation of the report, it was also suggested that a forum should be constituted including representatives from Dakshina Kannada to deliberate on the pros and cons of the project. The organisers appealed former Lok Sabha member R L Jalappa to lead such a forum, and he accepted the offer. Power point presentation In the beginning, Dr Madhu Seethappa,
Read more at : http://article.wn.com/view/2010/01/12/Struggle_for_irrigation_mooted/

Hey, I had laser surgery 2 days ago at Optimax Liverpool with Dr Madhu who was recommended to me by a friend. He has done an excellent job, my eyes were normal the very next day and hence I am on the pc today. He was very calm and experienced showed when he explained the potential risks with my high prescription and astigmatism.
I am very pleased with the result so far and cannot commend him enough!
Read more at: http://forums.lasik-eyes.co.uk/forum_posts.asp?TID=1050

Friday, February 12, 2010

ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅಥವಾ ಅಕ್ಕಿ ಮೇಲೆ ಆಸೆ ಬೆಕ್ಕಿನ ಮೇಲೆ ಪ್ರೀತಿ

ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅಥವಾ ಅಕ್ಕಿ ಮೇಲೆ ಆಸೆ ಬೆಕ್ಕಿನ ಮೇಲೆ ಪ್ರೀತಿ

ಅಂದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ. ನಮ್ಮ ಕೋಲಾರ ಜಿಲ್ಲೆಯಿಂದ ಇಬ್ಬರು ಪ್ರಭಾವಿ ರಾಜಕಾರಣಿಗಳು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಆದರೂ ಸಹ ಇವರಿಬ್ಬರೂ ಶಾಶ್ವತ ನೀರಾವರಿಯ ಬಗ್ಗೆ ಸಕಾರಾತ್ಮಕವಾದ ಹೇಳಿಕೆ ನೀಡಿಲ್ಲ. ಒಬ್ಬರು ಜನಾಂದೋಲನ ನಡೆಯಬೇಕು ಎಂದರೆ, ಮತ್ತೊಬ್ಬರು ಎಲ್ಲಿಂದಲೊ ನಿಮಗೆ ನೀರು ತಂದು ಕೊಡುತ್ತೇನೆ, ಎಲ್ಲಿಂದ ಅಂತ ಕೇಳಬೇಡಿ ಅಂತಾರೆ. ಜನಾಂದೋಲನ ನಡೆಯಬೇಕು ನಿಜ ಸ್ವಾಮಿ, ನಿಮ್ಮ ವಿರುದ್ದವಾಗಿ! ಏಕೆಂದರೆ ೫ ಬಾರಿ ಸತತವಾಗಿ ಎಂ.ಪಿ.ಯಾಗಿ ಜನರ ನೀರಿನ ಸಮಸ್ಯೆಗಳನ್ನು ನಿರ್ಲಕ್ಷ ಮಾಡಿದ್ದಕ್ಕಾಗಿ. ಈಗಲೂ ಸಹ ನೀವು ನಿಮ್ಮ ಕಂಟ್ರಾಕ್ಟರುಗಳಿಗೆ ಹಣ ಸಿಗುವ ಕೆರೆ ಹೂಳೆತ್ತುವ ನರೇಗಾ ಕಾರ್ಯಕ್ರಮಗಳಿಗೆ ಹೆಚ್ಚು ಗಮನ ಹರಿಸುತ್ತಿರುವುದು ವಿಷಾದಕರ. ಮತ್ತೊಬ್ಬ ಸಚಿವರು ಎಲ್ಲಿಂದಲೊ ನೀರು ತರುತ್ತೇನೆ ಅಂತಾರೆ, ಎಲ್ಲಿಂದ ಸ್ವಾಮಿ? ಹೇಮಾವತಿಯೊ ಅಥವಾ ಭದ್ರಾ ಮೆಲ್ದಂಡೆ ಯೋಜನೆಯೊ? ಈ ಎರಡೂ ನದಿಗಳಲ್ಲಿ ಈಗಾಗಲೇ ಒಪ್ಪಂದ ಆಗಿರುವ ಜಿಲ್ಲೆಗಳಿಗೆ ಒದಗಿಸಲು ನೀರಿಲ್ಲ. ಇನ್ನು ಹೇಗೆ ನಮ್ಮ ಜಿಲ್ಲೆಗಳಿಗೆ ನೀರು ಬರುತ್ತದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಒಟ್ಟು ಇರುವ ನೀರು ಕೇವಲ ೨೧ ಟಿ.ಎಂ.ಸಿ. ಹಾಗು ಇದನ್ನು ಪಂಪ್ ಮಾಡಬೇಕಾಗುತ್ತದೆ. ಇದು ಕೇವಲ ಪೇಪರ್ ಪ್ರಾಜೆಕ್ಟ್, ಕೋಲಾರ ಜಿಲ್ಲೆಯ ೧೮ ಕೆರೆಗಳಿಗೆ ನೀರು ಸಿಗುವುದು ಒಂದು ಮರೀಚಿಕೆಯಷ್ಟೆ. ಭಧ್ರ ಮೇಲ್ದಂಡೆ ಸ್ವಾಗತಿಸುವ ರಾಜಕಾರಣಿಗಳು ವಾಸ್ತವಾಂಶಗಳನ್ನು ಅರಿತು ಶಾಶ್ವತ ನೀರಾವರಿಯ ಕುರಿತು ಹೋರಾಟಕ್ಕೆ ಇಳಿಯುವುದು ಒಳ್ಳೆಯದು.

ಎರಡೂ ಜಿಲ್ಲೆಗಳಲ್ಲಿ ಸರಾಸರಿ ೭೪೫ ಮಿ.ಮೀ. ವಾರ್ಷಿಕ ಮಳೆಯಾಗುತ್ತದೆ. ಮಳೆ ಕೊಯ್ಲಿನಿಂದ ಸುಮಾರು ೮.೪೨ ಟಿ.ಎಮ್.ಸಿ ನೀರನ್ನು ಶೇಖರಿಸಬಹುದಾಗಿದೆ. ಎರಡೂ ಜಿಲ್ಲೆಗಳಿಗೆ ಒಟ್ಟು ೬೦ ಟಿ.ಎಂ.ಸಿ. ನೀರು ಬೇಕಾಗುತ್ತದೆ. ಅಂದರೆ ನಮಗೆ ಸುಮಾರು ೫೦ ಟಿ,ಎಂ.ಸಿ.ಗಳಷ್ಟು ನೀರು ಪ್ರತಿ ವರ್ಷ ಕೊರತೆ ಇದೆ. ಈಗಾಗಲೆ ನಾವು ಕೊಳವೆಬಾವಿಗಳಿಂದ ಶೆ. ೯೦ ರಷ್ಟು ಅಂತರ್ಜಲ ಉಪಯೋಗಿಸಿಕೊಂಡು ಬಿಟ್ಟಿದ್ದೇವೆ. ಸತತವಾಗಿ ಎರಡು ವರ್ಷ ಮಳೆ ಬಾರದಿದ್ದಲ್ಲಿ ಎರಡು ಜಿಲ್ಲೆಯ ಜನ ವಲಸೆ ಹೋಗಬೇಕಾಗುತ್ತದೆ. ಇಂತಹ ಧಾರುಣ ಪರಿಸ್ಥಿತಿ ಎದುರಾಗಿದ್ದರೂ ನಮ್ಮ ಜಿಲ್ಲೆಯ ರಾಜ ಕಾರಣಿಗಳ ಅಸಡ್ಡೆ ವರ್ತನೆ ಬಹಳ ಶೋಚನೀಯವಾದದ್ದು.

ಈಗಿನ ಸರ್ಕಾರ ಪರಮಶಿವಯ್ಯನವರ ವರದಿಯನ್ನು ಜಾರಿಗೊಳಿಸಲು ಉತ್ಸುಕರಾಗಿದ್ದಾರೆ. ಆದರೆ ಇವರೆಗೆ ಹಿಂದಿನ ಸರ್ಕಾರಗಳ ಬೇಜವಾಬ್ದಾರಿಯಿಂದ ಡಿ.ಪಿ.ಅರ್.- ಡಿಟೆಲ್ಡ್ ಪ್ರಾಜೆಕ್ಟ್ ರಿಪೋರ್‍ಟ್ ಸಿದ್ಧವಾಗಿಲ್ಲ. ಎನ್.ಅರ್.ಎಸ್.ಎ. ಜೂನ್ ತಿಂಗಳ ವೇಳೆಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಇದರ ಸಮೇತ ಡಿ.ಪಿ.ಅರ್. ಸಹ ಸಿದ್ಧವಾಗಬೇಕು ಹಾಗೂ ಇದರ ಬಗ್ಗೆ ತಾಂತ್ರಿಕ ಸಮಿತಿಯಿಂದ ಪರಿಶೀಲನೆಯಾಗಬೇಕು. ಈ ಬಾರಿಯ ಬಜೆಟ್‌ನಲ್ಲಿಯೂ ಬರ ಪೀಡಿತ ಜಿಲ್ಲೆಗಳಿಗೆ ಹಣ ಮೀಸಲಿಡುವ ನಿಟ್ಟಿನಲ್ಲಿ ಸರ್ಕಾರದ ವಲಯಗಳಲ್ಲಿ ಗಹನವಾಗಿ ಚರ್ಚೆ ನಡೆಯುತ್ತಿದೆ. ಯಾವದೇ ಆಸಕ್ತಿಯುಳ್ಳ ರಾಜಕಾರಣಿಗಳು ತಮಗಿರುವ ಸಂಪರ್ಕಗಳ ಮೂಲಕ ಎಲ್ಲ ಕೆಲಸಗಳು ಸುಗಮವಾಗಿ ನಡೆಯಲು ಸಹಕರಿಸಿದರೆ ಈ ಯೋಜನೆ ಒಂದು ಹಂತಕ್ಕೆ ತಲಪುತ್ತದೆ.

ಈ ಯೋಜನೆ ಸಾಧುವಾಗಲು ರಾಜ್ಯ ಸರ್ಕಾರವಲ್ಲದೆ ಕೆಂದ್ರ ಸರ್ಕಾರದ ಪಾತ್ರವು ಬಹು ಮುಖ್ಯವಾಗಿ ಬೇಕಾಗುತ್ತದೆ. ಕರಾವಳಿಯ ಜಾರ್ಜ್ ಫರ್ನಾಂಡಿಸ್ ರ್‍ಯೆಲ್ವೆ ಮಂತ್ರಿಯಾಗಿದ್ದಾಗ ಕೊಂಕಣ ರ್‍ಯೆಲ್ವೆ ಪ್ರಾಜೆಕ್ಟ್ ಜಾರಿಯಾಯ್ತು. ಇದರಲ್ಲಿ ಸುಮಾರು ೪೦೦೦ ಹೆಕ್ಟೆರುಗಳಷ್ಟು ಅರಣ್ಯ ನಾಶವಾದರೂ ಕರಾವಳಿಯ ಯಾವುದೇ ಪರಿಸರವಾದಿಗಳು ಚಕಾರವೆತ್ತಲಿಲ್ಲ. ಆದರೆ ಈಗ ಪರಿಸರವಾದಿಗಳ ಸೋಗಿನಲ್ಲಿರುವ ಕೆಲವು ರಾಜಕಾರಣಿಗಳು, ಧರ್ಮಾಧಿಕಾರಿಗಳು ಈ ಯೋಜನೆಗೆ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ನಮ್ಮ ಜಿಲ್ಲೆಂii ಕರಾವಳಿ ಮೂಲದ ಮಂತ್ರಿಗಳ ಆಶೀರ್ವಾದವು ಇವರಿಗಿದೆ ಅಂತ ಕೆಲವು ಬಲ್ಲ ಮೂಲಗಳು ತಿಳಿಸಿದೆ. ಈ ಮಂತ್ರಿಗಳು ಪುತ್ತೂರಿನಲ್ಲಿ ಕೊಟ್ಟಿರುವ ಹೇಳಿಕೆ ಹಾಗು ತುಳು ಸಮ್ಮೇಳನದ ಮುಖ್ಯ ಅತಿಥಿಯಾದದ್ದು ಈ ಸಂದೇಹಕ್ಕೆ ಪೂರಕವಾಗಿದೆ ಹಾಗೂ ಈ ಮಂತ್ರಿಗಳು ಬೇರೆ ಯಾವುದೋ ನದಿಯ ನೀರನ್ನು ತರುತ್ತೇನೆ ಎಂದು ಹೇಳಿರುವುದು ಸಂಶಯಕ್ಕೆ ಆಸ್ಪದ ಮಾಡಿಕೊಟ್ಟಿದೆ. ಮಾಧ್ಯಮಗಳಲ್ಲಿ ಇಷ್ಟು ಚರ್ಚೆಯಾದರೂ ಯಾವುದೇ ಹೇಳಿಕೆ ನೀಡದಿರುವುದು ಇವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಚಿಕ್ಕಬಳ್ಳಾಪುರದ ಮತದಾರರಲ್ಲಿ ನೋವು ತಂದಿದೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಧೋರಣೆ ಇದ್ದರೆ ಈ ಯೋಜನೆಯ ಅನುಷ್ಟಾನಕ್ಕೆ ತೊಂದರೆ ಬರುತ್ತದೆ. ಇಂಥಹ ಪರಿಸ್ತಿತಿಯಲ್ಲಿ ಎಂ.ವಿ. ಕೃಷ್ಣಪ್ಪ ಅಥವಾ ಟಿ.ಚನ್ನಯ್ಯ ಕೇಂದ್ರ ಸಚಿವರಾಗಿದ್ದರೆ ಈ ಧಾರುಣ ಪರಿಸ್ಥಿತಿ ನಮ್ಮ ಜಿಲ್ಲೆಗಳಿಗೆ ಬರುತ್ತಿರಲಿಲ್ಲ.








ಬೆಂದ ಕಾಳೂರು ಅಥವಾ ಬೆಂದ ಬೆಂಗಳೂರು?

ಬಿ.ಬಿ.ಎಂ.ಪಿ.- ಬೆಂದ ಬೆಂಗಳೂರು ಮಹಾನಗರ ಪಾಲಿಕೆ

ಲಾಸ್ ಏಂಜಲ್ಸ್ ಮತ್ತು ಬೆಂಗಳೂರಿನ ನಡುವಿರುವ ವ್ಯತ್ಯಾಸವೇನು? ಎರಡೂ ಸಿಲಿಕಾನ್ ನಗರಗಳೆ. ಲಾಸ್ ಏಂಜಲ್ಸ್ ಒಟ್ಟು ಗೃಹ ಉತ್ಪನ್ನ ವಾರ್ಷಿಕ ೭೯೨ ಅಮೆರಿಕನ್ ಡಾಲರ್ಗಳಷ್ಟಿದೆ ಅಂದರೆ ಅಮೆರಿಕದ ಒಟ್ಟು ಗೃಹ ಉತ್ಪನ್ನದ ಶೇ.೬ರಷ್ಟು. ಬೆಂಗಳೂರಿನ ಒಟ್ಟು ಗೃಹ ಉತ್ಪನ್ನ ೬೯ ಬಿಲಿಯನ್ ಅಮೆರಿಕನ್ ಡಾಲರ್ಗಳಷ್ಟಿದೆ, ಅಂದರೆ ಭಾರತದ ಒಟ್ಟು ಗೃಹ ಉತ್ಪನ್ನದ ಶೇ.೬ರಷ್ಟು. ಲಾಸ್ ಏಂಜಲ್ಸ್ ಸರಾಸರಿ ಮಳೆ ವಾರ್ಷಿಕ ೩೩೫ ಮಿ.ಮೀ. ಆದರೆ ಬೆಂಗಳೂರಿನ ವಾರ್ಷಿಕ ಮಳೆ ೭೩೩ ಮಿ.ಮೀ.ಗಳಷ್ಟಿದೆ. ೧೩ ಮಿಲಿಯನ್ ಜನಸಂಖ್ಯೆಯ ಲಾಸ್ ಏಂಜಲ್ಸ್ ವಾರ್ಷಿಕ ೭೦೦ ಬಿಲಿಯನ್ ಲೀಟರ್ ನೀರನ್ನು ಬಳಸುತ್ತಿದೆ, ಆದರೆ ಮಿಲಿಯನ್ ಜನಸಂಖ್ಯೆಯ ಬೆಂಗಳೂರು ವಾರ್ಷಿಕ ೩೦೮ ಬಿಲಿಯನ್ ಲೀಟರ್ ನೀರನ್ನು ಬಳಸುತ್ತಿದೆ. ಅಂದರೆ, ಲಾಸ್ ಏಂಜಲ್ಸ್ನಲ್ಲಿ ಬಿಲಿಯನ್ ಲೀಟರ್ ನೀರು .೧೨ ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಒಟ್ಟು ಗೃಹ ಉತ್ಪನ್ನಕ್ಕೆ ಕಾರಣವಾದರೆ, ಬೆಂಗಳೂರಿನಲ್ಲಿ . ಬಿಲಿಯನ್ ಡಾಲರ್ ಲೀಟರ್ಗಳಷ್ಟು ನೀರು ಬಿಲಿಯನ್ ಅಮೆರಿಕನ್ ಡಾಲರ್ಗಳಷ್ಟು ಮೌಲ್ಯದ ಒಟ್ಟು ಗೃಹ ಉತ್ಪನ್ನಕ್ಕೆ ಕಾರಣವಾಗುತ್ತಿದೆ. ಬೆಂಗಳೂರಿನಲ್ಲಿ ೩೦೬ ಬಿಲಿಯನ್ ಲೀಟರ್ ನೀರಿನಲ್ಲಿ ಕನಿಷ್ಠ ಶೇ.೩೬ರಷ್ಟು ನೀರು ಸೋರಿಕೆಯಿಂದ ನಷ್ಟವಾಗುತ್ತಿದೆ. ಬೆಂಗಳೂರು ನೀರು ಸರಬರಾಜು ಮಂಡಲಿಯು ಪ್ರತಿ ಕಿಲೋ ಲೀಟರಿಗೆ ರೂ.೪೬ ಖರ್ಚುಮಾಡುತ್ತದೆ ಹಾಗೂ ಗ್ರಾಹಕರಿಂದ ಕೇವಲ ರೂ.೧೬ನ್ನು ಪ್ರತಿ ಕಿಲೋ ಲೀಟರಿಗೆ ಪಡೆಯುತ್ತಿದೆ. ಇದರಿಂದಾಗಿ ಅದು ಪ್ರತಿ ಕಿಲೋ ಲೀಟರ್ ನೀರಿನಿಂದ ರೂ.೩೦ ನಷ್ಟ ಅನುಭವಿಸುತ್ತಿದೆ. ಲಾಸ್ ಏಂಜಲ್ಸ್ ಮಾನಕಗಳನುಸಾರ ಬೆಂಗಳೂರಿನಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ವಾರ್ಷಿಕ ೧೧೪ ಬಿಲಿಯನ್ ಲೀಟರ್ ಹೆಚ್ಚುವರಿ ನೀರಿನ ಅವಶ್ಯಕತೆಯಿದೆ. ಗ್ರಾಮೀಣ ಜನರ ವಲಸೆ ಹಾಗೂ ಆರ್ಥಿಕ ಪರಿಸ್ಥಿತಿಗಳ ವಲಸೆಯಿಂದಾಗಿ ಇನ್ನು ೧೫ ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದ್ವಿಗುಣಗೊಳ್ಳಲಿದೆ. ಅಂದರೆ ೨೦೨೫ರ ಹೊತ್ತಿಗೆ ಬೆಂಗಳೂರಿಗೆ ವಾರ್ಷಿಕ ೮೪೮ ಬಿಲಿಯನ್ ಲೀಟರ್ ನೀರು ಬೇಕಾಗುತ್ತದೆ.

ಗಂಗಾ, ಚೋಳ, ವಿಜಯನಗರದ ದೊರೆಗಳಿಂದ ಹಿಡಿದು ಮೊಘಲ್ ಮತ್ತು ಬ್ರಿಟಿಷರು ಸಹ ಬೆಂಗಳೂರಿನಲ್ಲಿ ಆಡಳಿತ ನಡೆಸಿದರು ಅಥವಾ ಅದರ ನಿಯಂತ್ರಣದಲ್ಲಿದ್ದರು. ಗಂಗಾ ಮತ್ತು ಚೋಳರ ಸಮಯದಲ್ಲಿ ನಗರದ ಸುತ್ತ ಮುತ್ತ ಕೆರೆಗಳನ್ನು ಸ್ಥಾಪಿಸಿ ಅವುಗಳ ನಡುವೆ ಸಂಪರ್ಕ ಇರಿಸಿ ನಗರದ ನೀರಿನ ಅವಶ್ಯಕತೆಗಳನ್ನು ಪೂರೈಸಲಾಗುತ್ತಿತ್ತು. ಬೆಂಗಳೂರಿನಲ್ಲಿ ೨೫೨ ಕೆರೆಗಳಿದ್ದವು. ಆದರೆ ಈಗ ಅಧಿಕೃತ ಅಂಕಿಅಂಶಗಳನ್ವಯ ೧೧೦ ಕೆರೆಗಳಿವೆ ಹಾಗೂ ಅವುಗಳಲ್ಲಿ ೫೨ ಮಾತ್ರ ಜೀವಂತವಾಗಿದೆ. ಕೆಲವು ಕೆರೆಗಳು ರಾಜ್ಯ ಸಾರಿಗೆ ಬಸ್ನಿಲ್ದಾಣ, ಕಂಠೀರವ ಕ್ರೀಡಾಂಗಣ ಮತ್ತು ಹಾಕಿ ಕ್ರೀಡಾಂಗಣಗಳಂತಹ ಆಧುನಿಕ ರಚನೆಗಳಿಗೆ ತಮ್ಮನ್ನು ಬಲಿಕೊಟ್ಟುಕೊಂಡು ಕೆರೆಗೆ `ಹಾರ'ವಾದವು. ಇನ್ನು ಕೆಲವು ವಿವೇಚನಾರಹಿತ ಆಲೋಚನೆಯಿಂದ ಎಚ್.ಬಿ.ಆರ್.ನಂತಹ ಬಡಾವಣೆಗಳ ರಚನೆಗೆ ಬಲಿಯಾದರೆ, ಉಳಿದವು ದುರಾಸೆಯ ರಾಜಕಾರಣಿಗಳಿಗೆ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಬಲಿಯಾದವು. ೧೯೦೫ರಲ್ಲಿ ಇಡೀ ದಕ್ಷಿಣ ಏಷಿಯಾದಲ್ಲಿಯೇ ವಿದ್ಯುಚ್ಛಕ್ತಿಯನ್ನು ಪಡೆದ ಮೊಟ್ಟ ಮೊದಲ ನಗರ ಬೆಂಗಳೂರು. ಆನಂತರ ಹೆಸರಘಟ್ಟದ ಜಲಾಶಯವನ್ನು ನಿರ್ಮಿಸಲಾಯಿತು. ೧೯೨೫ ತೀವ್ರ ಬರಗಾಲದಿಂದ ಹೆಸರಘಟ್ಟದ ಕೆರೆ ಒಣಗಿಹೋಯಿತು. ಆಗ ವಿಶ್ವೇಶ್ವರಯ್ಯನವರ ಸಲಹೆಯ ಮೇರೆಗೆ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ೧೯೩೩ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ನಿರ್ಮಿಸಲಾಯಿತು. ಸ್ವಾತಂತ್ರ್ಯಾನಂತರ ಬೆಂಗಳೂರಿರುವ ಸುರಕ್ಷಿತ ಸ್ಥಾನದಿಂದಾಗಿ ಹಾಗೂ ಭಾರತ- ಪಾಕ್ ಮತ್ತು ಭಾರತ- ಚೀನಾ ಸಂಘರ್ಷಗಳಿಂದಾಗಿ ಬಹುಪಾಲು ಸಾರ್ವಜನಿಕ ಕ್ಷೇತ್ರದ ಪ್ರಾಯೋಜನೆಗಳೆಲ್ಲಾ ಬೆಂಗಳೂರಿಗೇ ದೊರೆತವು. ಕ್ಷಿಪ್ರ ನಗರೀಕರಣ ಹಾಗೂ ಕೈಗಾರಿಕೀಕರಣದಿಂದಾಗಿ ನಗರದ ನೀರಿನ ದಾಹ ಹೆಚ್ಚುತ್ತಾ ಹೋಯಿತು. ಅದರಿಂದಾಗಿ ೧೯೬೫ರಲ್ಲಿ ನಗರಕ್ಕೆ ನೀರು ಸರಬರಾಜು ಮಾಡಲು ಕಾವೇರಿ ನೀರು ಸರಬರಾಜಿನ ಮೊದಲನೇ ಹಂತ ಪ್ರಾರಂಭವಾಯಿತು. ೧೯೭೦ರಲ್ಲಿ ಬೆಂಗಳೂರಿನ ಭವಿಷ್ಯವನ್ನು ಮನಗಂಡ ಶ್ರೀ ಬಾಳಿಗಾರವರು ಆಗಿನ ಮುಖ್ಯ ಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸ್ರವರ ಬೆಂಬಲದಿಂದ ಇಲ್ಲಿ ಸಿಲಿಕಾನ್ ಕಣಿವೆ ಸ್ಥಾಪಿಸುವ ಕನಸು ಕಂಡು ಇನ್ನಷ್ಟು ನಗರೀಕರಣಕ್ಕೆ ಉತ್ತೇಜನ ನೀಡಿದರು. ಈಗ ಕಾವೇರಿ ನೀರು ಬೆಂಗಳೂರಿನ ಕೇಂದ್ರ ಭಾಗ ಹಾಗೂ ಹಳೆ ನಗರಕ್ಕೆ ದೊರಕುತ್ತಿದೆ. ನಗರದ ಕೇಂದ್ರ ಭಾಗದ ಶೇ.೧೦ ರಷ್ಟು ವಾರ್ಡ್ಗಳು ಹಾಗೂ ಬೃಹತ್ ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ ೭೯ ಹೊಸ ವಾರ್ಡ್ಗಳಿಗೆ ಅಂತರ್ಜಲ ಸರಬರಾಜಾಗುತ್ತಿದೆ. ಅಂದರೆ ಇಡೀ ಬೆಂಗಳೂರು ನಗರದ ಶೇ.೩೫ರಷ್ಟು ಭಾಗಗಳಿಗೆ ಅಂತರ್ಜಲವೇ ಜೀವಜಲವಾಗಿದೆ. ಇಂದು ನಗರದಲ್ಲಿ ೧೫೦,೦೦೦ಕ್ಕೂ ಹೆಚ್ಚು ಖಾಸಗಿ ಹಾಗೂ ಸುಮಾರು ೧೦,೦೦೦ ಸರ್ಕಾರಿ ಕೊಳವೆ ಬಾವಿಗಳಿವೆ. ಹೊಸ ವಾರ್ಡ್ಗಳಲ್ಲಿ ಪ್ರತಿ ನಲವತ್ತು ಅಡಿಗಳಿಗೊಂದರಾಂತೆ ಕೊಳವೆ ಬಾವಿಗಳಿವೆ. ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ೧೨೦೦ ಅಡಿಗಳಿಗಿಂತಲೂ ಕೆಳಕ್ಕೆ ತಲುಪಿದೆ. ಅಲ್ಲದೆ ಮಾನವ ಮತ್ತು ಕೈಗಾರಿಕಾ ತ್ಯಾಜ್ಯಗಳ ವಿವೇಚನಾರಹಿತ ವಿಲೇವಾರಿಯಿಂದ ಅಂತರ್ಜಲವೂ ಮಲಿನಗೊಳ್ಳುತ್ತಿದೆ.
ಜಲಾಶಯಗಳಲ್ಲಿನ ನೀರನ್ನು ನಗರಕ್ಕೆ ಪಂಪ್ ಮಾಡಲಾಗುತ್ತಿದೆ. ಇತ್ತೀಚಿನ ವಿದ್ಯುತ್ ದರದ ಏರಿಕೆಯಿಂದ ಜಲಮಂಡಳಿ ದಿನವೊಂದಕ್ಕೆ ರೂ ೬೦ ಲಕ್ಷಗಳಷ್ಟು ವಿದ್ಯುತ್ ಬಿಲ್ ಪಾವತಿಸುತ್ತಿದ್ದು ಅದರ ಹೊರೆ ಇನ್ನಷ್ಟು ಹೆಚ್ಚಿದೆ. ಶೇ.೩೬ ರಷ್ಟು ನೀರಿನ ಸೋರಿಕೆಯಿಂದಾಗಿ ಪ್ರತಿ ದಿನ ರೂ..೪೩ ಕೋಟಿಗಳಷ್ಟು ಹಣ ನಷ್ಟವಾಗುತ್ತಿದೆ.

ಕ್ರೈಸಿಲ್ ಕ್ರೆಡಿಟ್ ರೇಟಿಂಗ್ನಂತೆ ಸಮಸ್ಯೆಗಳನ್ನು ಬಗೆಹರಿಸಲು ಬೆಂಗಳೂರು ನಗರಕ್ಕೆ ಮುಂದಿನ ವರ್ಷಗಳಲ್ಲಿ ರೂ.೩೬,೦೦೦ ಕೋಟಿಗಳ ಅವಶ್ಯಕತೆಯಿದೆ ಹಾಗೂ ಅದರಲ್ಲಿ ರೂ.೧೧,೦೦೦ ಕೋಟಿಗಳನ್ನು ಜಲಮಂಡಳಿಯೇ ಖರ್ಚುಮಾಡಬೇಕಾಗಿದೆ. ರಾಜ್ಯದ ಒಟ್ಟು ಆದಾಯದಲ್ಲಿ ಬೆಂಗಳೂರಿನ ಪಾಲು ಬಹುಪಾಲು ಅರ್ಧದಷ್ಟಿದೆ. ಬೆಂಗಳೂರು ನಗರ ಸುಸ್ಥಿರವಾಗಿದ್ದು ಅಭಿವೃದ್ಧಿಯನ್ನು ಕಾಣಬೇಕಾದಲ್ಲಿ ಮೊದಲಿಗೆ ನಾವು ಅದರ ದಾಹ ತಣಿಸಬೇಕಾಗಿದೆ. ಹಾಗಾಗಿ ಜಲಮಂಡಳಿಯು ಕಾವೇರಿಯನ್ನು ಹೊರತುಪಡಿಸಿ ಇತರ ಆಯ್ಕೆಗಳತ್ತ ಗಮನ ಹರಿಸಬೇಕಾಗಿದೆ. ಬೆಂಗಳೂರಿನ ವಾರ್ಷಿಕ ಮಳೆಯ ೭೩೩ ಮಿ.ಮೀ.ಗಳಲ್ಲಿ ಸರಾಸರಿ ದಿನವೊಂದಕ್ಕೆ ೪೦೦ ಮಿಲಿಯನ್ ಲೀಟರ್ಗಳಷ್ಟು ಮಳೆನೀರನ್ನು ಸಂಗ್ರಹಿಸಬಹುದಾಗಿದೆ. ಆದರೆ ಈಗಿರುವ ಕೆರೆಗಳು ಇದರಲ್ಲಿ ಅರ್ಧದಷ್ಟು ನೀರನ್ನು ಮಾತ್ರ ಸಂಗ್ರಹಿಸಬಲ್ಲವು. ಅದನ್ನು ಸಂಗ್ರಹಿಸುವ ಮೊದಲು ಕೆರೆಗಳ ಹೂಳನ್ನು ತೆಗೆಸಿ ಶುಚಿಗೊಳಿಸಿ ಅವುಗಳೊಳಕ್ಕೆ ಯಾವುದೇ ಮಾನವ ಅಥವಾ ಕೈಗಾರಿಕಾ ತ್ಯಾಜ್ಯಗಳು ಬರದಂತೆ ಎಚ್ಚರಿಕೆ ವಹಿಸಬೇಕು.
ಇತರ ನದಿಗಳ ನೀರನ್ನು ಬೆಂಗಳೂರಿಗೆ ತರಬಹುದೆ? ಇದರಲ್ಲೂ ಎರಡು ಸಾಧ್ಯತೆಗಳಿವೆ. ಒಂದು ಕುಣಿಗಲ್ ಕೆರೆಯಿಂದ ಹೇಮಾವತಿ ನದಿ ಹಾಗೂ ಮತ್ತೊಂದು ನೇತ್ರಾವತಿ ನದಿ. ತಜ್ಞರ ಪ್ರಕಾರ ಬೆಂಗಳೂರಿಗೆ ಸರಬರಾಜು ಮಾಡಲು ಬೇಕಾಗುವಷ್ಟು ನೀರು ಹೇಮಾವತಿಯಲ್ಲಿದೆ ಆದರೆ ಅದನ್ನು ಲಿಫ್ಟ್ ಮಾಡಿ ಸಾಗಿಸಬೇಕು ಹಾಗೂ ಅದಕ್ಕೆ ವಿದ್ಯುಚ್ಛಕ್ತಿಯ ಅವಶ್ಯಕತೆಯಿದೆ. ಆದರೆ, ನೇತ್ರಾವತಿ ಬೆಂಗಳೂರಿಗೆ ಮಾತ್ರವಲ್ಲ ಮಧ್ಯ ಕರ್ನಾಟಕದ ೧೦ ಬರಪೀಡಿತ ಜಿಲ್ಲೆಗಳಿಗೂ ನೀರನ್ನು ಒದಗಿಸಬಲ್ಲದು. ಸರ್ಕಾರ ಪರಮಶಿವಯ್ಯನವರ ವರದಿಯನ್ನು ಜಾರಿಗೆ ತಂದಲ್ಲಿ ಬೆಂಗಳೂರಿಗೆ ನೀರು ಗುರುತ್ವಾಕರ್ಷಣೆಯ ಮೂಲಕವೇ ತಲುಪುತ್ತದೆ. ಇದು ಪರಿಸರ ಸ್ನೇಹಿ ಹಾಗೂ ಕಡಿಮೆ ಖರ್ಚಿನ ವಿಧಾನವೂ ಆಗಿದೆ. ಇದನ್ನು ಬಳಸಿ ಕೆಂಗೇರಿ ಮತ್ತು ಹೆಬ್ಬಾಳದ ನಡುವೆ ಅರೆ ವೃತ್ತಾಕಾರದ ಕಾಲುವೆಗಳನ್ನು ರಚಿಸಿ ಅದು ಅಂತರ್ಜಲ ಮರುಪೂರಣ ಮಾಡುವುದಲ್ಲದೆ ಮಳೆ ನೀರನ್ನೂ ಸಂಗ್ರಹಿಸುವಂತೆ ಮಾಡಬಹುದು. ರಚನೆಗಳನ್ನು ಪ್ರವಾಸ ಹಾಗೂ ಮನರಂಜನೆಗೂ ಬಳಸಬಹುದು.
ಲಾಸ್ ಏಂಜಲ್ಸ್ಗೆ ಶೇ.೪೬ರಷ್ಟು ನೀರು ಡೆಲ್ಟಾದಿಂದ ೪೪೬ ಮೈಲು ಉದ್ದದ ಕೊಳವೆಗಳ ಮೂಲಕ ಸ್ಯಾನ್ ಜೋಕ್ವಿನ್ ಕಣಿವೆಯ ಮೂಲಕ ಹಾಯಿಸಿ ಸರಬರಾಜು ಮಾಡಲಾಗುತ್ತಿದೆ. ಅದರ ಹಾದಿಯಲ್ಲಿ ತೆಹಚಾಪಿ ಪರ್ವತಗಳಲ್ಲಿ ನೀರನ್ನು ೨೦೦೦ ಅಡಿ ಎತ್ತರದವರೆಗೂ ಪಂಪ್ ಮಾಡಬೇಕಾಗುತ್ತದೆ. ಚೀನಾದಲ್ಲಿ ಬೀಜಿಂಗ್ ಮತ್ತು ಶಾಂಫಾಯ್ಗೆ ನೀರು ಸರಬರಾಜು ಮಾಡಲು ದಕ್ಷಿಣದ ಯಾಂಗ್ಜೆ ನದಿಯಿಂದ ೨೫೦೦ ರಿಂದ ೩೦೦೦ ಕಿ.ಮೀ.ಗಳಷ್ಟು ದೂರ ನೀರನ್ನು ಪಂಪ್ ಮಾಡಲಾಗುತ್ತಿದೆ. ಆದರೆ ಕೆಲವು ಪರಿಸರವಾದಿಗಳ ಸೋಗಿನಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಅಥವಾ ರಾಜಕಾರಣಿಗಳು ನೇತ್ರಾವತಿಯ ಬೃಹತ್ ಮಳೆನೀರು ಕೊಯ್ಲಿನ ಪ್ರಾಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಶೇ.೯೦ರಷ್ಟು ಹೋಟೆಲ್ ಉದ್ಯಮದವರು ಹಾಗೂ ಇತರ ಹತ್ತು ಲಕ್ಷ ಜನ ಕರಾವಳಿ ಜಿಲ್ಲೆಯವರಾಗಿದ್ದು ಅವರಿಗೆ ನೇತ್ರಾವತಿ ಪ್ರಾಯೋಜನೆಯನ್ನು ವಿವರಿಸಿ ಹೇಳಬೇಕಾಗಿದೆ. ನಮ್ಮಲ್ಲಿ ಮುಂದಾಲೋಚನೆ ಇಲ್ಲದಿದ್ದಲ್ಲಿ ನಮ್ಮ ಬೆಂಗಳೂರು ಒಣಗಿ ಬೆಂದ ಬೆಂಗಳೂರಾಗುವ ದಿನಗಳು ಬಹಳ ದೂರವಿಲ್ಲ.

ದೊರೆ ವೀರ ಬಲ್ಲಾಳ ಬೆಂಗಳೂರಿನ ಕಾಡುಗಳಲ್ಲಿ ಭೇಟೆಗಾಗಿ ಹೊರಟು ದಾರಿ ತಪ್ಪಿ ಬಳಲಿದ್ದಾಗ ಅಜ್ಜಿಯೊಬ್ಬಳು ಬೆಂದ ಕಾಳುಗಳನ್ನು ನೀಡಿ ಉಪಚರಿಸಿದ ನೆನಪಿಗಾಗಿ ಬೆಂದಕಾಳೂರು ಎಂಬ ಹೆಸರು ಬಂದಿದೆ. ಅದೇ ವೀರ ಬಲ್ಲಾಳ ಇನ್ನು ೧೫ ವರ್ಷಗಳ ನಂತರ ಬೆಂಗಳೂರಿಗೆ ಭೇಟಿ ನೀಡಿದಲ್ಲಿ ಆತನ ಬಾಯಾರಿಕೆ ತಣಿಸಲು ಇಲ್ಲಿ ತೊಟ್ಟು ನೀರೂ ಉಳಿದಿರುವುದಿಲ್ಲ. ಆಗ ಬೆಂಗಳೂರಿನ ಹೆಸರನ್ನು ನಾವು ಬೆಂದ ಬೆಂಗಳೂರು ಎಂದು ಬದಲಿಸಬೇಕಾಗುತ್ತದೆ. ಆದರೆ ಬಿ.ಬಿ.ಎಂ.ಪಿ. ಎಂಬ ಸಂಕ್ಷೇಪ ಪದವನ್ನು ಬದಲಿಸಲೇ ಬೇಕಾಗಿಲ್ಲ, ಏಕೆಂದರೆ ಅದು ಬೆಂದ ಬೆಂಗಳೂರು ಮಹಾನಗರ ಪಾಲಿಕೆಯಾಗಿರುತ್ತದೆ.

Tuesday, January 19, 2010

ದಕ್ಷಿಣ ಭಾರತದ ಭ್ರಷ್ಟ 'ಕೋಡಾ'ಗಳು

ಶ್ರೀ ಚಂದ್ರಬಾಬು ನಾಯ್ಡುರವರ ಇತ್ತೀಚಿನ ಆರೋಪಗಳನ್ನು ಗಮನಿಸಿದಲ್ಲಿ, ವಿಶ್ವಸಂಸ್ಥೆಯ ತಂಡವು ಇರಾನ್‌ನ ಅಣುಸ್ಥಾವರಗಳ ಪರಿಶೀಲನೆಗೆ ಭೇಟಿನೀಡಲು ಅನುಮತಿ ಪಡೆಯುವುದು ಓಬಳಾಪುರಂ ಗಣಿಗಳ ಪರಿಶೀಲನೆಗೆ ಅನುಮತಿ ಪಡೆಯುವುದಕ್ಕಿಂತ ಸುಲಭವಾಗಿದೆ. ಭಾರತ ಸರ್ವೇಕ್ಷಣ ಇಲಾಖೆಯವರು ಕೇಂದ್ರ ಮೀಸಲು ಪಡೆಯವರ ರಕ್ಷಣೆಯಿಲ್ಲದೆ ಓಬಳಾಪುರಂ ಗಣಿಗಳನ್ನು ಪ್ರವೇಶಿಸಲು ಹೆದರಿಕೊಳ್ಳುತ್ತಿದ್ದಾರೆಂದು ೨೦ನೇ ನವೆಂಬರ್‌ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ನಾಯ್ಡುರವರು ತಿಳಿಸಿದ್ದಾರೆ. ಕಲ್ಲೋಳ್ ಬಿಸ್ವಾಸ್ ಎಂಬ ಅರಣ್ಯಾಧಿಕಾರಿಯನ್ನು ಓಡಿಸಿ ಹೊರಗಟ್ಟಿದ್ದಲ್ಲದೆ ಅವರ ಮೇಲೆ ಸುಳ್ಳು ಕೇಸುಗಳನ್ನು ಸಹ ದಾಖಲಿಸಿದ್ದಾರೆ. ನಾಯ್ಡುರವರ ಪ್ರಕಾರ ಇದರ ಜೊತೆಗೆ ಓಬಳಾಪುರಂ ಗಣಿಗಳ ಪರಿಶೀಲನೆ ಪ್ರಾರಂಭಿಸಬೇಕೆಂದಿದ್ದ ಐ.ಜಿ.ಪಿ. ಸುಬ್ರಹ್ಮಣ್ಯಂ ಅವರನ್ನು ಸಹ ವಿಜಿಲೆನ್ಸ್‌ನ ಉಪಮಹಾ ನಿರೀಕ್ಷಕರು ಹಿಂದಕ್ಕೆ ಕರೆಸಿಕೊಂಡಿದ್ದಾರೆ.
೨೦೦೭ರಲ್ಲಿ ಬ್ರಾಹ್ಮಿನಿ ಸ್ಟೀಲ್ ಕಂಪೆನಿಗೆ ೧೦೬೭೦ ಎಕರೆ ಭೂಮಿಯನ್ನು ಎಕರೆಗೆ ೧೮೦೦೦ ರೂಗಳಂತೆ ನೀಡಲಾಯಿತು. ಅದರ ಶಂಕುಸ್ಥಾಪನೆಯನ್ನು ನೆರವೇರಿಸಿದ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿಗಳಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿಯವರು ಆ ಕಂಪೆನಿಯು ೨೦೦೯ರ ಹೊತ್ತಿಗೆ ೧೫೦೦೦ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ೨ ದಶಲಕ್ಷ ಟನ್‌ಗಳಷ್ಟು ಉಕ್ಕನ್ನು ತಯಾರಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ತಿಳಿಸಿದ್ದರು. ಅದೇ ದಿನ ಜನಾರ್ಧನ ರೆಡ್ಡಿ ೭.೫ ಕೋಟಿ ರೂಗಳಷ್ಟು ಮೌಲ್ಯದ ಬುಲೆಟ್ ನಿರೋಧಕ ವೋಲ್ವೋ ಬಸ್ ಒಂದನ್ನು ವೈ.ಎಸ್.ರಾಜಶೇಖರ ರೆಡ್ಡಿಯವರಿಗೆ ಕಾಣಿಕೆಯಾಗಿ ನೀಡಿದರು. ಚಂದ್ರಬಾಬು ನಾಯ್ಡುರವರ ಪ್ರಕಾರ ಬ್ರಾಹ್ಮಿನಿ ಸ್ಟೀಲ್ ಕಂಪೆನಿಗೆ ಮಾತ್ರ ಕಬ್ಬಿಣದ ಅದಿರನ್ನು ಸರಬರಾಜು ಮಾಡಬೇಕೆಂಬ ಉದ್ದೇಶದಿಂದಲೇ ರೆಡ್ಡಿ ಸಹೋದರರಿಗೆ ಓಬಳಾಪುರಂ ಗಣಿಗಳನ್ನು ಮಂಜೂರು ಮಾಡಲಾಗಿತ್ತು. ಅದರ ಬದಲಿಗೆ ಬ್ರಾಹ್ಮಣಿ ಸ್ಟೀಲ್ಸ್‌ನ ಉಪಸಂಸ್ಥೆಯಾಗಿರುವ ಓಬಳಾಪುರಂ ಗಣಿಗಳು ಬ್ರಾಹ್ಮಿನಿ ಸ್ಟೀಲ್ಸ್ ಉಕ್ಕನ್ನು ತಯಾರಿಸಲು ಪ್ರಾರಂಭಿಸುವ ಮೊದಲೇ ಕಬ್ಬಿಣದ ಅದಿರನ್ನು ರಫ್ತುಮಾಡಿ ಅದರಿಂದ ಸಾಕಷ್ಟು ಲಾಭ ಗಳಿಸಿದೆ. ಅಂದರೆ ಸರ್ಕಾರದ ಅದಿರು ಅಥವಾ ಮಣ್ಣನ್ನು ತೆಗೆದುಕೊಂಡು ಅದನ್ನು ಪರದೇಶದವರಿಗೆ ಮಾರಿ ಅದರಿಂದ ಬರುವ ಲಾಭವನ್ನು ತಮ್ಮ ಖಾಸಗಿ ಸ್ಟೀಲ್ ಕೈಗಾರಿಕೆಯಲ್ಲಿ ಬಂಡವಾಳ ಹೂಡುವುದು. ಇದು ಹೇಗಿದೆಯೆಂದರೆ, ಎಂ.ಜಿ.ರಸ್ತೆಯಲ್ಲಿ ೧೦ ಎಕರೆ ಸರ್ಕಾರದ ಜಮೀನನ್ನು ಪಡೆದುಕೊಂಡು ಅದರಲ್ಲಿ ಅರ್ಧ ಜಮೀನನ್ನು ಮಾರಾಟಮಾಡಿ ಉಳಿದರ್ಧ ಸರ್ಕಾರದ ಜಮೀನನ್ನು ಬ್ಯಾಂಕ್‌ಗಳಿಗೆ ಒತ್ತೆಯಿಟ್ಟು ಅಲ್ಲಿ ಕಟ್ಟಡಗಳನ್ನು ನಿರ್ಮಿಸಿ ತಾವು ಅದರ ಬಾಡಿಗೆಯ ಲಾಭವನ್ನು ಪಡೆದುಕೊಳ್ಳುವುದು. ಎಂತಹ ಅದ್ಭುತ ವ್ಯವಹಾರ ಚತುರತೆ! ಇದೇ ಆರೋಪವನ್ನೇ ಆಂಧ್ರ ಪ್ರದೇಶದ ವಿರೋಧ ಪಕ್ಷಗಳು ರೆಡ್ಡಿ ಸಹೋದರರ ಮೇಲೆ ಹೊರಿಸುತ್ತಿವೆ. ಆದರೆ ರೆಡ್ಡಿ ಸಹೋದರರ ಪ್ರಕಾರ ಓಬಳಾಪುರಂ ಗಣಿಗಳ ಭೂಮಿಯನ್ನು ಗುತ್ತಿಗೆ ನೀಡಿರುವ ಸರ್ಕಾರ ಅದರಲ್ಲಿನ ಕಬ್ಬಿಣದ ಅದಿರನ್ನು ಬ್ರಾಹ್ಮಿನಿ ಸ್ಟೀಲ್ ಕಂಪೆನಿಗೇ ಕೊಡಬೇಕೆಂಬ 'ಕ್ಯಾಪ್ಟೀವ್ ಗಣಿ'ಗಳ ಶರತ್ತನ್ನು ಹಾಕಿಲ್ಲ. ಇತರರು ಹೇಳುವಂತೆ ಪರವಾನಗಿ ನೀಡುವ ಸಮಯದಲ್ಲಿ ಸರ್ಕಾರ ಬೇಕೆಂದೇ ಆ ಶರತ್ತನ್ನು ಕೈಬಿಟ್ಟಿದೆ!
ಜನಾರ್ಧನ ರೆಡ್ಡಿಯವರು ಹೇಳಿರುವಂತೆ ವರ್ಷಕ್ಕೆ ೫.೫ರಿಂದ ೬ ದಶಲಕ್ಷ ಟನ್‌ನಂತೆ ಒಟ್ಟು ೧೦೨ ದಶಲಕ್ಷ ಟನ್ ಕಬ್ಬಿಣದ ಅದಿರನ್ನು ತೆಗೆಯಲು ಆಂಧ್ರದ ಅನಂತಪುರ್ ಜಿಲ್ಲೆಯಲ್ಲಿ ಓಬಳಾಪುರಂ ಗಣಿಗಳು ಪರವಾನಗಿ ಪಡೆದಿವೆ. ಅಷ್ಟಲ್ಲದೆ ಆ ಕಂಪೆನಿಯು ಕರ್ನಾಟಕದಲ್ಲಿ ೧೬ ದಶಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರನ್ನು ತೆಗೆಯಲು ಪರವಾನಗಿಗಾಗಿ ಅರ್ಜಿಯನ್ನು ಸಲ್ಲಿಸಿವೆ ಹಾಗೂ ಸರ್ಕಾರದಲ್ಲಿ ಈ ಪ್ರಸ್ತಾವನೆ ಮಂಜೂರಾಗುವ ಹಂತದಲ್ಲಿದೆ. ಅವರೇ ಹೇಳಿರುವಂತೆ ಓಬಳಾಪುರಂ ಗಣಿಗಳು ಕಳೆದ ವರ್ಷ ೧೩೦೦ ಕೋಟಿಗಳಷ್ಟು ಹಣ ಗಳಿಸಿದೆ ಹಾಗೂ ಅದನ್ನು ಬ್ರಾಹ್ಮಿನಿ ಸ್ಟೀಲ್ ಕಂಪೆನಿಯಲ್ಲಿ ಹೂಡಲಾಗಿದೆ. ಅವಶ್ಯಕವಿರುವ ಇನ್ನೂ ೩೦೦೦ ಕೋಟಿಗಳನ್ನು ಹಣಕಾಸು ಸಂಸ್ಥೆಗಳಿಂದ ಪಡೆಯಲು ಉದ್ದೇಶಿಸಲಾಗಿದೆ. ಇಲ್ಲಿರುವ ಬಹುಮುಖ್ಯ ಪ್ರಶ್ನೆಯೆಂದರೆ, ಹೇಗೆ ನಮ್ಮ ಸರ್ಕಾರಗಳು ದೇಶದ ಖನಿಜ ಸಂಪತ್ತನ್ನು ಅಷ್ಟೊಂದು ಕಡಿಮೆ ಹಣಕ್ಕೆ ಮಾರಿಕೊಳ್ಳಬಲ್ಲವು? ಅದರ ಬದಲಿಗೆ ಸರ್ಕಾರಗಳೇ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳನ್ನು ಸ್ಥಾಪಿಸಿ ಅದರ ಲಾಭವನ್ನು ರಾಜ್ಯದ ಹಿತಕ್ಕಾಗಿ ಬಳಸಿಕೊಳ್ಳಬಹುದಾಗಿತ್ತು ಅಥವಾ ಅಂತಹ ಕಾರ್ಯಕ್ಕಾಗಿ ಜಾಗತಿಕ ಟೆಂಡರ್‌ಗಳನ್ನು ಕರೆಯಬಹುದಾಗಿತ್ತು ಅಥವಾ ಪ್ರತಿಯೊಂದು ಟನ್ ಕಬ್ಬಿಣದ ಅದಿರಿನ ಮೇಲಿನ ಲೆವಿಯನ್ನು ಹೆಚ್ಚಿಸಬಹುದಾಗಿತ್ತು. ಚಂದ್ರಬಾಬು ನಾಯ್ಡುರವರ ಆರೋಪದಂತೆ ಆಂಧ್ರ ಪ್ರದೇಶದ ಸರ್ಕಾರವು ಅನಂತ್‌ಪುರ್ ಜಿಲ್ಲೆಯೊಂದರಿಂದಲೇ ವಾರ್ಷಿಕ ೧೦೦೦೦ ಕೋಟಿ ರೂಗಳನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಆ ಜಮೀನನ್ನು ಗುತ್ತಿಗೆ ನೀಡಿರುವುದರಿಂದ ಸರ್ಕಾರಕ್ಕೆ ಪ್ರತಿ ವರ್ಷ ಕೇವಲ ೯ ಕೋಟಿ ರೂಗಳಷ್ಟು ಹಣ ಮಾತ್ರ ದೊರಕುತ್ತಿದೆ. ರೆಡ್ಡಿ ಸಹೋದರರ ರೆಡ್ ಗೋಲ್ಡ್ ಕಂಪೆನಿ ಮತ್ತು ಜಗನ್‌ರವರ ಜಗತಿ ಪಬ್ಲಿಕೇಶನ್ಸ್ ನಡುವೆ ವ್ಯವಹಾರದ ಸಂಬಂಧಗಳಿವೆ ಎಂದೂ ಸಹ ನಾಯ್ಡುರವರು ಆರೋಪಿಸಿದ್ದಾರೆ. ಜಗನ್‌ರವರ ಖಾಸಗಿ ದೂರದರ್ಶನ ಚಾನೆಲ್ ಮತ್ತು ಸಾಕ್ಷಿ ವೃತ್ತ ಪತ್ರಿಕೆಗಳನ್ನು ರೆಡ್ಡಿ ಸಹೋದರರೇ ಸಾಕಿ ಸಲಹುತ್ತಿದ್ದಾರೆ. ಇದಕ್ಕುತ್ತರವಾಗಿ ಜನಾರ್ಧನ ರೆಡ್ಡಿಯವರು ಈ ಹೇಳಿಕೆಗಳೆಲ್ಲಾ ಸುಳ್ಳೆಂದೂ ಅವೇನಾದರೂ ಸಾಬೀತಾದಲ್ಲಿ ಅವರು ರಾಜಕೀಯ ಸಂನ್ಯಾಸ ಪಡೆಯುವುದಾಗಿ ಹಾಗೂ ಹೈದರಾಬಾದ್‌ನ ರಸ್ತೆಗಳಲ್ಲಿ ಶಿಕ್ಷೆ ಪಡೆಯುವುದಾಗಿ ತಿಳಿಸಿದ್ದಾರೆ.
ತಮ್ಮ ಧನಬಲದಿಂದಾಗಿ ಕರ್ನಾಟಕ ಮತ್ತು ಆಂಧ್ರದಲ್ಲಿ ಗಣಿ ಮಾಫಿಯಾ ಬಿ.ಜೆ.ಪಿ ಮತ್ತು ಕಾಂಗ್ರೆಸ್‌ಗಳನ್ನು ಅಧಿಕಾರಕ್ಕೆ ತರವಲ್ಲಿ ಪ್ರಮುಖ ಪಾತ್ರ ವಹಿಸಿವೆ. ದೇಶದ ರಾಷ್ಟ್ರೀಯ ಪಕ್ಷಗಳೂ ಸಹ ಅಕ್ರಮ ಗಣಿ ಮಾಫಿಯಾಗಳಿಗೆ ಪರೋಕ್ಷ ಬೆಂಬಲ ನೀಡುತ್ತಾ ಬಂದಿವೆ. ಆಂಧ್ರದ ಕುತ್ತಿಗೆಯನ್ನು ಜಗನ್ ಹಿಡಿದಿದ್ದರೆ ರೆಡ್ಡಿ ಸಹೋದರರು ಕರ್ನಾಟಕದ ಸರ್ಕಾರದ ಕುತ್ತಿಗೆ ಹಿಚುಕಿ ಮುಖ್ಯ ಮಂತ್ರಿಗಳು ಅಸಹಾಕತೆಯಿಂದ ಸಾರ್ವಜನಿಕರೆದುರು ಕಣ್ಣೀರು ಹಾಕುವಂತೆ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಗಳು ಇಂತಹ ಮಾಫಿಯಾಗಳ ಕೈಗೆ ಸಿಲುಕುತ್ತಿರುವುದು ದುರದೃಷ್ಟಕರವಾಗಿದೆ. ಆಂಧ್ರದಲ್ಲಿ ವಿರೋಧ ಪಕ್ಷಗಳೆಲ್ಲಾ ಇವರೆದುರು ಒಗ್ಗೂಡಿದ್ದರೆ, ಕರ್ನಾಟಕದ ವಿರೋಧ ಪಕ್ಷಗಳು ಯಾವುದೇ ಆಸಕ್ತಿ ತೋರುತ್ತಿಲ್ಲ. ಇಂತಹ ಗಂಭೀರ ವಿಷಯದ ಬಗ್ಗೆ ತೀರಾ ಅನಾಸಕ್ತಿ ತೋರುತ್ತಿರುವ ಜೆ.ಡಿ.ಎಸ್.ನ ಉದ್ದೇಶದ ಬಗ್ಗೆ ಗುಮಾನಿ ಬರುತ್ತದೆ. ಆದರೆ ಅದರ ತೃತೀಯ ರಂಗದ ಜೊತೆಗಾರರಾಗಿರುವ ತೆಲುಗು ದೇಶಂ ಮತ್ತು ಎಡ ಪಕ್ಷಗಳು ಈ ವಿಷಯವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿವೆ.
ಇಂತಹ ಸಂದರ್ಭದಲ್ಲಿ ಆಂಧ್ರ ಸರ್ಕಾರದ ಸಿ.ಬಿ.ಐ. ತನಿಖೆಯ ಕೋರಿಕೆ ಹಾಗೂ ಉಚ್ಛ ನ್ಯಾಯಾಲಯದ ಸಿ.ಇ.ಸಿ. ವರದಿಗಳು ಸ್ವಾಗತಾರ್ಹ ಅಂಶಗಳಾಗಿವೆ.

Friday, January 15, 2010

ಸ್ವಿಸ್ ಬ್ಯಾಂಕ್‌ಗಳಲ್ಲಿನ ಭಾರತೀಯರ ಹಣ- ಭಾರತಕ್ಕೆ ಮರಳಿ ತರಬಹುದೆ?

2009ರ ಚುನಾವಣೆಗಳ ಪ್ರಚಾರಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳೆಲ್ಲಾ ಸ್ವಿಸ್ ಬ್ಯಾಂಕ್‌ಗಳಲ್ಲಿ ಅಡಗಿಸಿಟ್ಟಿರುವ ಕೋಟಿಗಟ್ಟಲೆ ಭಾರತೀಯ ಕಪ್ಪುಹಣದ ಬಗ್ಗೆ ಮಾತನಾಡಿವೆ. ಬಿ.ಜೆ.ಪಿ.ಯ ಶ್ರೀ ಅದ್ವಾನಿಯವರು ಹಾಗೂ ಕಮ್ಯೂನಿಸ್ಟ್ ಪಕ್ಷದ ಶ್ರೀ ಸೀತಾರಾಂ ಯೆಚೂರಿಯವರು 1.5 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಅಡಗಿಸಿಟ್ಟಿದ್ದಾರೆ ಎಂದಿದ್ದಾರೆ. ಕೆಲವು ವರದಿಗಳಂತೆ ಕೊಳ್ಳೆಹೊಡೆದು ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣಕೂಡಿಸಿಟ್ಟಿರುವವರಲ್ಲಿ ಜಗತ್ತಿನಲ್ಲಿ ಭಾರತೀಯರದೇ ಎತ್ತಿದ ಕೈ. ಭಾರತೀಯರದು ಸುಮಾರು 1500 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಹಣವಿದ್ದರೆ, ರಷಿಯನ್ನರು 480 ಬಿಲಿಯನ್ ಡಾಲರ್‌ಗಳಷ್ಟು ಹಣವಿರಿಸಿ ಎರಡನೇ ಸ್ಥಾನದಲ್ಲಿದ್ದಾರೆ ಹಾಗೂ 96 ಬಿಲಿಯನ್ ಡಾಲರ್‌ಗಳಷ್ಟು ಹಣವಿರಿಸಿರುವ ಚೀನಾದವರು ಐದನೇ ಸ್ಥಾನದಲ್ಲಿದ್ದಾರೆ. ಅಮೆರಿಕದವರಂತೂ ಮೊದಲ ಹತ್ತು ಸ್ಥಾನದಲ್ಲೂ ಇಲ್ಲ. ಇದು ನಮ್ಮ ಭ್ರಷ್ಟತೆಯ ಸೂಚಕವೆ? ಅಮೆರಿಕ ಮತ್ತು ಚೀನಾ ಏಕೆ ಭಾರತ ಮತ್ತು ರಷಿಯಾಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿವೆ ಎಂಬುದನ್ನೂ ತೋರಿಸುತ್ತದೆ. ಇತ್ತೀಚಿನ ಜಾಗತಿಕ ಆರ್ಥಿಕ ಅಧ್ಯಯನದ ವರದಿಗಳಂತೆ 2002ರಿಂದ 2006ವರೆಗೆ ವಾರ್ಷಿಕ ಭಾರತದಿಂದ 23.7 ಮಿಲಿಯನ್ ಅಮೆರಿಕನ್ ಡಾಲರ್ ಅಥವಾ 136,466 ಕೋಟಿ ರೂಗಳಷ್ಟು ಹಣವನ್ನು ಅಕ್ರಮವಾಗಿ ಸಾಗಿಸಲಾಗಿದೆ. ಅದೇ ಲೆಕ್ಕಾಚಾರದ ಪ್ರಕಾರ 1947ರಿಂದ ಅಕ್ರಮವಾಗಿ ಸಾಗಿಸಿರಬಹುದಾದ ಆ ರೀತಿಯ ಹಣವನ್ನು ಲೆಕ್ಕಹಾಕಿದಲ್ಲಿ ಅದು ಸುಲಭವಾಗಿ 70 ಲಕ್ಷ ಕೋಟಿ ಅಥವಾ 1.4.ಟ್ರಿಲಿಯನ್ ಅಮೆರಿಕನ್ ಡಾಲರ್ ಹಣವಾಗುತ್ತದೆ. ಆ ವರದಿಯ ಪ್ರಕಾರ ಅದರಲ್ಲಿ ಮೂರನೇ ಒಂದು ಭಾಗ ಮಾತ್ರ ಸ್ವಿಸ್ ಬ್ಯಾಂಕ್‌ಗಳಲ್ಲಿದೆ ಹಾಗೂ ಉಳಿದದ್ದು ಜಗತ್ತಿನಾದ್ಯಂತವಿರುವ 69 ತೆರಿಗೆಗಳ್ಳರ ಆಶ್ರಯತಾಣಗಳಲ್ಲಿ ಅಡಗಿಸಿಡಲಾಗಿದೆ. ಕೆಲವು ವರದಿಗಳ ಪ್ರಕಾರ ನೆಹರೂ ಅವಧಿಯಲ್ಲಿ, ರೂಪಾಯಿ ಮತ್ತು ಅಮೆರಿಕದ ಡಾಲರ್‌ನ ವಿನಿಮಯ ಅಂತರ ಅತಿ ಹೆಚ್ಚು ಇದ್ದಾಗಲೇ ಅತಿ ಹೆಚ್ಚು ಹಣದ ಕಳ್ಳಸಾಗಾಣಿಕೆ ನಡೆದಿದೆ. ಬೋಫೋರ್ಸ್‌ನ ಖರೀದಿಯ ಲಂಚದ ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲೇ ಅಡಗಿಸಿಡಲಾಗಿದೆಯೆಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಹಣವನ್ನು ವಾಪಸ್ಸು ತಂದಲ್ಲಿ ಭಾರತದ ಪ್ರತಿ ಹಳ್ಳಿಗೂ 4 ಕೋಟಿ ರೂಗಳನ್ನು ಹಂಚಬಹುದೆಂದು ಅದ್ವಾನಿಯವರು ಹೇಳಿದ್ದಾರೆ. ಈ ಹಣವನ್ನು ತರಲು ಹಿಂದೇಟು ಹಾಕುತ್ತಿರುವ ಯು.ಪಿ.ಎ. ಸರ್ಕಾರದ ಬಗೆಗೆ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸುತ್ತಿವೆ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವರು ಸ್ವಿಸ್ ಸರ್ಕಾರದೊಂದಿಗಿನ ಡಬಲ್ ಟ್ಯಾಕ್ಸೇಶನ್ ಒಪ್ಪಂದದಲ್ಲಿ ತಿದ್ದುಪಡಿ ತರುವ ಬಗೆಗೆ ಮಾತ್ರ ಸರ್ಕಾರಕ್ಕೆ ಆಸಕ್ತಿ ಇದೆಯೆಂದು ಹೇಳಿದ್ದಾರೆ. ಆದರೆ ಭಾರತೀಯ ಗ್ರಾಹಕರ ಬಗೆಗೆ ತನ್ನಲ್ಲಿಗೆ ಯಾವುದೇ ಮೀನು ಹಿಡಿಯುವಂತೆ ಬರಬೇಡಿ, ಬರುವುದಾದಲ್ಲಿ ನಿರ್ದಿಷ್ಟ ವ್ಯಕ್ತಿಯೊಬ್ಬನ ಬಗ್ಗೆ ನಿರ್ದಿಷ್ಟ ತೆರಿಗೆಗಳ್ಳತನದ ಅಥವಾ ಭ್ರಷ್ಟಾಚಾರದ ಸಬೂತುಗಳಿದ್ದಲ್ಲಿ ಅವುಗಳನ್ನು ತೆಗೆದುಕೊಂಡುಬರುವಂತೆ ಸ್ವಿಸ್ ಬ್ಯಾಂಕ್‌ಗಳು ಭಾರತ ಸರ್ಕಾರಕ್ಕೆ ತಿಳಿಸಿವೆ.

ಕಾಂಗ್ರೆಸ್ ಪಕ್ಷ ಮತ್ತು ನೆಹರೂ ಕುಟುಂಬ ಈ ದೇಶವನ್ನು 50ಕ್ಕೂ ಹೆಚ್ಚು ವರ್ಷಗಳು ಆಳಿವೆ. ಯಾವುದೇ ನಿರ್ದಿಷ್ಟ ಸಬೂತಿಲ್ಲದೆ ವಿರೋಧ ಪಕ್ಷಗಳು ಕಾಂಗೆಸ್ ಪಕ್ಷವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಅಕ್ರಮ ಹಣ ಕೂಡಿಟ್ಟಿರುವುದಾಗಿ ದೂರುತ್ತಿವೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಹಾಗೂ ಬೋಫರ್ಸ್ ಖರೀದಿಯ ಸಮಯದಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಹೆಚ್ಚು ಹಣವನ್ನು ಕೂಡಿಡಲಾಗಿತ್ತು. ಹಾಗಾದರೆ ಕಾಂಗ್ರೆಸ್ಸೇತರ ಪ್ರಧಾನಮಂತ್ರಿಗಳು ಈ ವಿಷಯವನ್ನೇಕೆ ಕೈಗೆತ್ತಿಕೊಳ್ಳಲಿಲ್ಲ? ಈ ‘ಸ್ವಿಸ್ ಕ್ಲಬ್’ಗಳ ಸದಸ್ಯರಲ್ಲಿ ಇತರರೂ ಇದ್ದಾರೆ- ಎಲ್ಲಾ ಪಕ್ಷಗಳ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳು. ಇದೇ ಕಾರಣಕ್ಕಾಗಿಯೇ ಯು.ಪಿ.ಎ. ಸರ್ಕಾರ ಸ್ವಿಸ್ ಬ್ಯಾಂಕ್‌ಗಳನ್ನು ಒತ್ತಾಯಿಸಲು ಹಿಂದೇಟು ಹಾಕುತ್ತಿದೆಯೆ? ಯು.ಬಿ.ಎಸ್. ಎಂಬ ಸ್ವಿಸ್ ಬ್ಯಾಂಕ್ ತನ್ನಲ್ಲಿನ ಅಮೆರಿಕದ ಗ್ರಾಹಕರನ್ನು ರಕ್ಷಿಸಲು ಅಮೆರಿಕದ ತೆರಿಗೆ ಇಲಾಖೆಗೆ 780 ಮಿಲಿಯನ್ ಡಾಲರ್ ಪರಿಹಾರವನ್ನು ಕೊಡಲು ಒಪ್ಪಿಕೊಂಡಿರುವಾಗ ಅದನ್ನೇ ಭಾರತ ಸರ್ಕಾರವೇಕೆ ಮಾಡಬಾರದು?

ಯು.ಬಿ.ಎಸ್. ಬ್ಯಾಂಕ್ ಅಮೆರಿಕದ ಸರ್ಕಾರಕ್ಕೆ ಏಕೆ ಪರಿಹಾರ ಧನ ನೀಡಿತೆಂಬುದನ್ನು ವಿವರವಾಗಿ ಗಮನಿಸೋಣ. ತನ್ನ ನಾಗರಿಕರು ತೆರಿಗೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಲು ಯು.ಬಿ.ಎಸ್. ಅಧಿಕಾರಿಗಳು ಸಹಾಯಮಾಡಿದ್ದಾರೆಂದು ಅಮೆರಿಕದ ಸರ್ಕಾರ ರುಜುವಾತುಗೊಳಿಸಿತು. ಹಾಗಾಗಿ ಅದು ತನ್ನ ಗ್ರಾಹಕರಾಗಿರುವ ಎಲ್ಲಾ ಅಮೆರಿಕದ ನಾಗರಿಕರ ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡುವಂತೆ ಒತ್ತಾಯಿಸಿತು. ಅಮೆರಿಕದ ಮಾಹಿತಿಯಂತೆ ಕನಿಷ್ಠ 52,೦೦೦ ಅಮೆರಿಕದ ನಾಗರಿಕರು ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದರು ಹಾಗೂ ಅವರೆಲ್ಲ ತೆರಿಗೆಯಿಂದ ತಪ್ಪಿಸಿಕೊಂಡಿದ್ದರು. ಸ್ವಿಟ್ಜರ್‌ಲ್ಯಾಂಡಿನ ಕಾನೂನಿನಂತೆ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಅಪರಾಧವಲ್ಲ ಹಾಗೂ 1934ರ ಗೋಪ್ಯತಾ ಅಧಿನಿಯಮದಂತೆ ಗ್ರಾಹಕರ ವಿವರ ನೀಡುವುದರಿಂದ 5೦,೦೦೦ ದಂಡ ಪಾವತಿಸಬೇಕಾಗಬಹುದು ಅಥವಾ ಸೆರೆಮನೆ ವಾಸ ಅನುಭವಿಸಬೇಕಾಗಬಹುದು ಅಥವಾ ಅವೆರಡನ್ನೂ ಅನುಭವಿಸಬೇಕಾಗಬಹುದು. ತನ್ನ ದೇಶದ ಸಮಗ್ರತೆಯ ಉಲ್ಲಂಘನೆಯಾಗುವುದರಿಂದ ಇತರ ಯಾವುದೇ ದೇಶದ ಕಾನೂನು ತನ್ನ ದೇಶದ ಕಾನೂನಿನ ಮೇಲೆ ಒತ್ತಡ ತರುವಹಾಗಿಲ್ಲವೆಂದು ಯು.ಬಿ.ಎಸ್. ಬ್ಯಾಂಕ್ ಹೇಳಿತು. ಆದರೆ ಅವೆರಡೂ ದೇಶಗಳಲ್ಲಿ ಅಪರಾಧಿ ಎಂದು ಪರಿಗಣಿಸಬಹುದಾದ ಗ್ರಾಹಕನಿದ್ದಲ್ಲಿ ಅಂಥವನ ವಿವರಗಳನ್ನು ಸ್ವಿಸ್ ಬ್ಯಾಂಕ್‌ಗಳು ನೀಡಬೇಕಾಗುತ್ತವೆ. ಆದರೆ ಅಮೆರಿಕದ ವಿಷಯದಲ್ಲಿ ಆ ಗ್ರಾಹಕರು ಸ್ವಿಸ್‌ನಲ್ಲಿ ಅಪರಾಧಿಗಳಲ್ಲದಿದ್ದರು ಅಮೆರಿಕ ಸರ್ಕಾರದ ತೀವ್ರ ಒತ್ತಡದಿಂದಾಗಿ ಯು.ಬಿ.ಎಸ್. 3೦೦ ಗ್ರಾಹಕರ ವಿವರಗಳನ್ನು ನೀಡಲು ಸಮ್ಮತಿಸಿತು ಹಾಗೂ ತನ್ನ ಹಿತಾಸಕ್ತಿಯನ್ನು ಮತ್ತು ಇತರ ಗ್ರಾಹಕರ (ಅವರ ವಿವರಗಳನ್ನು ಬಹಿರಂಗಗೊಳಿಸದೆ) ಹಿತಾಸಕ್ತಿಯನ್ನು ಕಾಪಾಡಲು 78೦ ಮಿಲಿಯನ್ ಡಾಲರ್ ಹಣವನ್ನು ಪಾವತಿಸಿತು. ಅಲ್ಲದೆ ಅಮೆರಿಕ ತನ್ನ ದೇಶದಲ್ಲಿ ಸ್ವಿಸ್ ಬ್ಯಾಂಕ್‌ಗಳ ಕಾರ್ಯಾಚರಣೆಯ ಪರವಾನಗಿಯನ್ನು ಹಿಂತೆಗೆದುಕೊಳ್ಳುವುದಾಗಿ ಹೆದರಿಸಿತು. ಈ ಒತ್ತಡಕ್ಕೂ ಸ್ವಿಸ್ ಬ್ಯಾಂಕ್‌ಗಳು ಮಣಿದವು ಏಕೆಂದರೆ, ಅಮೆರಿಕದಲ್ಲಿ ಸ್ವಿಸ್ ಬ್ಯಾಂಕ್‌ಗಳು ಶೇ.65ರಷ್ಟು ಬಂಡವಾಳ ಹೂಡಿಕೆ ಮಾಡಿವೆ. ಆದರೆ ಭಾರತದಲ್ಲಿನ ಅವುಗಳ ಹೂಡಿಕೆ ಶೇ.5ಕ್ಕಿಂತ ಕಡಿಮೆಯಿದೆ.

ಬ್ಯಾಂಕ್‌ಗಳ ಈ ಗೋಪ್ಯತೆಯ ಅಧಿನಿಯಮವೇನು? ಅದರ ಹಿಂದಿನ ಚರಿತ್ರೆಯೇನು?
ಕಳೆದ 3೦೦ ವರ್ಷಗಳಿಂದ ಸ್ವಿಸ್ ಬ್ಯಾಂಕ್‌ಗಳು ಅವುಗಳ ಗೋಪ್ಯತೆಗೆ ಹೆಸರುವಾಸಿಯಾಗಿವೆ. ಸ್ವಿಸ್ ಬ್ಯಾಂಕ್‌ಗಳನ್ನು ಫ್ರೆಂಚ್ ರಾಜರ ಬ್ಯಾಂಕ್‌ಗಳೆಂದು ಕರೆಯಲಾಗುತ್ತಿತ್ತು. 3೦೦ ವರ್ಷಗಳ ಹಿಂದಿನಿಂದಲೇ ಫ್ರೆಂಚ್ ರಾಜರು ಸ್ವಿಸ್ ಬ್ಯಾಂಕ್‌ಗಳನ್ನು ಬಳಸುತ್ತಿದ್ದರು. ನೆಪೋಲಿಯನ್ ಸಹ ಅವುಗಳಲ್ಲಿ ಹಣದ ಠೇವಣಿ ಇಡುತ್ತಿದ್ದ. ರಾಜಮನೆತನಗಳ ಅಧಿಕಾರಿಗಳು, ರಾಜಕಾರಣಿಗಳು ಮತ್ತು ವ್ಯಾಪಾರಸ್ಥರು ಅವುಗಳ ಗ್ರಾಹಕರಾಗಿದ್ದರು. ಅವುಗಳ ಗೋಪ್ಯತೆ ಮತ್ತು ವಿಶ್ವಾಸಾರ್ಹತೆಯಿಂದಲೇ ಅವು ಜನಪ್ರಿಯವಾಗಿದ್ದವು. 20ನೇ ಶತಮಾನದ ಪ್ರಾರಂಭದಲ್ಲಿ ಅದು ಹಲವಾರು ಫ್ರೆಂಚ್ ನಾಗರಿಕರನ್ನು ಗ್ರಾಹಕರನ್ನಾಗಿ ಹೊಂದಿತ್ತು. ಆ ಸಮಯದಲ್ಲಿ ಕೆಲವು ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಪ್ಯಾರಿಸ್ಸಿನಲ್ಲಿ ತನ್ನ ರಹಸ್ಯ ಗ್ರಾಹಕರಿಗೆ ಸಹಾಯಮಾಡುವ ಸಮಯದಲ್ಲಿ ಸಿಕ್ಕಿಹಾಕಿಕೊಂಡು ಒಂದು ದೊಡ್ಡ ವಿವಾದವೇ ಉಂಟಾಗಿತ್ತು. ಆಗ ಫ್ರೆಂಚ್ ಸರ್ಕಾರವು ಪ್ಯಾರಿಸ್ಸಿನಲ್ಲಿನ ಸ್ವಿಸ್ ಬ್ಯಾಂಕ್ ಕಚೇರಿಗೆ ದಾಳಿನಡೆಸಿ ಫ್ರಾನ್ಸ್‌ನಿಂದ ತೆರಿಗೆಗಳ್ಳತನ ಮಾಡಿ ಹಣ ಸಾಗಿಸುತ್ತಿದ್ದ ಹಲವಾರು ಫ್ರೆಂಚ್ ಖಾತೆದಾರರ ವಿವರಗಳನ್ನು ಸರ್ಕಾರವು ಪಡೆದುಕೊಂಡಿತ್ತು. ಆಗ ವಿರೋಧ ಪಕ್ಷಗಳವರು ಫ್ರಾನ್ಸ್‌ನ ಸಿರಿವಂತ ನಾಗರಿಕರನ್ನು ಅವರ ಹಣದಿಂದಲೇ ಸ್ವಿಸ್ ಬ್ಯಾಂಕ್‌ಗಳು ಜರ್ಮನಿಗೆ ವಿಶ್ವಯುದ್ಧದ ಸಮಯದಲ್ಲಿ ಸಹಾಯಮಾಡಿದೆ ಎಂದು ಅವರನ್ನು ದೂರಿದವು. ಮೊದಲನೆ ವಿಶ್ವಯುದ್ಧದ ನಂತರ1929 ರಲ್ಲಿ ಉಂಟಾದ ಆರ್ಥಿಕ ಹಿಂಜರಿತ ಇಡೀ ವಿಶ್ವವನ್ನೇ ಬಾಧಿಸುತ್ತಿತ್ತು. ಅಲ್ಲದೆ ಆಗ ಜರ್ಮನಿಯಲ್ಲಿ ಹಿಟ್ಲರನ ನಾಜಿ ಪಕ್ಷ ಆಡಳಿತಕ್ಕೆ ಬಂದಿತು. ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿರುವ ಜರ್ಮನ್ ನಾಗರಿಕರನ್ನು ದೇಶದ್ರೋಹಿಗಳೆಂದು ಘೋಷಿಸಿದ. ಅಂಥವರು ವಿವರಗಳನ್ನು ಬಹಿರಂಗಗೊಳಿಸದಿದ್ದಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಅವರಿಗೆ ಮರಣದಂಡನೆ ವಿಧಿಸುವುದಾಗಿ ತಿಳಿಸಿದ. ಆ ಸಮಯದಲ್ಲಿ ಇಡೀ ಯೂರೋಪ್ ಮತ್ತು ಇತರ ರಾಷ್ಟ್ರಗಳು ಅತಂತ್ರ ಸ್ಥಿತಿಯಲ್ಲಿದ್ದವು. ಇದರಿಂದಾಗಿ ಹೆಚ್ಚು ಹೆಚ್ಚು ಯೆಹೂದಿ ವ್ಯಾಪಾರಿಗಳು ತಮ್ಮ ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಕೂಡಿಡತೊಡಗಿದರು. ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಕಾರಣಕ್ಕಾಗಿ ಹಿಟ್ಲರ್ ಮೂವರು ಸಿರಿವಂತ ಯೆಹೂದಿ ವ್ಯಾಪಾರಸ್ಥರನ್ನು ಕೊಂದುಹಾಕಿದ್ದ. ತನ್ನ ಗುಪ್ತಚಾರರಿಗೆ ಯೆಹೂದಿ ಖಾತೆದಾರರ ವಿವರಗಳನ್ನು ಪಡೆಯುವಂತೆ ಆದೇಶಿಸಿದ್ದ. ಈ ಸನ್ನಿವೇಶಗಳಿಂದಾಗಿ ಸ್ವಿಸ್ ಸರ್ಕಾರವು ತನ್ನ ಗ್ರಾಹಕರ ಹಿತರಕ್ಷಣೆಗಾಗಿ ಬ್ಯಾಂಕ್ ಗೋಪ್ಯತೆಯನ್ನು ಕಾನೂನಾಗುವಂತೆ ಮಾಡಿತು ಹಾಗೂ ಇದರಿಂದಾಗಿಯೇ1934 ರ ಪ್ರಖ್ಯಾತ ಬ್ಯಾಂಕ್ ಗೋಪ್ಯತಾ ಅಧಿನಿಯಮ ಜಾರಿಗೆ ಬಂದಿತು. ಈ ಅಧಿನಿಯಮದಲ್ಲಿನ ತಿದ್ದುಪಡಿಯನ್ನು ಪಾರ್ಲಿಮೆಂಟ್ ಮಾತ್ರವಲ್ಲ ಈ ವಿಷಯದ ಬಗ್ಗೆ ಮತಚಲಾಯಿಸುವ ಎಲ್ಲಾ ನಾಗರಿಕರ ಸಮ್ಮತಿಯೂ ಬೇಕಾಗಿದೆ.1983 ರಲ್ಲಿ ನಡೆದ ಒಂದು ರೆಫರೆಂಡಮ್‌ನಲ್ಲಿ ಶೇ.೭೩ರಷ್ಟು ಸ್ವಿಸ್ ನಾಗರಿಕರು ಬ್ಯಾಂಕ್ ಗೋಪ್ಯತಾ ಕಾಯಿದೆಯನ್ನು ಮುಂದುವರಿಸುವಂತೆ ಮತಚಲಾಯಿಸಿದರು.

ಸ್ವಿಸ್ ಬ್ಯಾಂಕ್‌ಗಳು ಯಾವಾಗ ಖಾತೆದಾರರ ಮಾಹಿತಿಯ ವಿವರಗಳನ್ನು ಬಹಿರಂಗಗೊಳಿಸುತ್ತವೆ?
ಮಾದಕ ವಸ್ತುಗಳ ಕಳ್ಳಸಾಗಣೆ, ಹವಾಲಾ, ತೆರಿಗೆ ಕಳ್ಳತನ (ತೆರಿಗೆಯಿಂದ ತಪ್ಪಿಸಿಕೊಳ್ಳುವುದಲ್ಲ), ಭಯೋತ್ಪಾದನಾ ಚಟುವಟಿಕೆಗಳು, ದಿವಾಳಿ ಎದ್ದಿರುವಿಕೆ, ವಿವಾಹ ವಿಚ್ಛೇದನಾ ಪ್ರಕರಣ ಮುಂತಾದವುಗಳಲ್ಲಿ ಅವು ವಿವರಗಳನ್ನು ಬಹಿರಂಗಗೊಳಿಸುತ್ತವೆ. ಈ ಪ್ರಕರಣಗಳಲ್ಲೂ ಸಹ ಅಪರಾಧವನ್ನು ನಿಸ್ಸಂಶಯವಾಗಿ ರುಜುವಾತುಗೊಳಿಸಬೇಕು. ಈ ಪ್ರಕರಣಗಳಲ್ಲಿ ಇತರ ದೇಶಗಳ ನಾಗರಿಕರು ತೊಡಗಿದ್ದಲ್ಲಿ ಆ ಅಪರಾಧ ಅವರ ದೇಶದಲ್ಲಿ ಹಾಗೂ ಸ್ವಿಟ್ಜರ್‌ಲ್ಯಾಂಡಿನಲ್ಲೂ ಅಪರಾಧವಾಗಿರಬೇಕು. ಯು.ಬಿ.ಎಸ್. ಬ್ಯಾಂಕ್ ಅಮೆರಿಕದ ತೆರಿಗೆ ಇಲಾಖೆಗೆ ಪರಿಹಾರ ನೀಡುವುದಕ್ಕೆ ಇದೇ ಕಾರಣವಾಗಿತ್ತು. ಇಂತಹ ಪ್ರಕರಣಗಳಲ್ಲಿ ಅವುಗಳ ಗ್ರಾಹಕರು ತೊಡಗಿಲ್ಲದಿದ್ದಲ್ಲಿ ಹಾಗೂ ಅವರ ವಿವರಗಳನ್ನು ಬಹಿರಂಗಗೊಳಿಸಿದ್ದಲ್ಲಿ ಅವರು ಹಾನಿ ಪರಿಹಾರ ಕೋರಲು ಅವರಿಗೆ ಕಾನೂನಿನಂತೆ ಹಕ್ಕಿರುತ್ತದೆ.

ಜನ ಸ್ವಿಸ್ ಬ್ಯಾಂಕ್‌ಗಳಲ್ಲಿ ಏಕೆ ಹಣ ಅಡಗಿಸಿಡುತ್ತಾರೆ?
1. ಅದರ ರಹಸ್ಯ ವಿಧಾನಗಳಿಂದಾಗಿ. ಅವು ಸಂಖ್ಯೆಗಳಿರುವ ಖಾತೆಗಳನ್ನು ಕೊಡುತ್ತವೆ. ಯಾವುದೇ ಹೆಸರು ಅಥವಾ ವಿವರಗಳನ್ನು ಹೊರಗೆಡವುದಿಲ್ಲ.
2. ಅಮೆರಿಕದ ಡಾಲರ್‌ನಂತರ ಸ್ವಿಸ್ ಕರೆನ್ಸಿಯೇ ಸದೃಢವಾದುದು.
3. ಸ್ವಿಸ್ ಬ್ಯಾಂಕ್‌ಗಳು ತಮ್ಮ ಅರ್ಹತೆಗೆ ಆಧಾರವಾಗಿ ಶೇ.45ರಷ್ಟು ಚಿನ್ನವನ್ನು ಹೊಂದಿರುತ್ತವೆ.
4. ಯಾವುದಾದರೂ ಬ್ಯಾಂಕ್ ವಿಫಲವಾದಲ್ಲಿ ಗ್ರಾಹಕ ಗ್ಯಾರಂಟಿ ಒಪ್ಪಂದದಿಂದಾಗಿ ಸ್ವಿಸ್ ಬ್ಯಾಂಕರ್‌ಗಳ ಸಂಘವು ತಕ್ಷಣ ಗ್ರಾಹಕರಿಗೆ ಅವರ ಹಣವನ್ನು ಹಿಂದಿರುಗಿಸುತ್ತದೆ.
5. ಅದೊಂದು ತೆರಿಗೆಗಳ್ಳರ ಸ್ವರ್ಗ. ಅನಿವಾಸಿ ಸ್ವಿಸ್ ನಾಗರಿಕರಿಗೆ ಅವರ ಠೇವಣಿಗಳ ಮೇಲಿನ ಬಡ್ಡಿಯ ಆದಾಯಕ್ಕೆ ಯಾವುದೇ ತೆರಿಗೆಯಿಲ್ಲ (ಅಮೆರಿಕ ಮತ್ತು ಯೂರೋಪಿಯನ್ ನಾಗರಿಕರನ್ನು ಹೊರತುಪಡಿಸಿ ಸ್ವಿಸ್ ಬ್ಯಾಂಕ್‌ಗಳು ಬಡ್ಡಿಯ ಮೇಲಿನ ತೆರಿಗೆಯನ್ನು ಗ್ರಾಹಕರ ವಿವರಗಳನ್ನು ಬಹಿರಂಗಗೊಳಿಸದೆ ಸರ್ಕಾರಗಳಿಗೆ ನೇರವಾಗಿ ಪಾವತಿಸುತ್ತವೆ).

ಸ್ವಿಸ್ ಬ್ಯಾಂಕ್- ಅಷ್ಟೊಂದು ಕೆಟ್ಟದ್ದೆ?
ಖಂಡಿತವಾಗಿಯೂ ಹೌದು. ಏಕೆಂದರೆ ಅದು ಮೊದಲನೆ ಮತ್ತು ಎರಡನೇ ವಿಶ್ವಯುದ್ಧಗಳಲ್ಲಿ ಜರ್ಮನಿಗೆ ಹಣಸಹಾಯ ಮಾಡಿದೆ. ಹಿಟ್ಲರ್ ಯೆಹೂದಿಗಳನ್ನು ಕೊಂದು ಅವರಿಂದ ದೋಚಿಕೊಂಡ ಆಸ್ತಿ ಮತ್ತು ಚಿನ್ನವನ್ನು ಆಧಾರವಾಗಿಟ್ಟು ಆ ಬ್ಯಾಂಕ್‌ಗಳಿಂದ ತನ್ನ ಯುದ್ಧಕ್ಕೆ ಹಣ ಪಡೆಯುತ್ತಿದ್ದ. ಮೊದಲನೆ ವಿಶ್ವಯುದ್ಧದಲ್ಲಿ ಫ್ರೆಂಚ್ ಹಣವನ್ನೇ ಜರ್ಮನಿಗೆ ಅದರ ಫ್ರೆಂಚ್ ಮತ್ತು ವಿಶ್ವದ ಇತರ ದೇಶಗಳ ಮೇಲಿನ ಯುದ್ಧಗಳಿಗೆ ನೀಡಿತು. ಹಿಟ್ಲರ್‌ನ ನರಮೇಧದಲ್ಲಿ ಪ್ರಾಣಕಳೆದುಕೊಂಡ ಲಕ್ಷಾಂತರ ಯೆಹೂದಿಗಳು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿದ್ದ ಕೋಟ್ಯಾಂತರ ರೂಗಳ ಹಣದ ವಿವರಗಳನ್ನು ಆ ಬ್ಯಾಂಕ್‌ಗಳು ಇದುವರೆಗೂ ಹೊರಗೆಡವಿಲ್ಲ. ಸದ್ದಾಮ್ ಹುಸೇನ್‌ನಂತಹ ವಿಶ್ವದ ಹಲವಾರು ಸರ್ವಾಧಿಕಾರಿಗಳ ಲೂಟಿಯ ಹಣಗಳಿಗೆಲ್ಲ ಆ ಬ್ಯಾಂಕ್‌ಗಳು ಆಶ್ರಯ ನೀಡಿವೆ. ಒಸಾಮ ಬಿನ್ ಲಾಡೆನ್‌ನಂಥವರೂ ಸಹ ಅಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಮೂರನೇ ಜಗತ್ತಿನ ಭ್ರಷ್ಟ ರಾಜಕಾರಣಿಗಳ, ಸೇನೆಯ ಜನರಲ್‌ಗಳ ಪಾಪದ ಹಣದ ಬೊಕ್ಕಸ ಆ ಬ್ಯಾಂಕ್‌ಗಳಲ್ಲಿದೆ. ಗೋಪ್ಯತೆಯ ಹೆಸರಿನಲ್ಲಿ ಸ್ವಿಸ್ ಬ್ಯಾಂಕ್‌ಗಳು ಇಂತಹ ಜನರಿಂದ ತನ್ನ ಬೊಕ್ಕಸವನ್ನು ತುಂಬಿಕೊಂಡಿವೆ. ಸಕಾರಕ್ಕೆ ಮೋಸ ಮಾಡಿ ಕರ ಉಳಿಸುವವರಿಗೆ, ಮಾದಕವಸ್ತುಗಳ ಮಾರಾಟಗಾರರಿಗೆ, ಹವಾಲಾ ಹಣ ವರ್ಗಾವಣೆದಾರರೆಲ್ಲಾ ಈ ಬ್ಯಾಂಕ್‌ಗಳನ್ನು ಉಪಯೋಗಿಸುತ್ತಿದ್ದಾರೆ. ಇವುಗಳ ನಡುವೆ ಹಲವಾರು ಸರ್ಕಾರಗಳು, ಸರ್ಕಾರಿ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳೂ ಸಹ ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಹೂಡಿವೆ. ಹಾಗಾಗಿ ಅಲ್ಲಿನ ಎಲ್ಲ ಹಣಕ್ಕೂ ಪಾಪದ ಮಸಿ ಹತ್ತಿಲ್ಲ.
ಸುಮಾರು 500 ಸ್ವಿಸ್ ಬ್ಯಾಂಕ್‌ಗಳಲ್ಲಿರಬಹುದಾದ ಅಂದಾಜು ಹಣ ಎಷ್ಟಿರಬಹುದು?
ವರದಿಗಳ ಪ್ರಕಾರ ಆ ಬ್ಯಾಂಕ್‌ಗಳಲ್ಲಿನ ಹಣ ಸುಮಾರು 4 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳು (200 ಲಕ್ಷ ಕೋಟಿ ರೂಪಾಯಿಗಳು). ಅಂದರೆ ಅಮೆರಿಕದ ಒಟ್ಟು ಗೃಹ ಉತ್ಪನ್ನದ ಮೂರನೇ ಒಂದು ಭಾಗ (13 ಟ್ರಿಲಿಯನ್ ಅಮೆರಿಕನ್ ಡಾಲರ್) ಅಥವಾ ಭಾರತದ ಒಟ್ಟು ಗೃಹ ಉತ್ಪನ್ನದ 4.5ರಷ್ಟು (46 ಲಕ್ಷ ಕೋಟಿ ರೂಪಾಯಿಗಳು). ಸ್ವಿಟ್ಜರ್‌ಲ್ಯಾಂಡಿನ ಜನಸಂಖ್ಯೆ 75 ಲಕ್ಷಕ್ಕಿಂತ ಕಡಿಮೆಯಿದೆ ಅಂದರೆ ಭಾರತದ ಜನಸಂಖ್ಯೆಯ ಶೇ.1ಕ್ಕಿಂತ ಕಡಿಮೆ, ಆದರೆ ಅದರ ಒಟ್ಟು ಗೃಹ ಉತ್ಪನ್ನ 381 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು (ಭಾರತದ ಒಟ್ಟು ಗೃಹ ಉತ್ಪನ್ನದ ಮೂರನೇ ಒಂದು ಭಾಗ). ಸ್ವಿಟ್ಜರ್‌ಲ್ಯಾಂಡಿನ ಪ್ರಮುಖ ಆದಾಯ ಬ್ಯಾಂಕಿಂಗ್ ಉದ್ಯಮದಿಂದಲೇ ಬರುತ್ತದೆ.

ಸ್ವಿಸ್ ಬ್ಯಾಂಕ್‌ಗಳು ಪಾರದರ್ಶಕವಾಗುವಂತೆ ಇತರ ಅಭಿವೃದ್ಧಿ ಹೊಂದಿದ ದೇಶಗಳು ಏಕೆ ಒತ್ತಡ ತರುತ್ತಿಲ್ಲ?
ಮೊದಲ ವಿಶ್ವಯುದ್ಧ ಮುಗಿದಾಗಿನಿಂದ ಎಲ್ಲ ಅಭಿವೃದ್ಧಿಹೊಂದಿದ ದೇಶಗಳು ತೀವ್ರ ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಇತ್ತೀಚಿನ ಆರ್ಥಿಕ ಹಿಂಜರಿತದಿಂದಾಗಿ ಜಿ-20 ರಾಷ್ಟ್ರಗಳು ಮತ್ತು ಓ.ಸಿ.ಇ.ಡಿ. (ಸರ್ವ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿ ಸಂಸ್ಥೆ) ಸ್ವಿಸ್ ಬ್ಯಾಂಕ್‌ಗಳ ಹಾಗೂ ಇತರ ತೆರಿಗೆ ಕಳ್ಳರ ಆಶ್ರಯ ಸ್ಥಾನಗಳ ಮೇಲೆ ತೀವ್ರ ಒತ್ತಡ ತರುತ್ತಿವೆ. ಓ.ಸಿ.ಇ.ಡಿ. ೩೦ ಅಭಿವೃದ್ಧಿ ದೇಶಗಳನ್ನು ಶಾಶ್ವತ ಸದಸ್ಯರನ್ನಾಗಿ ಹೊಂದಿದೆ. ಭಾರತ ಮತ್ತು ಚೀನಾ ಈ ಸಂಸ್ಥೆಯ ಸದಸ್ಯರಾಗಿಲ್ಲ. ಓ.ಸಿ.ಇ.ಡಿ. ಅಭಿವೃದ್ಧಿ ಹೊಂದಿದ ಪ್ರಜಾಸತ್ತೆಗಳಲ್ಲಿ ಪಾರದರ್ಶಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ತರಲು ಶ್ರಮಿಸುತ್ತಿದೆ. ಅದು ಈಗಾಗಲೇ ಮಲೇಷಿಯಾ ಮತ್ತು ಪರಗ್ವೇಯಂತಹ ತೆರಿಗೆ ಕಳ್ಳರ ಆಶ್ರಯ ಸ್ಥಾನಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಸ್ವಿಟ್ಜರ್‌ಲ್ಯಾಂಡ್ ಈಗಾಗಲೇ ಪ್ರಸ್ತಾವಿತ ಕಪ್ಪುಪಟ್ಟಿಯಲ್ಲಿದೆ. ಹಾಗಾಗಿ ಸ್ವಿಟ್ಜರ್‌ಲ್ಯಾಂಡಿನ ಮೇಲೆ ಒತ್ತಡ ಹೆಚ್ಚುತ್ತಿದೆ ಹಾಗೂ ಅದು ತಾನು ಪಾರದರ್ಶಕವಾಗುವ ಇಚ್ಛೆ ಸಹ ವ್ಯಕ್ತಪಡಿಸುತ್ತಿದೆ, ಆದರೆ ಅದು ತನ್ನದೇ ದೇಶಗಳ ಸಂಕೀರ್ಣ ಕಾನೂನುಗಳ, ಗ್ರಾಹಕ ಒಪ್ಪಂದಗಳ, ಬಹಿರಂಗಗೊಳಿಸಿದಲ್ಲಿ ಗ್ರಾಹಕರು ಹೂಡಬಹುದಾದ ದಾವೆಗಳ ಆತಂಕದಲ್ಲಿ ಹಾಗೂ ಸ್ವಿಟ್ಜರ್‌ಲ್ಯಾಂಡಿನ ನಾಗರಿಕರ ಸಮ್ಮತಿಯ ಜಾಲದಲ್ಲಿ ಸಿಕ್ಕಿಬಿದ್ದಿದೆ. ಜಗತ್ತಿನ ಎಲ್ಲ ಪ್ರಮುಖ ಬ್ಯಾಂಕ್‌ಗಳು ಸ್ವಿಸ್ ಬ್ಯಾಂಕ್‌ಗಳೊಂದಿಗೆ ತಮ್ಮ ವಹಿವಾಟನ್ನು ನಿಲ್ಲಿಸಿದಲ್ಲಿ ಸ್ವಿಸ್ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಾರವು, ಆದರೆ ಇದು ನಡೆಯುವುದು ಸಾಧ್ಯವಿಲ್ಲ ಏಕೆಂದರೆ ಸ್ವಿಸ್ ಬ್ಯಾಂಕ್‌ಗಳು ಅಮೆರಿಕ, ಇಂಗ್ಲೆಂಡ್, ರಷಿಯಾ ಮತ್ತು ಯೂರೋಪ್‌ನಂತಹ ಪ್ರಬಲ ರಾಷ್ಟ್ರಗಳಲ್ಲಿ ಪ್ರಮುಖ ಬಂಡವಾಳ ಹೂಡಿಕೆ ಮಾಡಿದೆ. ಈ ಕ್ರಮದಿಂದ ಅವುಗಳ ಆರ್ಥಿಕತೆಯ ಮೇಲೆ ಪ್ರಭಾವ ಬೀರುವುದರಿಂದ ಆ ದೇಶಗಳು ಸಹ ಸಹಕರಿಸಲಾರವು. ಈ ಭೂಗತ ಬ್ಯಾಂಕಿಂಗ್ ವ್ಯವಸ್ಥೆ ಪಾರದರ್ಶಕವಾಗಲು ಹಲವಾರು ವರ್ಷಗಳೇ ಬೇಕಾಗಬಹುದು. ಅವು ತನ್ನ ಬ್ಯಾಂಕ್ ರಹಸ್ಯಗಳನ್ನು ತೆರೆದಿಟ್ಟರೂ ಅದು ಪ್ರಬಲ ದೇಶಗಳಿಗೆ ಮಾತ್ರವಾಗಿರುತ್ತದೆಯೇ ಹೊರತು ಭಾರತದಂತಹ ದೇಶಗಳಿಗಲ್ಲ. ಇಂತಹ ಸಂಕೀರ್ಣತೆಗಳ ನಡುವೆ ಭಾರತ ಸ್ವಿಸ್ ಬ್ಯಾಂಕುಗಳ ಮೇಲೆ ತನ್ನ ದೇಶದ ಠೇವಣಿದಾರರ ವಿವರಗಳನ್ನು ನೀಡುವಂತೆ ಒತ್ತಡ ತರುವುದು ಕಷ್ಟವಾಗುತ್ತದೆ. ಆದರೆ ಒಂದಲ್ಲ ಒಂದು ದಿನ ಭಾರತ ಸಹ ಅಮೆರಿಕದಂತಹ ಒಂದು ಪ್ರಬಲ ರಾಷ್ಟ್ರವಾಗಿ ಇತರ ಪ್ರಬಲ ರಾಷ್ಟ್ರಗಳೊಂದಿಗೆ ಸ್ವಿಸ್ ಬ್ಯಾಂಕ್‌ಗಳ ಮೇಲೆ ಒತ್ತಡ ತರಬಲ್ಲ ರಾಷ್ಟ್ರವಾಗಬಲ್ಲದು ಹಾಗೂ ಭ್ರಷ್ಟರನ್ನು ಬಯಲಿಗೆಳೆಯಬಹುದು.

ಯಾವುದಾದರೂ ದೇಶ ಇದುವರೆಗೆ ಸ್ವಿಸ್ ಬ್ಯಾಂಕ್‌ಗಳಿಂದ ಹಣ ವಾಪಸ್ ಪಡೆದಿದೆಯೆ?

ಸ್ವಿಸ್ ಬ್ಯಾಂಕ್ ಬಲವಂತದಿಂದ ಹಣವನ್ನು ವಾಪಸ್ಸು ನೀಡಿರುವುದು ಕೆಲವೇ ಸನ್ನಿವೇಶಗಳಲ್ಲಿ ಮಾತ್ರ:
1. ಎರಡನೇ ಮಹಾ ವಿಶ್ವಯುದ್ಧದ ನಂತರ ಅದು ಅಮೆರಿಕಕ್ಕೆ, ಫ್ರಾನ್ಸ್‌ಗೆ ಹಾಗೂ ಯು.ಕೆ.ಗೆ (ಅಲೈಡ್ ಸೇನೆಗೆ) ನಾಜಿ ಚಿನ್ನದ ವಿವಾದದಿಂದ ದೂರವಿರಲು ಒಟ್ಟು 65 ದಶಲಕ್ಷ ಡಾಲರ್‌ಗಳನ್ನು ಪಾವತಿಸಿತು.
2. ಎರಡನೇ ಮಹಾ ವಿಶ್ವಯುದ್ಧದ ಸಮಯದಲ್ಲಿ ನಾಜಿಗಳಿಗೆ ಸಹಾಯ ಮಾಡಲಾಗಿದೆ ಹಾಗೂ ನಾಜಿಗಳ ನರಮೇಧದಲ್ಲಿ ಹತರಾದ ಯೆಹೂದಿಗಳ ಖಾತೆಗಳಲ್ಲಿ ಹಣವನ್ನು ತಾನೇ ಉಳಿಸಿಕೊಂಡಿದೆ ಎಂಬ ಆರೋಪದಿಂದ ಮುಕ್ತವಾಗಲು ಸುಮಾರು 20 ದಶಲಕ್ಷ ಅಮೆರಿಕನ್ ಡಾಲರ್ ಹಣವನ್ನು ಯೆಹೂದಿ ಸಂಸ್ಥೆಗಳಿಗೆ ಪಾವತಿಸಿದೆ.
3. ಸೆಪ್ಟೆಂಬರ್ 9/11ರ ದಾಳಿಯ ನಂತರ ಅವು ಬಿನ್ ಲಾಡೆನ್‌ನ ಖಾತೆಗಳನ್ನು ಮುಟ್ಟುಗೋಲು ಮಾಡಿವೆ.
4.ಇತ್ತೀಚೆಗೆ ನ್ಯಾಯಾಲಯದ ಹೊರಗಿನ ಒಪ್ಪಂದದಂತೆ ಅದು ಅಮೆರಿಕದ ಕರ ವಿಭಾಗಕ್ಕೆ 780 ದಶಲಕ್ಷ ಡಾಲರ್ ಹಣವನ್ನು ಪಾವತಿಸಿದೆ.
ಈ ಮೇಲಿನ ಎಲ್ಲಾ ಉದಾಹರಣೆಗಳಲ್ಲಿ ಸ್ವಿಸ್ ಬ್ಯಾಂಕ್ ಯಾವುದೇ ವಿವರಗಳನ್ನು ಕೊಡದೆ ತನ್ನ ಗುಟ್ಟನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ಹಣವನ್ನು ಪಾವತಿಸಿದೆ.
ಉಪಸಂಹಾರ
ಸ್ವಿಸ್ ಬ್ಯಾಂಕ್‌ಗಳ ಈ ರಹಸ್ಯ ಸಂಕೇತಗಳ ಚರಿತ್ರೆಯನ್ನು ಗಮನಿಸಿದಲ್ಲಿ ಅವುಗಳಲ್ಲಿರುವ 70 ಲಕ್ಷ ಕೋಟಿ ರೂಗಳ ಭಾರತೀಯ ಹಣವನ್ನು ವಾಪಸ್ಸು ಪಡೆಯುವುದು ಸಾಧ್ಯವೆ? ಇಡೀ ಜಗತ್ತು ಪಾರದರ್ಶಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಯಸಿದಲ್ಲಿ ಹಾಗೂ ಸ್ವಿಸ್ ಬ್ಯಾಂಕ್ ಮತ್ತು ಆ ರೀತಿಯ ಸಂಸ್ಥೆಗಳನ್ನು ಬಹಿಷ್ಕರಿಸುವ ಒತ್ತಡ ತಂದಲ್ಲಿ ಆ ರೀತಿಯ ಅಕ್ರಮ ಹಣವನ್ನು ವಾಪಸ್ಸು ತರಬಹುದು. ಭಾರತದ 120 ಕೋಟಿ ಜನಸಂಖ್ಯೆಯಲ್ಲಿ ನನ್ನ ಅಂದಾಜಿನ ಪ್ರಕಾರ 30 ಲಕ್ಷ ಜನರು ತಲಾವಾರು 3 ಕೋಟಿ ರೂಗಳಷ್ಟು ಕಪ್ಪುಹಣವನ್ನು ಹೊಂದಿದ್ದಾರೆ. ಅಂದರೆ 90 ಲಕ್ಷ ಕೋಟಿ ರೂಗಳಷ್ಟಾಯಿತು ಹಾಗೂ ಇದು ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಭಾರತಿಯರ ಅಕ್ರಮ ಹಣಕ್ಕಿಂತ ಹೆಚ್ಚಾಗಿದೆ. ನಮ್ಮ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು (ನಿವೃತ್ತ ಹಾಗೂ ಸೇವೆಯಲ್ಲಿರುವವರು), ವ್ಯಾಪಾರಿಗಳು ಸುಲಭವಾಗಿ ಈ 30 ಲಕ್ಷ ಜನರ ಸಂಖ್ಯೆಯಡಿ ಬರುತ್ತಾರೆ. ಹಾಗಿರುವಾಗ ನಾವೇಕೆ ನಮ್ಮ ಹಿತ್ತಲಲ್ಲೇ ಇರುವ ‘ರಹಸ್ಯ ನಿಧಿ’ಯ ಬಗ್ಗೆ ಮಾತನಾಡುತ್ತಿಲ್ಲ? ನಮ್ಮಲ್ಲೇ ಹಲವಾರು ‘ಮಿನಿ ಸ್ವಿಸ್’ ಬ್ಯಾಂಕ್‌ಗಳಿವೆಯಲ್ಲಾ! ನಾವು ಇದನ್ನೇ ಸಂಗ್ರಹಿಸಿದಲ್ಲಿ ಖಂಡಿತವಾಗಿ ನಾವು ನಮ್ಮ ವಿದೇಶಿ ಸಾಲಗಳನ್ನು ಒಂದೇ ಕಂತಿನಲ್ಲಿ ತೀರಿಸಿ ಉಳಿದದ್ದನ್ನು ಹಳ್ಳಿಗಳಿಗೂ ಹಂಚಬಹುದು. 500 ಮತ್ತು 1000 ರೂಗಳ ನೋಟಿನ ಮೇಲೆ ಔಷಧಗಳ ಮೇಲಿನಂತೆ ‘ಅವಧಿ ಮುಕ್ತಾಯ’ (ಎಕ್ಸ್‌ಪೈರಿ ದಿನಾಂಕ) ದಿನಾಂಕವನ್ನು ಮುದ್ರಿಸಬೇಕು. ಜನರು ಅವುಗಳನ್ನು ನವೀಕರಿಸಿಕೊಳ್ಳಲು ಬಂದಾಗ ಅದರ ಮೂಲ ಹಾಗೂ ತೆರಿಗೆ ಪಾವತಿಸಿದ ವಿವರಗಳನ್ನು ಪಡೆಯುವುದು ಸುಲಭವಾಗುತ್ತದೆ. ಇದೊಂದು ಸಣ್ಣ ಉದಾಹರಣೆಯಷ್ಟೆ. ಈ ರೀತಿಯ ಹತ್ತು ಹಲವಾರು ಉಪಾಯಗಳನ್ನು ಭಾರತದ ಬೌದ್ಧಿಕವರ್ಗ ಹಾಗೂ ದಾರ್ಶನಿಕರು ಶೋಧಿಸಬೇಕಾಗುತ್ತದೆ. ಇಂದಿನ ತುರ್ತು ಅವಶ್ಯಕತೆ ಅಂತಹ ದಾರ್ಶನಿಕರು ಸಾರ್ವಜನಿಕ ಕಚೇರಿಗಳನ್ನು ಆಕ್ರಮಿಸಿಕೊಳ್ಳಬೇಕು.

ಚೀನಾದಿಂದ ನಾವು ಬ್ರಹ್ಮಪುತ್ರ ನದಿಯನ್ನು ಉಳಿಸಿಕೊಳ್ಳಬಹುದೆ?






ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಅಮೆರಿಕಾವನ್ನು ಕೆಳಕ್ಕಿಳಿಸಿ ಆ ಸ್ಥಾನವನ್ನು ಆಕ್ರಮಿಸಲು ಚೀನಾ ಸಜ್ಜುಗೊಳ್ಳುತ್ತಿದೆ. ಶೇ.14.5ಕ್ಕಿಂತ ಹೆಚ್ಚು ಬೆಳವಣಿಗೆಯ ಗತಿಯನ್ನು ಹೊಂದಿರುವ ಚೀನಾ ತನ್ನ ನಿರಂತರವಾಗಿ ಬೆಳೆಯುತ್ತಿರುವ ಆರ್ಥಿಕತೆಯಿಂದಾಗಿ ಭವಿಷ್ಯದ ನೀರು ಮತ್ತು ವಿದ್ಯುತ್ ಸಮಸ್ಯೆಗಳನ್ನು ನಿಭಾಯಿಸುವತ್ತ ತನ್ನ ದೃಷ್ಟಿ ಹರಿಸಿದೆ. ಯಾವುದೇ ದೇಶದ ಅಭಿವೃದ್ಧಿಗೆ ಆಧಾರ ಸ್ಥಂಭಗಳಾಗಿರುವ ಕೈಗಾರಿಕೆ ಮತ್ತು ಕೃಷಿಗೆ ನೀರು ಮತ್ತು ವಿದ್ಯುತ್ ಅತ್ಯವಶ್ಯಕವಾದುವು. ನೀರನ್ನು ಸಮರ್ಥವಾಗಿ ಬಳಸಿಕೊಳ್ಳದ ಆರೋಪವನ್ನು ವಿಶ್ವಬ್ಯಾಂಕ್ ಚೀನಾ ಮತ್ತು ಭಾರತ ಎರಡರ ಮೇಲೂ ಹೊರಿಸಿದೆ. ಚೀನಾದ ಉತ್ತರ ಭಾಗಗಗಳಲ್ಲಿ ನೀರಿನ ತೀವ್ರ ಕೊರತೆಯಿದ್ದು ಬೀಜಿಂಗ್ ಮತ್ತು ಶಾಂಘಾಯ್ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ 2000 ಅಡಿಗಳಿಗಿಂತ ಕೆಳಗೆ ಹೋಗಿದೆ. ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ಹಳದಿ ನದಿಯಲ್ಲಿ ವರ್ಷಗಳು ಕಳೆದಂತೆ ನೀರು ಕಡಿಮೆಯಾಗುತ್ತಿದೆ. ಉತ್ತರ ಚೀನಾದ ಜನಸಂಖ್ಯೆ 550 ದಶಲಕ್ಷಗಳಷ್ಟಿದ್ದು ಚೀನಾದ ಕೃಷಿಯೋಗ್ಯ ಭೂಮಿಯ 2/3ರಷ್ಟು ಭಾಗವನ್ನು ಹೊಂದಿದ್ದರೂ ಸಹ ಲಭ್ಯ ಶುದ್ಧ ನೀರಿನ 1/5ರಷ್ಟು ಭಾಗವನ್ನು ಮಾತ್ರ ಹೊಂದಿದೆ. ಆದರೆ 700 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಚೀನಾ ತಾನು ಪಡೆಯುವ ಹೆಚ್ಚು ಮಳೆಯಿಂದಾಗಿ ಹಾಗೂ ಯಾಂಗ್ಜೀ ನದಿಯಿಂದಾಗಿ ಲಭ್ಯ ಶುದ್ಧ ನೀರಿನ 4/5ರಷ್ಟು ಭಾಗವನ್ನು ಹೊಂದಿದೆ. ಕೈಗಾರಿಕೆ ಮತ್ತು ಕೃಷಿಯಲ್ಲಿ ಮುಂಚೂಣಿಯಲ್ಲಿರುವ ಉತ್ತರ ಚೀನಾ ಅದೇ ಬೆಳವಣಿಗೆಯನ್ನು ಕಾಯ್ದಿಟ್ಟುಕೊಳ್ಳಲು ನೀರಿನ ಕೊರತೆಯಿಂದ ಪರದಾಡುತ್ತಿದೆ. ಹಾಗಾಗಿ ಯಾಂಗ್ಜಿ ಮತ್ತು ಹಳದಿ ನದಿಗಳನ್ನು ಪಶ್ಚಿಮ, ಪೂರ್ವ ಹಾಗೂ ಮಧ್ಯದ ಕಾಲುವೆಗಳಿಂದ ಕೂಡಿಸುವ ಒಂದು ಬೃಹತ್ ಯೋಜನೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ.

(ವಿಶ್ವದ ಅತಿ ದೊಡ್ಡ ಅಣೆಕಟ್ಟು- ದಕ್ಷಿಣ ಚೀನಾದಲ್ಲಿನ 3 ಗಾರ್ಜಸ್ ಅಣೆಕಟ್ಟು)

ಚೀನಾದ ಬೃಹತ್ ಆಲೋಚನೆಗಳು

ಚೀನಾದ ಆಲೋಚನೆಗಳು ಯಾವಾಗಲೂ ಬೃಹತ್ ಗಾತ್ರದ್ದಾಗಿರುತ್ತವೆ. ಕ್ರಿ.ಪೂ. 5ನೇ ಶತಮಾನದಿಂದ 15ನೇ ಶತಮಾನದವರೆಗೆ ನಿರ್ಮಿಸಿರುವ ಚೀನಾದ ಮಹಾ ಗೋಡೆ ಸುಮಾರು 5000 ಮೈಲಿಗಳಷ್ಟು ಉದ್ದವಿದೆ. ಚೀನಾವನ್ನು ಆಳಿದ ಪ್ರತಿಯೊಬ್ಬ ಸಾಮ್ರಾಟನೂ ತನ್ನ ಹಿಂದಿನ ಸಾಮ್ರಾಟನಿಗಿಂತ ಬೃಹತ್ ಆಗಿರುವುದನ್ನು ಸಾಧಿಸಲು ಪ್ರಯತ್ನಿಸಿದ್ದಾನೆ. ಚೀನಾದ ಹಿಂದಿನ ನಾಯಕ ಲೆ ಪೆಂಗ್ ದಕ್ಷಿಣದಲ್ಲಿ ಯಾಂಗ್ಜಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಅಣೆಕಟ್ಟಾದ 3-ಗಾರ್ಜಸ್ ಅಣೆಕಟ್ಟಿಗೆ ಕಾರಣರಾಗಿದ್ದಾರೆ. ಅಲ್ಲಿನ ಜಲ ವಿದ್ಯುತ್ ಸ್ಥಾವರದಲ್ಲಿ 18ರಿಂದ 20,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈಗಿನ ಅಧ್ಯಕ್ಷರಾಗಿರುವ ಹು ಜಿಂಟಾವ್ ಮತ್ತು ಪ್ರಧಾನಿ ವೆನ್ ಜಿಯಾಬೊ ಇಬ್ಬರೂ ಲೆ ಪೆಂಗ್ ರೀತಿಯಲ್ಲಿಯೇ ಜಲ ವಿದ್ಯುತ್ ಇಂಜಿನಿಯರ್‌ಗಳಾಗಿದ್ದು ದಕ್ಷಿಣದ ಯಾಂಗ್ಜಿ ನದಿ ಮತ್ತು ಉತ್ತರದ ಹಳದಿ ನದಿಗಳ ಜೋಡಣೆಯ 400,000 ಕೋಟಿಗಳ ವೆಚ್ಚದ ಪ್ರಾಯೋಜನೆಗೆ ಕೈ ಹಾಕಿದ್ದಾರೆ. ಪ್ರಾಯೋಜನೆಯ ಬಹುಪಾಲು ಕಾರ್ಯವೆಲ್ಲಾ ಮಧ್ಯ ಮತ್ತು ಪೂರ್ವದ ಹಾದಿಗಳಲ್ಲಿ ಮಾಡಲಾಗುತ್ತಿದ್ದು ವಿವಾದಾಸ್ಪದ ಪಶ್ಚಿಮ ಹಾದಿಯ ಕಾರ್ಯ ಇನ್ನೂ ಪ್ರಾರಂಭವಾಗಬೇಕಾಗಿದೆ.

(ಮೂರು ಕೆಂಪನೆ ಸಾಲುಗಳು ಪೂರ್ವದ, ಮಧ್ಯದ ಮತ್ತು ಪಶ್ಚಿಮದ ಹಾದಿಗಳನ್ನು ತೋರಿಸುತ್ತವೆ. ಪಶ್ಚಿಮದ ಚುಕ್ಕಿಯ ಸಾಲು ಬ್ರಹ್ಮಪುತ್ರ ಮತ್ತು ಹಳದಿ ನದಿಯನ್ನು ಜೋಡಿಸುವ ಎರಡನೇ ಹಂತದ ಹಾದಿಯಾಗಿದೆ)

(ಬ್ರಹ್ಮಪುತ್ರಾದ ಮಹಾನ್ ತಿರುವು. ನದಿಯ ತಿರುವಿಗಾಗಿ ಅಣೆಕಟ್ಟು ನಿರ್ಮಿಸಲು ಪ್ರಸ್ತಾವಿತ ಸ್ಥಳ)

ನದಿ ಜೋಡಣೆಯ ಪಶ್ಚಿಮದ ಹಾದಿ ಕಡಿದಾದ ಬೆಟ್ಟಗುಡ್ಡಗಳ ಪ್ರದೇಶವಾಗಿದೆ. ಅಲ್ಲಿ ಕೆಲವೆಡೆ ಸಮುದ್ರದ ಮಟ್ಟಕ್ಕಿಂತ 4000 ಅಡಿಗಳಷ್ಟು ಎತ್ತರ ಸುರಂಗಗಳನ್ನು ಕೊರೆಯಬೇಕಾಗುತ್ತದೆ. ಅದರಲ್ಲಿ ಎರಡು ಹಂತಗಳಿವೆ. ಮೊದಲನೆಯ ಹಂತದಲ್ಲಿ ಯಾಂಗ್ಜಿಯನ್ನು ಬಯಾಂಕ ಪರ್ವತಗಳ ಮೂಲಕ ಹಳದಿ ನದಿಗೆ ಜೋಡಿಸಲಾಗುತ್ತದೆ. ಸುಮಾರು 125000ಕೋಟಿಗಳಷ್ಟು ಖರ್ಚಾಗಬಹುದಾದ ಎರಡನೇ ಹಂತದಲ್ಲಿ ಬ್ರಹ್ಮಪುತ್ರಾ ನದಿಯನ್ನು ಒಂದನೇ ಹಂತದ ಸುರಂಗದ ಮೂಲಕ ಹಳದಿ ನದಿಗೆ ಸೇರಿಸುವುದಾಗಿದೆ. ಮೊದಲನೇ ಹಂತದಲ್ಲಿ ಭೂಕಂಪಗಳ ಸಾಧ್ಯತೆಗಳುಳ್ಳ ಬಯಾಂಕ ಪರ್ವತದಲ್ಲಿ ಸುರಂಗಗಳನ್ನು ತೋಡಬೇಕಾಗಿರುವುದರಿಂದ ಚೀನಿಯರು ಅಣುವಿಸ್ಫೋಟಗಳನ್ನು ಬಳಸಬಹುದೆಂದು ತಜ್ಞರು ಹೇಳುತ್ತಾರೆ. ಈಗಿನ ಚೀನಿ ಸರ್ಕಾರ ವಿವಾದಾಸ್ಪದ ಬ್ರಹ್ಮಪುತ್ರ ನದಿಯನ್ನು ಆಗ್ನೇಯ ದಿಕ್ಕಿನಲ್ಲಿನ ಗೋಬಿ ಮುರುಭೂಮಿಗೂ ಹರಿಸುವ ಆಲೋಚನೆಯನ್ನು ಹೊಂದಿದೆ. ಬ್ರಹ್ಮಪುತ್ರ ನದಿಯ ತಿರುವಿನಲ್ಲಿ ಅಣೆಕಟ್ಟೊಂದನ್ನು ಕಟ್ಟಿ ಅಲ್ಲಿ ದಕ್ಷಿಣ ಚೀನಾದಲ್ಲಿನ 3-ಗಾರ್ಜಸ್ ಅಣೆಕಟ್ಟಿಗಿಂತ ಹೆಚ್ಚು, ಅಂದರೆ 40,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಆಲೋಚನೆ ಸಹ ಹೊಂದಿದೆ. ಚೀನಿಯರೇನಾದರೂ ಪಶ್ಚಿಮದ ಈ ಎರಡೂ ಹಂತಗಳನ್ನು ಸಂಪೂರ್ಣಗೊಳಿಸಿದರೆ ಭಾರತ, ಬಾಂಗ್ಲಾದೇಶ, ಮಯನ್ಮಾರ್ ಮತ್ತು ವಿಯೆಟ್ನಾಂ ದೇಶಗಳು ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಚೀನಿಯರ ಈ ಆಲೋಚನೆ ಈಗಾಗಲೇ ಈ ದೇಶಗಳಲ್ಲಿ ನಡುಕ ಹುಟ್ಟಿಸಿವೆ. ವಿಯೆಟ್ನಾಂ ಈಗಾಗಲೇ ಈ ಪಶ್ಚಿಮದ ಕಾಲುವೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ಬ್ರಹ್ಮಪುತ್ರಾ ನದಿಯನ್ನು ತಿರುಗಿಸುವಿಕೆಯ ಬಗೆಗೆ ಹೆಚ್ಚಿನ ಮಾಹಿತಿ ಕೇಳಿದೆ.

ಚೀನಾವನ್ನು ನಂಬಬಹುದೆ?

ವಿದೇಶಿ ಕಾರ್ಯದರ್ಶಿ ನಿರುಪಮಾ ರಾವ್‌ರವರು 2009ರ ನವೆಂಬರ್ 9ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ಕಟ್ಟುವ ಯೋಜನೆ ತನಗಿಲ್ಲವೆಂದು ಚೀನಾ ನಿರಂತರವಾಗಿ ಹೇಳುತ್ತಿದೆ ಎಂದರು. ನಮ್ಮ ಪ್ರಧಾನಿಯ ಪತ್ರಕ್ಕೆ ಉತ್ತರವಾಗಿ ಸಹ ಚೀನಾ ಅದನ್ನೇ ಹೇಳಿದೆ. ಅದಾದ ಒಂದು ವಾರದ ನಂತರ ನಿರ್ಮಾಣ ಕಾರ್ಯದ ಉಪಗ್ರಹ ಚಿತ್ರಗಳನ್ನು ಎನ್.ಆರ್.ಎಸ್.ಎ. ಭಾರತ ಸರ್ಕಾರಕ್ಕೆ ನೀಡಿದೆ. ಆ ಚಿತ್ರಗಳಲ್ಲಿ ಬ್ರಹ್ಮಪುತ್ರಾದ ಮಹಾನ್ ತಿರುವಿಗೆ ಹಾದಿಮಾಡಿಕೊಡುವ ಲಾಸಾ- ಮೆಡೋಗ್ ಹೆದ್ದಾರಿಯ ನಿರ್ಮಾಣದ ಚಿತ್ರಗಳೂ ಇವೆ. ಹತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಡೆಂಗ್ ಪಟ್ಟಣಕ್ಕೆ 1000 ಕೋಟಿಗಳ ವೆಚ್ಚದ ನಿರ್ಮಾಣದ ಎಲ್ಲರಲ್ಲೂ ಸಂಶಯ ಮೂಡಿಸುತ್ತಿದೆ. ಏಪ್ರಿಲ್ 2009ರಲ್ಲಿ ಗೆಜೂಬಾ ಕಾರ್ಪೊರೇಶನ್ ಬ್ರಹ್ಮಪುತ್ರಾ ನದಿಗೆ ಮಧ್ಯದಲ್ಲಿ ಜಾಂಗ್ಮೂ ಅಣೆಕಟ್ಟು (ಪ್ರಸ್ತಾವಿತ 5 ಅಣೆಕಟ್ಟುಗಳಲ್ಲಿ ಒಂದು) ಕಟ್ಟಲು ಟೆಂಡರ್ ಪಡೆದುಕೊಂಡಿದೆ (ಈ ಮಾಹಿತಿಯು ಆ ಕಂಪೆನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ).


(ಕೆಂಪು ಸಾಲು ಬ್ರಹ್ಮಪುತ್ರಾ ನದಿಯನ್ನು ಹಳದಿ ನದಿಗೆ ಬಯಾಂಕ ಪರ್ವತಗಳ ಮೂಲಕ ಜೋಡಿಸುವುದನ್ನು ತೋರಿಸುತ್ತದೆ)

ಬ್ರಹ್ಮಪುತ್ರ ನದಿಯೇ ಏಕೆ?
ಯಾರ‍್ಲಾಂಗ್ ತ್ಸಾಂಗ್ಪೊ ಅಥವಾ ಬ್ರಹ್ಮಪುತ್ರಾ ನದಿ ಟಿಬೆಟನ್ ಪ್ರಸ್ಥಭೂಮಿಯಲ್ಲಿದ್ದು ವಿಶ್ವದ ಅತಿ ದೊಡ್ಡ ಮತ್ತು ಅತಿ ಎತ್ತರದ ನದಿಯಾಗಿದೆ.

ಅದು ಕೈಲಾಸ ಪರ್ವತದಲ್ಲಿ, ಸಮುದ್ರ ಮಟ್ಟಕ್ಕಿಂತ 4000 ಅಡಿ ಎತ್ತರದಲ್ಲಿ ಹುಟ್ಟಿ ಟಿಬೆಟ್ (ಚೀನಾ)ನಲ್ಲಿ 1800 ಕಿ.ಮೀ.ಗಳಷ್ಟು ಹರಿದು ದಕ್ಷಿಣಕ್ಕೆ ಸುಮಾರು 300 ಕಿ.ಮೀ.ಗಳಷ್ಟು ಉದ್ದದ ತಿರುವಿನಲ್ಲಿ ತಿರುಗಿ ಭಾರತದಲ್ಲಿನ ಅಸ್ಸಾಂ ಬಯಲು ಪ್ರದೇಶವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಅದು ಅರುಣಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮೂಲಕ ಗಂಗಾನದಿಯನ್ನು ಸೇರಿ ಬಾಂಗ್ಲಾದೇಶದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈ ಮೇಲಿನ ದೇಶಗಳಲ್ಲಿ ನೀರಾವರಿಗೆ ನೀರನ್ನು ಒದಗಿಸಿದ ನಂತರ ಈ ನದಿಯು ಬಂಗಾಳ ಕೊಲ್ಲಿಯ ಮುಖಜದಲ್ಲಿ ಪ್ರತಿ ಸೆಕೆಂಡಿಗೆ 19,830 ಘನ ಮೀ. ಅಥವಾ ವಾರ್ಷಿಕ 23,000 ಟಿ.ಎಂ.ಸಿ. ನೀರನ್ನು ಹೊರಸೂಸುತ್ತದೆ. ಕೇವಲ 1 ಟಿ.ಎಂ.ಸಿ. ನೀರು 7000 ಹೆಕ್ಟೇರ್ ಕೃಷಿಭೂಮಿಗೆ ನೀರಾವರಿ ನೀರನ್ನು ಒದಗಿಸಬಲ್ಲದು. ನದಿಯ ಪ್ರಾಕೃತಿಕ ಹರಿವನ್ನೇ ಬಳಸಿಕೊಂಡು 150,000 ಮೆಗಾ ವ್ಯಾಟ್‌ಗಿಂತ ಹೆಚ್ಚು ವಿದ್ಯುತ್ತನ್ನು ಉತ್ಪಾದಿಸಬಹುದು. ಬ್ರಹ್ಮಪುತ್ರಾದ ಈ ಮಹಾ ತಿರುವಿನಲ್ಲಿಯೇ ಚೀನಿಯರು ಅಣೆಕಟ್ಟನ್ನು ಕಟ್ಟಿ ವಿದ್ಯುತ್ ಉತ್ಪಾದಿಸಲು ಯೋಜಿಸುತ್ತಿರುವುದು. ಯು- ತಿರುವಿನ ಪ್ರವೇಶ ಸ್ಥಾನದಿಂದ ಯು- ತಿರುವಿನ ಕೊನೆಯ ಸ್ಥಾನಕ್ಕೆ 2500 ಮೀಟರುಗಳ ಎತ್ತರದ ಅಂತರವಿದೆ ಆದರೆ ಆ ತಿರುವಿನ ಉದ್ದ 300 ಕಿ.ಮೀ.ಗಳಷ್ಟಿದೆ. ಆದುದರಿಂದ ಅವರು ಹಿಮಾಲಯದ ಪರ್ವತದ ಮೂಲಕ ಸುರಂಗವೊಂದನ್ನು ಕೊರೆದು ತಿರುವಿನ ಪ್ರವೇಶದಿಂದ ಹೊರ ಹರಿಯುವ ಪ್ರವೇಶಕ್ಕೆ ನೇರ ಸಂಪರ್ಕ ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಇದರಿಂದ 300 ಕಿ.ಮೀ. ಉದ್ದ ಕೇವಲ 15 ಕಿ.ಮೀ.ಗಳಷ್ಟಾಗುತ್ತದೆ ಆದರೆ ಎತ್ತರದ ಅಂತರ 2500 ಮೀ.ಗಳಷ್ಟು ಇದ್ದೇ ಇರುತ್ತದೆ. ಹಾಗಾಗಿ ನೀರು ಅತ್ಯಂತ ರಭಸವಾಗಿ ಹರಿದು 40,000 ಮೆ.ವ್ಯಾ. ವಿದ್ಯುತ್ ಉತ್ಪಾದಿಸಬಹುದಾಗಿದೆ. ಇಲ್ಲಿ ಉತ್ಪಾದಿತವಾಗುವ ಕೊಂಚ ವಿದ್ಯುತ್ತನ್ನು ಆ ಪರ್ವತಗಳಿಂದ ನೀರನ್ನು ಆಗ್ನೇಯ ಗೋಬಿ ಮರುಭೂಮಿಗೆ ಪಂಪ್ ಮಾಡಲು ಬಳಸಲಾಗುತ್ತದೆ. ಬ್ರಹ್ಮಪುತ್ರಾ ನದಿಯು ಟಿಬೆಟ್(ಚೀನಾ)ನಲ್ಲಿ ಹುಟ್ಟಿ ಅದರ ಮೂಲಕವೇ 1700 ಕಿ.ಮೀ. ಹರಿದು ಬಂದರೂ ಚಾರಿತ್ರಿಕವಾಗಿ ಅದು ಭಾರತ ಮತ್ತು ಬಾಂಗ್ಲಾದೇಶಕ್ಕೆ ಮಾತ್ರ ನೀರುಣಿಸುತ್ತಿತ್ತು. ಅದು ಬೆಟ್ಟಗುಡ್ಡಗಳ ಪ್ರದೇಶವಾಗಿದ್ದುದರಿಂದ ಹಾಗೂ ಅದು ದುಂದುವೆಚ್ಚದ ಕಾರ್ಯವಾಗಿದ್ದುದರಿಂದ ಚೀನಾ ಆ ನೀರನ್ನು ತಡೆದು ಬಳಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಆದರೆ ಈಗ ಚೀನಾ ಈಗ ಸಾಕಷ್ಟು ಸಿರಿವಂತ ದೇಶವಾಗಿರುವುದರಿಂದ ಈಗ ಬೃಹತ್ ಯೋಜನೆಗಳಿಗೆ ಕೈ ಹಾಕುವ ಸಾಮರ್ಥ್ಯ ಅದಕ್ಕಿದೆ.
ಚೀನಾ ಮುಂದಾಲೋಚನೆಯಲ್ಲಿ ಮುಂದು
ಚೀನಾದವರು ಯಾವುದೇ ಪ್ರಾಯೋಜನೆಯನ್ನು ಜಾರಿಗೆ ತರುವ ಮೊದಲು ಅದನ್ನು ಎಲ್ಲ ರೀತಿಯಿಂದಲೂ ಅಧ್ಯಯನ ಮಾಡುತ್ತಾರೆ. ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೂ ಭವಿಷ್ಯದ ಪ್ರಾಯೋಜನೆಗಳ ಅರಿವಿರುತ್ತದೆ. ಯಾಂಗ್ಜಿ ಮತ್ತು ಉತ್ತರದಲ್ಲಿನ ಹಳದಿ ನದಿಯ ಜೋಡಣೆಗಳ ಬಗ್ಗೆ ಮಾವೋ ತ್ಸೆತುಂಗ್ ಐವತ್ತು ವರ್ಷಗಳ ಹಿಂದೆಯೇ ಆಲೋಚಿಸಿದ್ದರು. ಅಂತಹ ಪ್ರಾಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲು ಅವರು ದಶಕಗಳ ಸಂಶೋಧನೆ ಮತ್ತು ಯೋಜನೆಯನ್ನು ಮಾಡಿದ್ದಾರೆ. ಚೀನಾದಲ್ಲಿ ಒಂದು ಆಡು ಮಾತಿದೆ: ‘ಪ್ರಾಯೋಜನೆಯೊಂದನ್ನು ಯೋಜನಾ ಕೋಣೆಗೆ ತರುವುದು ಕಷ್ಟ, ಆದರೆ ಅಲ್ಲಿಗೆ ಬಂದಲ್ಲಿ ಅದನ್ನು ಏನೇ ಆದರೂ ಅನುಷ್ಠಾನಕ್ಕೆ ತರಲಾಗುತ್ತದೆ’. ಟಿಬೆಟ್ ಬಂಜರು ಭೂಮಿಯಾದರೂ ಚೀನಾಗೆ ಅದು ಏಕೆ ಬೇಕಾಯಿತು? ಏಕೆಂದರೆ ಟಿಬೆಟನ್ ಪ್ರಸ್ಥಭೂಮಿ ದಕ್ಷಿಣ ಏಷಿಯಾದ ಹತ್ತು ಪ್ರಮುಖ ನದಿಗಳ ಉಗಮಸ್ಥಾನವಾಗಿದೆ ಹಾಗೂ ಅದು ಜಗತ್ತಿನ ಅತ್ಯಮೂಲ್ಯ ನೀರಿನ ಸಂಗ್ರಹಾಗಾರವಾಗಿದೆ. ಅಷ್ಟಲ್ಲದೆ ಅಲ್ಲಿ ಗಣಿಗಾರಿಕೆಗೂ ಅವಕಾಶಗಳಿವೆ. ಅದರಿಂದಾಗಿಯೇ ಟಿಬೆಟ್‌ನಿಂದ ಚೀನಾಕ್ಕೆ ಜಗತ್ತಿನ ಅತ್ಯಂತ ಉದ್ದ ವಿದ್ಯುತ್ ರೈಲ್ವೇ ಜಾಲವನ್ನು ನಿರ್ಮಿಸಲು ಮುಂದಾಗಿದೆ. ಈ ರೈಲ್ವೇ ಸಂಪರ್ಕ ಜಾಲಕ್ಕೆ ಹಾಗೂ ಗಣಿಗಾರಿಕೆಗಷ್ಟೇ ಅಲ್ಲ ಚೀನಾದಲ್ಲಿನ ಕೈಗಾರಿಕೆಗಳಿಗೂ ಸಾಕಷ್ಟು ವಿದ್ಯುತ್ ಬೇಕಾಗಿದೆ. ಬ್ರಹ್ಮಪುತ್ರಾ ಅಣೆಕಟ್ಟಿನಿಂದ ಪಶ್ಚಿಮ ಚೀನಾಕ್ಕೆ ನೀರನ್ನು ಪಂಪ್ ಮಾಡಲು ಸಹ ವಿದ್ಯುತ್ ಬೇಕಾಗಿದೆ. ಆಗ್ನೇಯ ಚೀನಾದಲ್ಲಿ ಮರುಭೂಮಿ ವಿಸ್ತರಣೆಯಿಂದಾಗಿ ಚೀನಾ ಪ್ರತಿ ವರ್ಷ 4 ದಶಲಕ್ಷ ಎಕರೆ ಭೂಮಿಯನ್ನು ಕಳೆದುಕೊಳ್ಳುತ್ತಿದೆ. ಆ ಪ್ರದೇಶಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಆ ಕಾರಣಗಳಿಂದಾಗಿಯೇ ಚೀನಾ ಇಂದು ಬ್ರಹ್ಮಪುತ್ರಾ ನದಿಯ ನೀರಿಗೆ ಕೈಹಾಕಲು ಮುಂದಾಗುತ್ತಿದೆ. ಇತರ ದೇಶಗಳ ತಜ್ಞರು ಅಭಿಪ್ರಾಯದಂತೆ ಟಿಬೆಟ್ ಪ್ರಸ್ಥಭೂಮಿಯಿಂದ ಪಶ್ಚಿಮ ಚೀನಾಕ್ಕೆ ನೀರನ್ನು ಹರಿಸಲು ಹಿಮಾಲಯದ ಪರ್ವತಗಳ ಮೂಲಕ ಸುರಂಗ ಕೊರೆಯಬೇಕಾಗಿದ್ದಲ್ಲಿ ಅದು ಅಣುಸ್ಫೋಟಕಗಳನ್ನು ಬಳಸದೆ ಕೊರೆಯಲು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ಶಾಂತಿಯುತ ಬಳಕೆಗಾಗಿ ಅಣುವಿಸ್ಫೋಟಕ್ಕಾಗಿ ಪ್ರಸ್ತಾವನೆ ಮಾಡುವವರೆಗೆ ಚೀನಾ ಸಿ.ಟಿ.ಬಿ.ಟಿ.ಗೆ ಸಹಿಮಾಡಲಿಲ್ಲ.

ಈ ಪ್ರಾಯೋಜನೆಯಿಂದಾಗಿ ಭಾರತ ಮತ್ತು ಬಾಂಗ್ಲಾದೇಶದ ಮೇಲಾಗುವ ಪರಿಣಾಮಗಳೇನು?

ಯುರೇಶಿಯನ್ (ಚೀನಾದ) ಮತ್ತು ಇಂಡಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಘರ್ಷಣೆಯಿಂದಾಗಿ ಬ್ರಹ್ಮಪುತ್ರ ಕಣಿವೆ ಮತ್ತು ಅದರ ಸುತ್ತಮುತ್ತಲ ಪರ್ವತ ಪ್ರದೇಶಗಳು ಭೂಕಂಪನ ಸೂಕ್ಷ್ಮ ಹಾಗೂ ಅಸ್ಥಿರ ಪ್ರದೇಶಗಳಾಗಿವೆ. ಅಲ್ಲಿ ನಡೆದ 1897ರ ಹಾಗೂ 1950ರ ಭೂಕಂಪನಗಳು 8.7 ರಿಕ್ಟರ್ ಸ್ಕೇಲ್‌ನಷ್ಟಿದ್ದು ದಾಖಲಿತ ಚರಿತ್ರೆಯಲ್ಲಿಯೇ ಅತಿ ತೀವ್ರ ಭೂಕಂಪನಗಳಾಗಿವೆ. ಈ ಭೂಕಂಪನಗಳು ತೀವ್ರ ಭೂ ಹಾಗೂ ಶಿಲಾ ಕುಸಿತಗಳನ್ನು ಉಂಟುಮಾಡಿತಲ್ಲದೆ ಕಣಿವೆಗಳಲ್ಲಿ ಬಿರುಕುಗಳನ್ನುಂಟುಮಾಡಿ ಹಲವಾರು ಉಪನದಿಗಳ ಹರಿವಿನ ದಿಕ್ಕನ್ನೇ ಬದಲಾಯಿಸಿತು. ಈ ದೃಷ್ಟಿಯಿಂದಾಗಿ ಪರ್ವತಗಳಲ್ಲಿ ಸುರಂಗಗಳನ್ನು ಕೊರೆಯಲು ಅಣುವಿಸ್ಫೋಟಗಳನ್ನು ಬಳಸುವುದು ಅತ್ಯಂತ ಆಘಾತಕಾರಿಯಾದುದು. ಇದರಿಂದಾಗಿ ಉಂಟಾಗಬಹುದಾದ ಭೂಕುಸಿತದಿಂದಾಗಿ ಪ್ರವಾಹಗಳುಂಟಾಗಿ ಭಾರತದ ಮೂರು ರಾಜ್ಯಗಳು ಹಾಗೂ ಬಾಂಗ್ಲಾದೇಶ ಸಂಪೂರ್ಣವಾಗಿ ನಾಮಾವಶೇಷವಾಗುವ ಅಪಾಯವಿದೆಯೆಂದು ತಜ್ಞರು ಹೇಳುತ್ತಾರೆ.
ಚೀನಿಯರು ಈ ಪ್ರಾಯೋಜನೆಯನ್ನು ಕೈಗೊಂಡಿದ್ದೇ ಆದಲ್ಲಿ ಅವರು ಲಭ್ಯವಿರುವ ಸರಾಸರಿ ವಾರ್ಷಿಕ 70 ಬಿಲಿಯನ್ ಘನ ಮೀಟರ್ ನೀರಿನಲ್ಲಿ 40 ಬಿಲಿಯನ್ ಘನ ಮೀಟರುಗಳಷ್ಟನ್ನು ತಮಗೇ ಬಳಸಿಕೊಳ್ಳುತ್ತಾರೆ. ಇದರಿಂದಾಗಿ ಉತ್ತರ ಮತ್ತು ದಕ್ಷಿಣ ನದಿಜೋಡಣೆಗಳ ಭಾರತದ ಕನಸು ಕನಸಾಗಿಯೇ ಉಳಿಯಬೇಕಾಗುತ್ತದೆ. ಅಷ್ಟಲ್ಲದೆ ಈಶಾನ್ಯ ರಾಜ್ಯಗಳಲ್ಲಿನ 50,000 ಮೆಗಾ ವ್ಯಾಟ್ (ಭಾರತದ ಜಲವಿದ್ಯುತ್ ಸಾಮರ್ಥ್ಯದಲ್ಲಿ ಶೇ.40ರಷ್ಟು) ವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಮಳೆಗಾಲದಲ್ಲಿ ಪ್ರವಾಹಗಳು ಹಾಗೂ ಬೇಸಿಗೆಯಲ್ಲಿ ನದಿ ತೀರದ ರಾಜ್ಯಗಳಿಗೆ ನೀರಿನ ಕೊರತೆ ಹಾಗೂ ನದಿಯ ಇಕ್ಕೆಲಗಳಲ್ಲಿ ಫಲವತ್ತಾದ ವಂಡು ಸಂಗ್ರಹವಾಗದೆ ತೊಂದರೆಯಾಗುತ್ತದೆ. ಅದು ಬಾಂಗ್ಲಾದ ಭೌಗೋಳಿಕ ಆಕಾರವನ್ನೇ ಬದಲಿಸುವುದಲ್ಲದೆ ವಿನಾಶದ ಅಂಚಿನಲ್ಲಿರುವ ಭಾರತದ ಹುಲಿಗೆ ಕೊನೆಯ ಆಸರೆಯಾಗಿರುವ ವಿಶ್ವ ವಿಖ್ಯಾತ ಮೀಸಲು ಅರಣ್ಯವಾದ ಸುಂದರ್ ಬನ್ ಅರಣ್ಯವನ್ನೂ ನಾಶಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಶತಮಾನಗಳಿಂದ ಈ ನದಿಯನ್ನು ನಂಬಿಕೊಂಡಿರುವ ಭಾರತದ ಮತ್ತು ಬಾಂಗ್ಲಾದೇಶದ 500 ದಶಲಕ್ಷ ಜನರ ಜೀವನೋಪಾಯವನ್ನೇ ನಾಶಮಾಡಿಬಿಡುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದು ಅಂತರರಾಷ್ಟ್ರೀಯ ಜಲ ಒಪ್ಪಂದವಿದೆ. ಆದರೆ ಚೀನಾದೊಂದಿಗೆ ಯಾವುದೇ ಅಂತಹ ಒಪ್ಪಂದವಿಲ್ಲ. ಪ್ರವಾಹಗಳ ಮುನ್ಸೂಚನೆಗಾಗಿ ಚೀನಾದಲ್ಲಿನ ಬ್ರಹ್ಮಪುತ್ರ ಜಲಾನಯನ ಪ್ರದೇಶಗಳಲ್ಲಿ ಬೀಳುವ ಮಳೆಯ ಬಗೆಗಿನ ಮಾಹಿತಿ ವಿನಿಮಯಕ್ಕಾಗಿ ಮಾತ್ರ ಒಪ್ಪಂದದ ದಸ್ತಾವೇಜನ್ನು ಮಾಡಿಕೊಂಡಿದೆ.

ಅಂತರರಾಷ್ಟ್ರೀಯ ತಕರಾರುಗಳಿಗೆ ಪರಿಹಾರವೇನು?
ಹರಿವ ನೀರಿನ ಜಲಯಾನೇತರ ಬಳಕೆಯ ಅಂತರ ರಾಷ್ಟ್ರೀಯ ಕಾನೂನು ಕೆಳಗಿನ ನದಿತೀರದ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ. ಅನುಚ್ಛೇದ 5 ಮತ್ತು 6 ಸಮಾನಾಂತರ ಮತ್ತು ಸರಿಯಾದ ಬಳಕೆಯ ಬಗೆಗೆ ತಿಳಿಸಿದರೆ ಅನುಚ್ಛೇದ 32 ತಾರತಮ್ಯ ಮಾಡದಿರುವುದರ ಬಗೆಗೆ ತಿಳಿಸುತ್ತದೆ. ಅನುಚ್ಛೇದ 7, 8, ಮತ್ತು 9 ಕೆಳಗಿನ ನದಿ ಮುಖಜ ದೇಶಗಳಿಗೆ ಯಾವುದೇ ಗಮನಾರ್ಹ ತೊಂದರೆಯುಂಟು ಮಾಡದಂತೆ, ಸಹಕಾರ ನೀಸುವುದರ ಮೂಲಕ ಮತ್ತು ಮಾಹಿತಿಯನ್ನು ಹಂಚಿಕೊಳ್ಳಬೇಕೆಂಬ ನಿಯಮದ ಬಗ್ಗೆ ತಿಳಿಸುತ್ತದೆ. ಹಾಗಾಗಿ ಭಾರತ ಮತ್ತು ಬಾಂಗ್ಲಾ ದೇಶದೊಂದಿಗೆ ಚೀನಾ ಸಹಕರಿಸಿ ಮಾಹಿತಿಯನ್ನು ನೀಡಬೇಕು. ಆದರೂ ಅದರ ಕಾನೂನುಗಳಡಿ ಅದರ ಗಡಿಯೊಳಗಿನ ನದಿಗಳ ನೀರನ್ನು ಅದು ಬಳಸಿಕೊಳ್ಳಬಹುದು. ಗಂಗಾ ನದಿ ಬಾಂಗ್ಲಾಕ್ಕೆ ಹರಿಯುವ ಹಾದಿಯಲ್ಲಿ ಭಾರತ 1960ರಲ್ಲಿ ಫರಕ್ಕಾ ಅಣೆಕಟ್ಟನ್ನು ಕಟ್ಟಿರುವಂತೆ ಚೀನಾ ಸಹ ಮಾಡಬಹುದು. ತನ್ನ ಸರಿಯಾದ ಪಾಲಿನ ನೀರನ್ನು ಪಡೆಯಲು ಬಾಂಗ್ಲಾ ಭಾರತದೊಂದಿಗೆ 36 ವರ್ಷಗಳ ಕಾನೂನು ಸಮರ ಹಾಗೂ ಅಂತರರಾಷ್ಟ್ರೀಯ ಒತ್ತಡ ತರಬೇಕಾಯಿತು. ನೀರು ಭವಿಷ್ಯದ ನೀಲ ಬಂಗಾರವಾಗಿದೆ ಹಾಗೂ ಆ ಸಿರಿಗಾಗಿ ಭವಿಷ್ಯದಲ್ಲಿ ಹಲವಾರ ಅಂತರರಾಷ್ಟ್ರೀಯ ಸಂಘರ್ಷಗಳು ಹಾಗೂ ದೀರ್ಘ ಕಾನೂನು ಸಮರಗಳು ನಡೆಯಬೇಕಾಗುತ್ತವೆ. ಹಾಗಾಗಿ ಚೀನಾ ತನ್ನ ಪ್ರಾಯೋಜನೆಯನ್ನು ಅನುಷ್ಠಾನಗೊಳಿಸುವ ಮೊದಲು ಭಾರತ ಮತ್ತು ಬಾಂಗ್ಲಾದೇಶದ ಆತಂಕಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗಿದೆ. ಇನ್ನೂ ಉತ್ತಮವಾದುದೆಂದರೆ ಈ ಮೂರು ದೇಶಗಳು ಸೇರಿ ಸಹಕರಿಸಿ ಒಂದು ಜಂಟಿ ಪ್ರಾಯೋಜನೆಯನ್ನು ಸಿದ್ಧಗೊಳಿಸುವುದಾದಲ್ಲಿ ಅದು ಮೂರೂ ರಾಷ್ಟ್ರಗಳಿಗೆ ನೀರು ಹಾಗೂ ವಿದ್ಯುತ್ತನ್ನು ಒದಗಿಸಲು ಸಹಕಾರಿಯಾಗುತ್ತದೆ. ಜಾಗತಿಕ ತಾಪಮಾನ ಏರಿಕೆ ಹಾಗೂ ಆಹಾರ ಅಸುರಕ್ಷತೆಯ ಈ ದಿನಗಳಲ್ಲಿ ಹಿರಿಯಣ್ಣನಾಗಿರುವ ಚೀನಾ ಮನುಕುಲದ ಒಳಿತಿಗಾಗಿ ಅಂತಹ ಸಹಕಾರಕ್ಕೆ ಮುಂದಾಗಬೇಕೇ ಹೊರತು ನೆರೆಹೊರೆಯ ರಾಷ್ಟ್ರಗಳೊಂದಿಗೆ ಸಂಘರ್ಷಕ್ಕಿಳಿಯಬಾರದು. ಅದೇ ರೀತಿ ಭಾರತ ಸಹ ತನ್ನ ನದಿಜೋಡಣೆಯ ಪ್ರಾಯೋಜನೆಗಳಲ್ಲಿ ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳನ್ನು ತನ್ನ ಗಮನದಲ್ಲಿರಿಸಿಕೊಳ್ಳಬೇಕು.

ಇದರಿಂದ ನಮಗೆ ದೊರೆಯುವ ಸಂದೇಶವೇನು?
ಇಲ್ಲಿ ಭಾರತ ಮತ್ತು ಚೀನಾದ ದೃಷ್ಟಿಕೋನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಚೀನಾ ನದಿಜೋಡಣೆ ಹಾಗೂ ವಿದ್ಯುತ್ ಉತ್ಪಾದನೆಗಾಗಿ ಅಣುಸ್ಫೋಟಕಗಳನ್ನು ಬಳಸಲೂ ಹಿಂಜರಿಯುವುದಿಲ್ಲ. ಆದರೆ ಭಾರತದಲ್ಲಿ ಬ್ರಿಟಿಷರ ಆಡಳಿತದಲ್ಲಿ ರೂಪುಗೊಂಡ ನದಿಜೋಡಣೆಯ ಪರಿಕಲ್ಪನೆಯ ಕಡತಗಳು ಭಾರತದ ನೀರಾವರಿಯ ಇಲಾಖೆಯಲ್ಲಿ ಧೂಳು ಹಿಡಿಯುತ್ತಿವೆ. ನಮ್ಮ ರಾಜಕರಣಿಗಳಿಗೆ ಚೀನೀ ನಾಯಕರಂತಹ ದೃಢ ಸಂಕಲ್ಪವಿರಬೇಕು. ಕಳೆದ ವರ್ಷ ಚೀನಾಕ್ಕೆ ಭೇಟಿ ನೀಡಿದ ನಮ್ಮ ಶಾಸಕರು ಚೀನಿಯರ ಸಾಧನೆಗಳನ್ನು ನಕಲು ಮಾಡಲು ಪ್ರಯತ್ನಿಸುತ್ತಾರೆಂದು ನಾನು ನಂಬಿದ್ದೇನೆ. ಉತ್ತದಲ್ಲಿರುವ ಬೀಜಿಂಗ್ ಮತ್ತು ಶಾಂಘಾಯ್‌ಗೆ ನೀರೊದಗಿಸಲು ಅವರು ನಾಲ್ಕು ಲಕ್ಷ ಕೋಟಿ ಹಣ ಖರ್ಚು ಮಾಡಲು ಅವರು ಸಿದ್ಧರಿರುವಾಗ ನಾವು ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಿಗೆ ಕೇವಲ 15000 ಕೋಟಿ ಖರ್ಚುಮಾಡಿ ನೀರೊದಗಿಸಲು ನಮಗೆ ಸಾಧ್ಯವಿಲ್ಲವೆ? ನೇತ್ರಾವತಿಯ ನೀರನ್ನು ಗುರುತ್ವಾಕರ್ಷಣೆಯ ಮೂಲಕವೇ ತರುವ ಪರಮಶಿವಯ್ಯನವರ ಪ್ರಾಯೋಜನೆಯನ್ನು ಪರೀಕ್ಷಿಸಿ ಸಾಧ್ಯವಿದ್ದಲ್ಲಿ ಅದನ್ನು ಅಳವಡಿಸಬೇಕು. ಬೆಂಗಳೂರಿಗೆ ನೇತ್ರಾವತಿಯ ನೀರನ್ನು ತರುವಲ್ಲಿ ಯಾವುದೇ ಅಂತರರಾಜ್ಯ ತಕರಾರುಗಳಿಲ್ಲ. ಪ್ರತಿವರ್ಷ ನೇತ್ರಾವತಿ ಮತ್ತು ಕುಮಾರಧಾರ ನದಿಗಳಿಂದ 2200 ಟಿ.ಎಂ.ಸಿ.ಗೂ ಹೆಚ್ಚು ನೀರು ಅರಬ್ಬಿ ಸಮುದ್ರ ಸೇರುತ್ತಿದೆ. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ನೇತ್ರಾವತಿಯನ್ನು ಇತ್ತ ಕಡೆಗೆ ಹರಿಸಲು ಮೊದಲಿನಿಂದಲೂ ವಿರೋಧಿಸುತ್ತಿದ್ದಾರೆ. ಧರ್ಮಸ್ಥಳಕ್ಕೆ ಭೇಟಿನೀಡುವ ಭಕ್ತಾದಿಗಳು ಬಹುಪಾಲು ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳವರೇ ಆಗಿದ್ದಾರೆ. ಅವರ ಟ್ರಸ್ಟ್‌ನ ಬಹುಪಾಲು ಅದಾಯ ಇಡೀ ರಾಜ್ಯದ ಭಕ್ತಾದಿಗಳಿಂದ ಬರುತ್ತಿದೆ. ಹಾಗಿರುವಾಗ ಅವರು ರಾಜ್ಯದ ಇತರ ಜಿಲ್ಲೆಗಳ ಸಮಸ್ಯೆಯನ್ನೂ ಅವರು ಗಮನದಲ್ಲಿರಿಸಿಕೊಳ್ಳಬೇಕು.
ನಮ್ಮ ಮಣ್ಣಿನ ಮಗ ಮತ್ತು ಮಾಜಿ ಪ್ರಧಾನಿ ಶ್ರೀ ದೇವೇಗೌಡರು ಹಾಸನ ಮತ್ತು ಹೇಮಾವತಿಯ ಪರಿಧಿಯ ಆಚೆಗೂ ಆಲೋಚಿಸಬೇಕಾಗಿದೆ. ಅವರು ಅಮರಣಾಂತ ಉಪವಾಸ ಮಾಡಿ ಹಲವು ದಶಕಗಳೇ ಆಗಿದೆ. ಅದಕ್ಕೆ ಅವರ ಆರೋಗ್ಯ ಅನುಮತಿಸದಿದ್ದಲ್ಲಿ ಮಣ್ಣಿನ ಮೊಮ್ಮಗನಾಗಿರುವ ಶ್ರೀ ಕುಮಾರಸ್ವಾಮಿಯವರು ಮುಂದೆ ಬರಬೇಕಾಗಿದೆ. ಅವರಿಗಂತೂ ಅವಕಾಶಗಳೇ ಇದ್ದವು ಆದರೆ ಅವರ ದೃಷ್ಠಿಗೆ ದುರಾಸೆ ಅಡ್ಡವಾಗಿತ್ತು. ಸಿದ್ಧರಾಮಯ್ಯನವರು ವರಣಾ ನಾಲೆಯ ಹೊರಗೆ ಆಲೋಚಿಸುವವರಲ್ಲ. ಯೆಡ್ಯೂರಪ್ಪನವರಂತೂ ಅವರ ಬೆಂಬಲಿಗ ಶಾಸಕರ ಲೆಕ್ಕಾಚಾರದ ಗಣಿತದಲ್ಲೇ ಮುಳುಗಿದ್ದಾರೆ. ಯಾವ ಪಕ್ಷವೂ ತಮ್ಮ ಪ್ರಣಾಲಿಕೆಯಲ್ಲಿ ಪರಮಶಿವಯ್ಯನವರ ವರದಿಯನ್ನು ಸೇರಿಸಲು ತಯಾರಿಲ್ಲ. ಮೊಯ್ಲಿಯವರು ತಾವು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಬರಪೀಡಿತ ಜಿಲ್ಲೆಗಳಿಗೆ ನೀರು ಒದಗಿಸುವುದಾಗಿ ಹೇಳಿದ್ದರು. ಕಾವೇರಿ ವಿವಾದ ಬರೆಹರಿಸುವಲ್ಲಿ ವಿಫಲರಾದ ಎಸ್.ಎಂ.ಕೃಷ್ಣಾರವರು ಚೀನಾ ಮತ್ತು ಪಾಕಿಸ್ತಾನಗಳ ತಕರಾರುಗಳೊಂದಿಗೆ ಹೆಣಗಾಡುತ್ತಿದ್ದಾರೆ. ತೆಲಂಗಾಣ ಚಳುವಳಿಯಂತೆಯೇ 71 ಬರಪೀಡಿತ ತಾಲ್ಲೂಕುಗಳ ಜನ ಭುಗಿಲೇಳದಿದ್ದಲ್ಲಿ ಅವರಿಗೆ ನ್ಯಾಯ ಸಿಗುವುದು ಮರಿಚೀಕೆಯೇ ಸರಿ.
-ಡಾ. ಮಧು ಸೀತಪ್ಪ
ಸಂಯುಕ್ತ ಕರ್ನಾಟಕ, 19-12-09